ಹೆಮ್ಮೆಯ ಬಾದಾಮಿ ಚಾಲುಕ್ಯರು








ಬಾದಾಮಿ ಚಾಲುಕ್ಯರು

ಬಾದಾಮಿ : ನಾಮ ವಿವೇಚನೆ
ಶಾಸನಗಳಲ್ಲಿ ಊರ ಹೆಸರು ವಾತಾಪಿ, ಬಾದಾಮಿ ಎಂಬ ರೂಪಗಳಲ್ಲಿವೆ. ಬಾದಾಮಿಯ ಉಲ್ಲೇಖವು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಟೊಲೆಮಿ (ಸುಮಾರು ಕ್ರಿ.. ೧೫೦) ಬರೆದ A guide to geography ಎಂಬ ಪುಸ್ತಕದಲ್ಲಿ. ಆತ ಹೆಸರಿಸಿದ ದಕ್ಷಿಣ ಭಾರತದ ನಗರಗಳಲ್ಲಿ ಬದಿಯಮಯೋಯ್ (Badiamaioi) ಒಂದಾಗಿದೆ. ಇಂದಿನ ಬಾದಾಮಿಯೇ ಟೊಲೆಮಿ ಪ್ರಸ್ತಾಪಿಸಿದ ಬದಿಯಮಯೋಯ್ ಎಂದು ಮಕ್ರಿಂಡಲ್ ಅವರು ಗುರುತಿಸಿದ್ದಾರೆ.

[1] ಇದರಿಂದ ಕ್ರಿ.. ೨ನೆಯ ಶತಮಾನದ ಮಧ್ಯದಲ್ಲಿ ಊರಿನ ಹೆಸರು ಬಾದಾಮಿ ಎಂದಿತ್ತೆಂದು ತಿಳಿಯುತ್ತದೆ ಮತ್ತು ಪುರಾಣ ಹಿನ್ನೆಲೆಯುಳ್ಳ ಊರು ಅಷ್ಟು ಹೊತ್ತಿಗೆ ನಗರವಾಗಿ ಬೆಳೆದಿತ್ತೆಂದು ತಿಳಿಯಬೇಕಾಗುತ್ತದೆ. ಊರು ವಾತಾಪಿ ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಒಂದನೆಯ ಪೊಲೆಕೇಶಿಯ ಶಕ ವರ್ಷ ೪೬೫(ಕ್ರಿ.. ೫೪೩) ಸಂಸ್ಕೃತ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ.[2] ಚಲುಕ್ಯರು ಕನ್ನಡಿಗರೇ ಆಗಿದ್ದರು. ಆಡುಭಾಷೆ ಕನ್ನಡವಾಗಿತ್ತು ಮತ್ತು ಪಂಡಿತರ ಭಾಷೆ ಸಂಸ್ಕೃತವಾಗಿತ್ತು. ಆದ್ದರಿಂದ ಶಾಸನವನ್ನು ರಚಿಸುವಾಗ ಬಾದಾಮಿ ಬದಲು ವಾತಾಪಿ ಎಂಬ ಸಂಸ್ಕೃತದ ರೂಪವನ್ನು ಬಳಸಿದ್ದಾರೆ. ವಾತಾಪಿ ಎಂಬ ಹೆಸರಿನಲ್ಲಿ ಊರು ಚಲುಕ್ಯರ ಕಾಲದಲ್ಲಿ ಮಾತ್ರ ನಿರ್ದೇಶಿತವಾಗಿದೆ. ಚಲುಕ್ಯರ ಪೂರ್ವ ಹಾಗೂ ಚಲುಕ್ಯೋತ್ತರ ಕಾಲದಲ್ಲಿ ಬಾದಾವಿ ಎಂದು ಕರೆಯಲ್ಪಟ್ಟಿದೆ. ಇನ್ನೂ ಒಂದು ಗಮನಾರ್ಹ ಸಂಗತಿ ಎಂದರೆ ರಾಜಕೀಯ ಮಹತ್ವವಿಲ್ಲದ - ಶತಮಾನದವುಗಳೆಂದು ಹೇಳಲಾದ ಬಿಡಿ, ಪುಟ್ಟ ಶಿಲಾಲೇಖಗಳಲ್ಲಿ ಬಾದಾವಿ ಎಂದು ನಿರ್ದೇಶಿಸಲಾಗಿದೆ.[3] ಇದರಿಂದ ಹೆಸರೇ ಬಳಕೆಯಲ್ಲಿತ್ತೆಂದು ಸ್ಪಷ್ಟವಾಗುತ್ತದೆ.
ಬಾದಾಮಿ ಮತ್ತು ಮಲಪ್ರಭಾ ನದಿಯ ನಡುವಿನ ಬಯಲಿನಲ್ಲಿ ಬನಶಂಕರಿ ಕ್ಷೇತ್ರವಿದೆ. ಕ್ಷೇತ್ರವು ಸ್ಕಂದ ಪುರಾಣದಲ್ಲಿ ವರ್ಣಿತವಾಗಿದೆ.[4] ಅಪ್ರಕಟಿತ ಶ್ರೀ ಬನಶಂಕರಿ ಮಹಾತ್ಮೆ ಎಂಬ ಸ್ಥಳ ಪುರಾಣದಲ್ಲಿ ಬನಶಂಕರಿ ಕ್ಷೇತ್ರ ಮತ್ತು ಹರಿದ್ರಾ ತೀರ್ಥದ ವರ್ಣನೆ ಇದೆ.[5]  ಪುರಾಣದಲ್ಲಿ ಅಗಸ್ತ್ಯನು ಶ್ರೀ ಬನದೇವಿಯನ್ನು ಪೂಜಿಸಿದರೆಂದು ಹೇಳಲಾಗಿದೆ.[6] ಇದರಿಂದ ಪ್ರಾಚೀನ ಕಾಲದಿಂದಲೂ ಬನಶಂಕರಿ ಕ್ಷೇತ್ರದಲ್ಲಿ ಬನದೇವಿಯ ಪೂಜೆ ನಡೆಯುತ್ತಿರಬಹುದೆಂದು ತೋರುತ್ತದೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಹೆಸರುಗಳಿಂದ ವನದೇವತೆಯು ಪೂಜಿತಳಾಗಿ ಗ್ರಾಮದೇವತೆಯಾದ ಬನದಮ್ಮಳಿಂದಾಗಿ ಊರಿಗೆ ಬಾದಾಮಿ ಎಂಬ ಹೆಸರು ಬಂದಿರಬಹುದೆಂದು ತಿಳಿಯಲಾಗಿದೆ.
ಭೂಸ್ಥಿತಿಯ ಮೇಲಿಂದ ಊರುಗಳಿಗೆ ಹೆಸರು ಕೊಡುವ ಪದ್ಧತಿಯನ್ನು ಇತಿಹಾಸದ ಮೊದಲ ಘಟ್ಟದಲ್ಲಿ ಕಾಣುತ್ತೇವೆ. ಬಾದಾಮಿಯಲ್ಲಿ ಅತ್ಯಂತ ಆಕರ್ಷಕವಾದ ನೈಸರ್ಗಿಕ ದೃಶ್ಯವೆಂದರೆ ಮೂರು ದಿಕ್ಕುಗಳಲ್ಲಿ ಕಲ್ಬೆಟ್ಟಗಳಿಂದ ಆವೃತವಾದ ಭೂಪ್ರದೇಶ. ಪ್ರದೇಶದಲ್ಲಿ ಚಲುಕ್ಯರು ಅಗಸ್ತ್ಯತೀರ್ಥ ಎಂಬ ಕೆರೆಯನ್ನು ಕಟ್ಟುವ ಮುನ್ನವೂ ಇಲ್ಲಿ ತೊರೆ ಇದ್ದಿತು.
ಚಲುಕ್ಯರು ಕೆರೆ ಕಟ್ಟುವ ಮೊದಲು ಜಲಾನಯನ ಪ್ರದೇಶದಲ್ಲಿ ಬಾವಿ ಇದ್ದಿರಬೇಕು. ಹಳ್ಳದ ದಂಡೆಯ ಮೇಲೆ ಬಾವಿಯನ್ನು ತೋಡುವುದು ಸಾಮಾನ್ಯ. ಜನಪದರು ಅಗಸ್ತ್ಯ ತೀರ್ಥದಲ್ಲಿ ಹನ್ನೆರಡು ಬಾವಿಗಳಿವೆ ಎಂದು ಹೇಳುತ್ತಾರೆ. ಬದುವು ಎಂದರೆ ಎತ್ತರವಾದ ದಿನ್ನೆ ಎಂದರ್ಥ. ಅಚ್ಚ ಕನ್ನಡದ ಪದವನ್ನು ಹಳ್ಳಿಗರು ಈಗಲೂ ಬಳಸುತ್ತಾರೆ. ಬದುವಿನಲ್ಲಿಯ ಬಾವಿಯನ್ನು ಜನಪದರು ಬದುವಿನ ಬಾವಿ, ಬದುಬಾವಿ ಎಂದು ಕರೆದಿದ್ದರೆ ಅಸಹಜವೇನಲ್ಲ. ಪ್ರಸಿದ್ಧವಾಗಿದ್ದಿರಬಹುದಾದ ಶಾಸನಗಳಲ್ಲಿ ಊರಿನ ಹೆಸರು ಬಾದಾವಿ ಎಂಬ ಹೆಸರು ಬಂದಿರಬಹುದು. ಶಾಸನಗಳಲ್ಲಿ ಊರಿನ ಹೆಸರು ಬಾದಾವಿ ಎಂದೇ ಇದೆ. ಹಳ್ಳಿಗರ ಬಾಯಲ್ಲಿ ಕೂಡ ಇಂದಿಗೂ ಅದು ಬಾದಾವಿಯೇ ಆಗಿದೆ.
ವಾತಾಪಿ
ವಾತಾಪಿ ಕತೆಯು ಮೊದಲು ಕಥಿತವಾದದ್ದು ವಾಲ್ಮೀಕಿ ರಾಮಾಯಣದಲ್ಲಿ. ಮಹಾಭಾರತ ಹಾಗೂ ಪುರಾಣಗಳಲ್ಲಿ ಕತೆ ಮತ್ತೆ ಕಾಣಿಸಿಕೊಂಡಿದೆ.[7] ಸ್ಥಳ  ಪುರಾಣವಾದ ಶ್ರೀ ಮಹಾಕೂಟೇಶ್ವರ ಪುರಾಣದಲ್ಲಿ ವಾತಾಪಿ ಇಲ್ವಲರ ಕತೆಯನ್ನು ಹೀಗೆ ಹೇಳಲಾಗಿದೆ.[8] ವಾತಾಪಿ ಇಲ್ವಲರೆಂಬ ರಾಕ್ಷಸ ಸಹೋದರರು ಲೋಕಕಂಟಕರಾದ್ದರಿಂದ ಇಂದ್ರಾದಿ ದೇವತೆಗಳು ರಕ್ಷಣೆ ಕೋರಿ ಬ್ರಹ್ಮದೇವನಿಗೆ ಮೊರೆ ಹೋಗುತ್ತಾರೆ. ಬ್ರಹ್ಮನು ಕಾಶಿಯಲ್ಲಿರುವ ಅಗಸ್ತ್ಯನನ್ನು ಮಹಾಕೂಟಕ್ಕೆ ಕರೆದೊಯ್ಯಲು ಸೂಚಿಸುತ್ತಾನೆ. ದೇವತೆಗಳು ಕಾಶಿಗೆ ಬಂದು ಅಗಸ್ತ್ಯನಲ್ಲಿ ವಿನಂತಿಸುತ್ತಾರೆ. ಮುನಿಯು ಅವರ ವಿನಂತಿಯನ್ನು ಮನ್ನಿಸಿ ಮಹಾಕೂಟದತ್ತ ಸಾಗುತ್ತಾನೆ.
ಮಹಾಕೂಟವು ವಾತಾಪಿ ಇಲ್ವಲರ ವಾಸಸ್ಥಳ. ಅವರು ಬ್ರಾಹ್ಮಣರ ವೇಷದಲ್ಲಿ ಅಗಸ್ತ್ಯನನ್ನು ಭೇಟಿಯಾಗಿ ಎಂದಿನಂತೆ ಶ್ರಾದ್ಧದ ಊಟಕ್ಕೆ ಬರಬೇಕೆಂದು ಬಿನ್ನವಿಸುತ್ತಾರೆ. ವಾಡಿಕೆಯಂತೆ ಇಲ್ವಲನು ವಾತಾಪಿಯನ್ನು ಕೊಂದು ಮಾಂಸದ ಅಡಿಗೆಯನ್ನು ಅಗಸ್ತ್ಯನಿಗೆ ಉಣಬಡಿಸುತ್ತಾನೆ. ಅಗಸ್ತ್ಯನು ಒಳಗಣ್ಣಿನಿಂದ ಎಲ್ಲವನ್ನೂ ತಿಳಿಯುತ್ತಾನೆ. ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಊಟ ಮಾಡುತ್ತಾನೆ. ಅನಂತರ ಇಲ್ವಲನು ವಾತಾಪಿ ಹೊರಗೆ ಬಾ ಎಂದು ಕೂಗುತ್ತಾನೆ. ಅಗಸ್ತ್ಯನು ಸಿಟ್ಟಿಗೆದ್ದು ನಿನ್ನ ವಾತಾಪಿ ನನ್ನ ಜಠರಾಗ್ನಿಯಲ್ಲಿ ಸುಟ್ಟು ಹೋಗಿದ್ದಾನೆ ಎಂದು ಹೇಳುತ್ತಾನೆ. ಇಲ್ವಲನು ಈಟಿಯಿಂದ ಅಗಸ್ತ್ಯನನ್ನು ಇರಿಯಲು ಹೋಗುತ್ತಾನೆ. ಅಗಸ್ತ್ಯನ ಒದೆತಕ್ಕೆ ಉರುಳುತ್ತಾನೆ. ಮತ್ತೆ ಏಳುವಷ್ಟರಲ್ಲಿ, ಅಗಸ್ತ್ಯನ ಕೋಪಾಗ್ನಿಯ ಜ್ವಾಲೆಯಲ್ಲಿ ಬೆಂದು ಹೋಗುತ್ತಾನೆ. ವಾತಾಪಿ ಇಲ್ವಲರು ದುಷ್ಟರಾಗಿದ್ದರೂ ಮಹಾಕೂಟ ಕ್ಷೇತ್ರದಲ್ಲಿ ಮರಣ ಹೊಂದಿದ್ದರಿಂದ ಶಂಕರನು ಅವರಿಬ್ಬರಿಗೂ ಸದ್ಗತಿಯನ್ನು ನೀಡುತ್ತಾನೆ. ಸ್ಥಳ ಪುರಾಣದ ಮುಖ್ಯ ಉದ್ದೇಶವು ಮಹಾಕೂಟ ಕ್ಷೇತ್ರದ  ಮಹಿಮೆಯನ್ನು ಬಣ್ಣಿಸುವುದೇ ಆಗಿದೆ.
ಬಹುಶಃ ಕನ್ನಡ ವೀರನೊಬ್ಬನು ಬಾದಾಮಿಯಲ್ಲಿ ವಾಸವಾಗಿದ್ದನೆಂದೂ ಅಗಸ್ತ್ಯನು ದಕ್ಷಿಣಯಾತ್ರೆಯಲ್ಲಿ ಅವನನ್ನು ವಶೀಕರಿಸಿ ಆರ್ಯದೀಕ್ಷೆಯನ್ನು ಕೊಟ್ಟನೆಂಬ ಧ್ವನಿ ಹೊರಡುತ್ತದೆ[9] ಎಂಬ ರಂ.ಶ್ರೀ. ಮುಗಳಿಯವರ ವಿಚಾರವು ಸ್ವಾಗತಾರ್ಹವೆನಿಸುತ್ತದೆ.
ಭೌಗೋಳಿಕ ನೆಲೆ
ಒಂದು ಜನಾಂಗದ ಸಂಸ್ಕೃತಿಯು ಅದು ನೆಲೆವೂರಿದ ಭೌಗೋಳಿಕ ಪರಿಸರವನ್ನು ಅವಲಂಬಿಸಿರುತ್ತದೆ. ಇತಿಹಾಸಕ್ಕೆ ಭೂಗೋಳವೇ ನೆಲೆ ಆದ್ದರಿಂದ ಬಾದಾಮಿಯ ಭೌಗೋಳಿಕ ಪರಿಸರವನ್ನು ಮೊದಲು ಗಮನಿಸೋಣ.
ಬಾದಾಮಿ (೧೫-೫೫ ಉತ್ತರ, ೭೫-೪೧ ಪೂರ್ವ) ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ತಾಲೂಕಾ ಕೇಂದ್ರ. ಭೌಗೋಳಿಕವಾಗಿ ಬಾದಾಮಿ ಪರಿಸರವು ಕಲಾದಗಿ ವರ್ಗದ  ಬಂಡೆಗಲ್ಲುಗಳಿಂದ ಆವೃತ್ತವಾಗಿದೆ. ಇವು ಕ್ವಾರ್ಟಜೈಟ್ ಉಸುಕುಕಲ್ಲು, ಕಾಂಗ್ಲೋಮರೇಟ್, ಸುಣ್ಣದಕಲ್ಲು, ಜೇಡಿಯ ಚಿಪ್ಪುಕಲ್ಲು(Shale)ಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬಾದಾಮಿಯಲ್ಲಿ ವಿಶೇಷವಾಗಿ ಕಂಡುಬರುವ ಶಿಲಾಪ್ರಕಾರಗಳೆಂದರೆ ಕ್ವಾರ್ಟಜೈಟ್ ಹಾಗೂ ಉಸುಕು ಕಲ್ಲುಗಳು.
ಬಾದಾಮಿ ಪರಿಸರದ ಕ್ವಾರ್ಟಜೈಟ್ ಹಾಗೂ ಉಸುಕುಕಲ್ಲುಗಳು ಕಲಾದಗಿ ವರ್ಗದ ಶಿಲೆಗಳಿಗಿಂತ ಭಿನ್ನವಾದುದನ್ನು ಗಮನಿಸಿ ಅವನ್ನು ಕಲಾದಗಿ ವರ್ಗದಿಂದ ಬೇರ್ಪಡಿಸಿ ಬಾದಾಮಿ ವರ್ಗ ಎಂಬ ಗುಂಪಿಗೆ ವಿಶ್ವನಾಥಯ್ಯ ಸೇರಿಸುತ್ತಾರೆ.[10] ಜಯ ಪ್ರಕಾಶ ಮತ್ತು ಇತರರು.[11] ಕಲಾದಗಿ ವರ್ಗವನ್ನು ಕಲಾದಗಿ ಉಚ್ಚವರ್ಗ (Kaladagi Super Group) ವೆಂದು ಪುನರ್ನಾಮಕರಣ ಮಾಡುತ್ತಾರೆ. ಬಾದಾಮಿ ಶಿಲಾವರ್ಗವು ಕಲಾದಗಿ ಶಿಲಾವರ್ಗದ ಮೇಲೆ ಹೊಂದಿಕೊಳ್ಳದೆ ಒರಗಿದೆ. ಬೆಣಚುಗಲ್ಲು ಕೆಂಪು ಬಣ್ಣದ್ದಾಗಿದ್ದು ಇದು ವರ್ಗದ ಒಂದು ಮುಖ್ಯ ಅಂಶವಾಗಿದೆ. ಬಾದಾಮಿ ವರ್ಗದ ಶಿಲೆಗಳು ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪೂರ್ವದಲ್ಲಿ ಹನುಮಸಾಗರದ ಬಳಿಯಿಂದ ಗಜೇಂದ್ರಗಡ ಮತ್ತು ಐಹೊಳೆಯಿಂದ ಹಿಡಿದು ಪಶ್ಚಿಮದಲ್ಲಿ ರಾಮದುರ್ಗ ಮತ್ತು ಗೋಕಾಕದವರೆಗೆ ಚಾಚಿಕೊಂಡಿವೆ.[12] ಕಲಾದಗಿ ವರ್ಗದ ಶಿಲೆಗಳಿಗಿಂತ ಕಿರಿಯ ವಯಸ್ಸಿನ ಬಾದಾಮಿ ವರ್ಗದ ಶಿಲೆಗಳು ಸಮಾಂತರ ಹಾಸುಗಳುಳ್ಳ (horizontally bedded) ಉಸುಕು ಕಲ್ಲುಗಳು. ಬಾದಾಮಿಯ ಬಂಡೆಗಳಲ್ಲಿ ಅನೇಕ ಕಲ್ಲಾಸರೆಗಳು ಸ್ವಾಭಾವಿಕ ಗುಹೆಗಳು ಸೃಷ್ಟಿಗೊಂಡಿವೆ. ಇವು ಶಿಲಾಯುಗದ ಮಾನವನ ಚಟುವಟಿಕೆಗಳಿಗೆ ಉತ್ತಮ ಸ್ಥಳಗಳಾದವು. ಶಿಲ್ಪನಿರ್ಮಾಣಕ್ಕೆ ಇವು ತುಂಬಾ ಯೋಗ್ಯವಾದುದರಿಂದ ಇತಿಹಾಸಕಾಲದ ಶಿಲ್ಪಿಗಳನ್ನು ಆಕರ್ಷಿಸಿದವು. ಬಾದಾಮಿ ಹಾಗೂ ಐಹೊಳೆ ಜಗತ್ಪ್ರಸಿದ್ಧ ಗುಹಾಲಯಗಳು ಕೊರೆಯಲ್ಪಟ್ಟಿದ್ದು ಶಿಲೆಗಳಲ್ಲಿಯೆ.
ಬಾದಾಮಿ ಸುತ್ತ ಹಾಗೂ ಉತ್ತರದ ಕಡೆಗೆ ಕೆಂಪು ಮಣ್ಣು ಪಸರಿಸಿದೆ. ಇದು ಉಸುಕು ಮಣ್ಣು. ಬಾದಾಮಿಯ ದಕ್ಷಿಣಕ್ಕೆ ಶಿವುಪುರ ಗ್ರಾಮದ ಹತ್ತಿರ ಸರಸ್ವತಿ ಹಳ್ಳದ ದಂಡೆಯ ಮೇಲೆ ಉದರಪಾದಿ ಚಿಪ್ಪು(gastropod Shell)ಗಳು ದೊರೆಯುತ್ತವೆ.[13] ಸರಸ್ವತಿ ಹಳ್ಳವು ಮಲಪ್ರಭೆಯನ್ನು ಸೇರುವ ಪ್ರದೇಶದಲ್ಲಿ ಬನಶಂಕರಿಯ ಹತ್ತಿರ ಸರಂಧ್ರ ಸುಣ್ಣಕಲ್ಲು (calcareoustufa) ಹರಡಿದೆ.[14] ಮತ್ತು ಭಾಗಶಃ ಸರಂಧ್ರೀಯ ಕೆಂಪು ಮಣ್ಣಿ(Laterite) ನಿಂದ ಕೂಡಿದೆ. ಇದು ಸುಮಾರು . ಕಿ.ಮೀ. ವಿಸ್ತೀರ್ಣವುಳ್ಳದ್ದು, ಮಲಪ್ರಭಾ ನದಿಯ ಉತ್ತರ ದಂಡೆಯ ಮೇಲೆ ಕೆಂಪು (ಕಂದು) ಮಣ್ಣು ಕಂಡುಬಂದರೆ ದಕ್ಷಿಣ ದಂಡೆಯ ಮೇಲೆ ಕಪ್ಪು ಮಣ್ಣು ಕಾಣಸಿಗುತ್ತದೆ. ಕಪ್ಪು ಮಣ್ಣು ಭಾಗಶಃ ನದಿಯ ಮತ್ತು ಅದರ ಹಳ್ಳಗಳ ರೇವೆ ಮಣ್ಣು. ಪೂರ್ವ ಕಾಲದಲ್ಲಿ ಪ್ರದೇಶವು ದಟ್ಟಕಾಡಿನಿಂದ ಕೂಡಿತ್ತು. ಮಣ್ಣು ಕಪ್ಪಾಗಿರಲು ಇದೇ ಕಾರಣ.[15]
ಬಾದಾಮಿಯ ಪ್ರದೇಶವು ಮಾನ್ಸೂನ್ ಹವಾಮಾನ ಕ್ಷೇತ್ರದಲ್ಲಿ ಬರುತ್ತಿದ್ದರೂ ಮಳೆಯ ಪ್ರಮಾಣ ಕಡಿಮೆ. ವಾರ್ಷಿಕ ಮಳೆಯ ಸರಾಸರಿ ೫೦ ಸೆ.ಮೀ.ದಿಂದ ೭೦ ಸೆಂ.ಮೀ. ಆದ್ದರಿಂದ ಅರೆ ಒಣಹವೆಯ ಪ್ರದೇಶವೆಂದು ಕರೆಯಬಹುದು.
ಕುಡಿಯಲು ನದಿ ನೀರು, ತಿನ್ನಲು ಗಡ್ಡೆ ಗೆಣಸುಗಳು, ಪ್ರಾಣಿಗಳು, ಅಸರೆಗಾಗಿ ನೈಸರ್ಗಿಕ ಗುಹೆಗಳು, ಬಯಲು ಜೀವನಕ್ಕೆ ಅನುಕೂಲಕರ ಹವಾಮಾನ  ಇವುಗಳನ್ನು ಶಿಲಾಯುಗದ ಮಾನವನಿಗೆ ನೆಲೆಸಲು ತಕ್ಕ ವಾತಾವರಣವನ್ನು ನೀಡಿದವು. ಮಲಪ್ರಭೆಯ ಬಯಲು ಸಂಸ್ಕೃತಿಯ ತೊಟ್ಟಿಲಾಯಿತು.
ಪ್ರಾಗೈತಿಹಾಸಿಕ ಸಂಸ್ಕೃತಿಗಳು
ಪ್ರಾಗಿತಿಹಾಸ ಕಾಲವು ಶಿಲಾಯುಗದ ಕಾಲ. ಅದನ್ನು . ಹಳೆಯ ಶಿಲಾಯುಗ . ಸೂಕ್ಷ್ಮಶಿಲಾಯುಗ . ನವಶಿಲಾಯುಗ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಬಾದಾಮಿ ಪ್ರದೇಶದಲ್ಲಿ ಮೂರು ಬಗೆಯ ಸಂಸ್ಕೃತಿಗಳು ನೆಲೆಗೊಂಡದ್ದು ತಿಳಿದುಬರುತ್ತದೆ.
ಹಳೆಯ ಶಿಲಾಯುಗ
ಹಳೆ ಶಿಲಾಯುಗದ ಸಂಸ್ಕೃತಿಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. . ಆದಿ ಹಳೆ ಶಿಲಾಯುಗದ ಸಂಸ್ಕೃತಿ, . ಮಧ್ಯ ಹಳೆ ಶಿಲಾಯುಗದ ಸಂಸ್ಕೃತಿ, . ಅಂತ್ಯ ಶಿಲಾಯುಗ ಸಂಸ್ಕೃತಿ ಮಾನವನು ಉಪಯೋಗಿಸಿದ ಉಪಕರಣಗಳನ್ನು ಅವುಗಳ ಪ್ರಕಾರಗಳನ್ನು, ಅವನ್ನು ಸಿದ್ಧಮಾಡಲು ಅನುಸರಿಸಿದ ತಂತ್ರಗಳನ್ನು ಮತ್ತು ಕಾಲಾನುಕ್ರಮವನ್ನು ಆಧರಿಸಿ ವರ್ಗೀಕರಣವನ್ನು ಮಾಡಲಾಗಿದೆ. ಉಪಕರಣಗಳು ಮಾನವನ ಜೀವನ ವಿಕಾಸವನ್ನು ಪ್ರತಿನಿಧಿಸುತ್ತವೆ.
. ಆದಿ ಹಳೆಶಿಲಾಯುಗದ ಸಂಸ್ಕೃತಿ
೧೮೭೩ರಲ್ಲಿ ರಾಬರ್ಟ್ ಬ್ರೂಸ್ ಫೂಟ್ ಅವರು ಬಾದಾಮಿ ಸಮೀಪ ಮಲಪ್ರಭಾ ನದಿ ಪಾತ್ರದಲ್ಲಿ ಢಾಣಕಶಿರೂರು, ಖ್ಯಾಡ, ಮೆಣಸಗಿ ಮೊದಲಾದ ಗ್ರಾಮಗಳ ಹತ್ತಿರ ಆದಿ ಹಳೆ ಶಿಲಾಯುಗದ ಉಪಕರಣಗಳನ್ನು ಶೋಧಿಸಿದರು. ನಂತರ ಆರ್.ವ್ಹಿ.ಜೋಶಿ (೧೯೫೬) ಅವರು ನದಿ ಬಯಲಿನ ಹಿರೆಮುಲಂಗಿ, ಆಲೂರು(ತಳಕವಾಡ), ಮಣ್ಣೇರಿ, ಢಾಣಕಶಿರೂರ, ತಮಿನಹಾಳ, ಹೊಳೆ ಆಲೂರು, ಮೊದಲಾದವುಗಳಲ್ಲಿ ಕಾಲದ ಮಾನವನ ಉಪಕರಣಗಳನ್ನು ಸಂಗ್ರಹಿಸಿದರು. ಎಂ.ಎನ್.ದೇಶಪಾಂಡೆ ಮತ್ತು .ಸುಂದರ (೧೯೭೭) ಅವರು ನಂದಿಕೇಶ್ವರ, ಭದ್ರನಾಯಕನ ಜಾಲಿಹಾಳ ಮತ್ತು ಐಹೊಳೆಗಳಲ್ಲಿ ಶಿಲಾಯುಧಗಳನ್ನು ಶೋಧಿಸಿದರು.[16] ಬಾದಾಮಿಯ ಸಿಡಿಲಫಡಿ[17] ಮತ್ತು ಪಟ್ಟದಕಲ್ಲು[18] ಆದಿ ಹಳೆಯ ಶಿಲಾಯುಗದ ನೆಲೆಗಳಾಗಿದ್ದವೆಂಬುದು ತಿಳಿದುಬಂದಿದೆ. ಶ್ರೀನಿವಾಸ ಪಾಡಿಗಾರ ಅವರು ಬಾದಾಮಿಯ ಸಾಬರಫಡಿಯ ಹತ್ತಿರ ಆದಿ ಹಳೆ ಶಿಲಾಯುಗದ ಕೈಕೊಡಲಿ, ಮಚ್ಚುಗಳನ್ನು ಶೋಧಿಸಿದವರು. ಇದರಿಂದ ಬಾದಾಮಿ ಸುತ್ತಮುತ್ತಲಿನ ಪರಿಸರವೆಲ್ಲ ಆದಿ ಹಳೆಯ ಶಿಲಾಯುಗದ ಸಂಸ್ಕೃತಿಯ ನೆಲೆಯಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಮಲಪ್ರಭೆಯ ಬಯಲಿನ ಉಪಕರಣಗಳು ಹೆಚ್ಚಾಗಿ ಫ್ರಾನ್ಸ್ ದೇಶದ ಸೋನ್ ನದಿಯ ಸೇಂಟ್ ಅಶೂಲದಲ್ಲಿಯ ಆಯುಧಗಳನ್ನು ಹೋಲುತ್ತವೆ. ಆದ್ದರಿಂದ ಇಲ್ಲಿಯ ಆಯುಧ ಕೈಗಾರಿಕಾ ತಂತ್ರವನ್ನು ಅಶೂಲಿಯನ್ ತಂತ್ರವೆಂದು ಕರೆಯಲಾಗಿದೆ. ಪ್ರದೇಶದ ಆದಿ ಮಾನವನು ಕ್ಲ್ಯಾಕ್ಟೋನಿಯನ್ ತಂತ್ರವನ್ನೂ ಕೂಡ ಬಳಸಿರುವುದು ತಿಳಿದುಬಂದಿದೆ.
. ಮಧ್ಯ ಹಳೆಶಿಲಾಯುಗ ಸಂಸ್ಕೃತಿ
ಬಾದಾಮಿ ಹತ್ತಿರ ಮಲಪ್ರಭಾ ನದಿ ಬಯಲಿನ ತಮಿನಹಾಳದಲ್ಲಿ ಮಧ್ಯ ಹಳೆಶಿಲಾಯುಗದ ನೆಲೆಯಿದೆ. ಇಲ್ಲಿ ಕೂಡ ಹಳ್ಳದ ದಂಡೆಯ ಕೆಳ ಪದರದಲ್ಲಿ ಆದಿ ಹಳೆಶಿಲಾಯುಗ ಅವಶೇಷಗಳು ಮತ್ತು ಮೇಲ್ಪದರದಲ್ಲಿ ಮಧ್ಯ ಹಳೆಶಿಲಾಯುಗದ ಉಪಕರಣಗಳು ದೊರೆತವು.[19] ಕೆಲವು ವರ್ಷಗಳ ಹಿಂದೆ ಬಾದಾಮಿಯಲ್ಲಿ ಇಂತಹ ಶಿಲಾಯುಧಗಳು ಸಿಕ್ಕವು.[20] ಬಾಗಲಕೋಟ ಜಿಲ್ಲಾ ಪ್ರದೇಶದಲ್ಲಿ ಶೋಧಿಸಲಾದ ಹಲವಾರು ಪೂರ್ವಭಾವಿ ಇತಿಹಾಸ ನೆಲೆಗಳಲ್ಲಿ ಬಾದಾಮಿಯ ಸಿಡಿಲಫಡಿಯೂ ಒಂದು.[21]
ಬಾದಾಮಿಯಲ್ಲಿ ಸಾಬರ ಫಡಿಯ ಹಿಂಭಾಗದಲ್ಲಿ ಕ್ವಾರ್ಟಜೈಟ್ ಶಿಲೆಯ ಕಾಲದ ಉಪಕರಣಗಳು ದೊರೆತಿವೆ. ಬಾದಾಮಿ ಹಾಗೂ ಸಿಡಿಲಫಡಿ ನದಿಯ ದಂಡೆಯ ಪ್ರದೇಶದಿಂದ ದೂರದ ಬಯಲಿನಲ್ಲಿವೆ. ಇಲ್ಲಿ ಮಧ್ಯ ಹಳೆಶಿಲಾಯುಗದ ನೆಲೆಗಳು ಇದ್ದುದ್ದು ಮಾನವನು ಭಿನ್ನ ವಾತಾವರಣದಲ್ಲಿ ಜೀವಿಸುವ ಸಾಮರ್ಥ್ಯವನ್ನು ಪಡೆದದ್ದನ್ನು ಸೂಚಿಸುತ್ತದೆ.
. ಅಂತ್ಯ ಹಳೆಶಿಲಾಯುಗ
ಮಧ್ಯ ಹಳೆಶಿಲಾಯುಗ ಮತ್ತು ಮಧ್ಯ ಶಿಲಾಯುಗ ಇವುಗಳ ಮಧ್ಯದ ಅವದಿ ಇದು. ಬಾದಾಮಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಕೆಲವು ಗವಿವರ್ಣ ಚಿತ್ರಗಳು ಪ್ರಾಯಶಃ ಕಾಲದ್ದಾಗಿರಬಹುದೆಂಬ ಶಂಕೆ ಇದೆ.[22]
ಸೂಕ್ಷ್ಮ ಶಿಲಾಯುಗ
ಸೂಕ್ಷ್ಮ ಶಿಲಾಯುಗವು ಬೇಟೆಯಾಡುವ ಮತ್ತು ಆಹಾರ ಸಂಗ್ರಹ ಮಾಡುವ ಜೀವನ ವಿಧಾನದಿಂದ ಆಹಾರ ಬೆಳೆಯುವ ಸಂಸ್ಕೃತಿಯ ಮಧ್ಯಂತರ ಪರ್ವಕಾಲವಾಗಿದೆ.
ಬಾದಾಮಿಯ ಹತ್ತಿರದ ಸಿಡಿಲಫಡಿಯಲ್ಲಿ .ಸುಂದರ ಅವರು ಸಂಸ್ಕೃತಿಯ ಉಪಕರಣಗಳನ್ನು ಶೋಧಿಸಿದರು.[23] ಬಾದಾಮಿಯಲ್ಲಿಯ ಬಂಡೆಗಳ ಗುಹೆಗಳು ಸೂಕ್ಷ್ಮ ಶಿಲಾಯುಗದ ಜನರಿಗೆ ವಾಸಸ್ಥಳಗಳಾಗಿದ್ದವು.[24] ರವಿ ಕೋರಿಶೆಟ್ಟರ ಮತ್ತು ಮೈಕೆಲ್ ಪೆಟ್ರಾಗ್ಲಿಯಾ ಅವರು ಬಾದಾಮಿಯ ಕಲ್ಲಾಸರೆಯ ಹತ್ತಿರ, ಗುಡ್ಡದ ಅಡಿಯಲ್ಲಿ, ದಿನ್ನೆಯ ಮೇಲಿನ ಬಯಲಿನಲ್ಲಿ ಕಾಲದ ಶಿಲಾ ಉಪಕರಣಗಳನ್ನು ಕಂಡುಹಿಡಿದರು.[25]  ಪ್ರಬಂಧಕಾರನ ಕ್ಷೇತ್ರಕಾರ್ಯದಲ್ಲಿ ಬಾದಾಮಿಯ ರಂಗನಾಥಗುಡ್ಡದ ಹತ್ತಿರ ಕಾಲದ ಉಪಕರಣಗಳು ದೊರೆತಿವೆ. ಸ್ಥಳೀಯವಾಗಿ ಲಭ್ಯವಿರುವ ಮುದ್ದೆಗಟ್ಟು ಶಿಲೆ(conglomerate) ಗಳಲ್ಲಿ ಬಂಧಿತವಾದ ಕ್ವಾರ್ಟ್ಜ್, ಚರ್ಟ್ ಮತ್ತು ಅಗೇಟ್ ತುಂಡುಗಳಿಂದ ಉಪಕರಣಗಳನ್ನು ರಚಿಸಲಾಗಿದೆ. ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಯ ಕಲಾತ್ಮಕ ಅಭಿವ್ಯಕ್ತಿಯನ್ನು ಕೂಡ ಬಾದಾಮಿಯ ಕಲ್ಲಾಸರೆಗಳಲ್ಲಿ ಕಾಣಬಹುದು. ಚಿತ್ರಗಳು ಕೆಮ್ಮಣ್ಣಿನ ಬಣ್ಣ ಮತ್ತು ಸುಣ್ಣದಂತಹ ಬಿಳಿಯ ಬಣ್ಣದಲ್ಲೂ ಇವೆ.[26] ಇತ್ತೀಚೆಗೆ ಎರ್ವಿನ್ ನ್ಯೂಮೇಯರ್ ಅವರು ರಂಗನಾಥ ಗುಡ್ಡದ ಬೃಹದಾಕಾರದ ಬಂಡೆಯ ಮೇಲೆ ಕೆಮ್ಮಣ್ಣಿನ ಬಣ್ಣದ ಚಿತ್ರಗಳನ್ನು ಶೋಧಿಸಿದ್ದಾರೆ.[27] ಒಟ್ಟಿನಲ್ಲಿ ಸೂಕ್ಷ್ಮ ಆಯುಧಗಳನ್ನು ತಯಾರಿಸುವಲ್ಲಿ ಕಾಲದ ಮಾನವನ ನೈಪುಣ್ಯವನ್ನು, ಆಯುಧಗಳನ್ನು ಬಗೆ ಬಗೆಯಾಗಿ ಬಳಸುವಲ್ಲಿ ಆತನ ಬೌದ್ದಿಕ ವಿಕಾಸವನ್ನು, ಚಿತ್ರಕಲೆಯ ಅಭಿವ್ಯಕ್ತಿಯಲ್ಲಿ ಆತನ ಭಾವನಾತ್ಮಕ ಬೆಳವಣಿಗೆಯನ್ನು ಗುರುತಿಸಬಹುದು. ಚಿತ್ರಕಲೆ ಕುರಿತಾದ ಅಧ್ಯಾಯದಲ್ಲಿ ಹೆಚ್ಚಿನ ವಿವರಗಳನ್ನು ಚರ್ಚಿಸಲಾಗಿದೆ.
ನವಶಿಲಾಯುಗ
ನವಶಿಲಾಯುಗದ ಮಾನವ ತನ್ನ ಕಲಾ ಪ್ರಜ್ಞೆಯನ್ನು ವ್ಯಕ್ತಪಡಿಸಿದ್ದಾನೆ. ಉಪಯುಕ್ತತೆಗಾಗಿ ತಾನು ನಿರ್ಮಿಸಿದ ಮಣ್ಣಿನ ಪಾತ್ರೆಗಳಿಗೆ ಕಲೆಯ ಸಂಸ್ಕಾರ ನೀಡಿದನು. ಪಾತ್ರೆಗಳ ಮೇಲೆ ಬಗೆ ಬಗೆಯ ಜ್ಯಾಮಿತಿ ರೇಖಾ ಚಿತ್ರಗಳನ್ನು ಮೂಡಿಸಿದನು. ಇಂತಹ ರೇಖಾಚಿತ್ರಗಳುಳ್ಳ ಮಣ್ಣಿನ ಪಾತ್ರೆಗಳ ಚೂರುಗಳು ಮಲಪ್ರಭಾ ಪ್ರದೇಶದಲ್ಲಿವೆ.[28]  ಕಾಲದ ಜನರು ದೇಹಾಲಂಕಾರಕ್ಕಾಗಿ ಜಾಸ್ಪರ್. ಅಗೇಟ್, ಜಾತಿಯ ಶಿಲಾಮಣಿಗಳ ಸರವನ್ನು ಧರಿಸುತ್ತಿದ್ದರು. ಪ್ರದೇಶದಲ್ಲಿ ಆರ್.ಎಸ್.ಪಂಚಮುಖಿ ಅವರು ಶಂಖದ ಆಭರಣಗಳನ್ನು ಸಂಗ್ರಹಿಸಿದ್ದಾರೆ.[29] ಬಾದಾಮಿ, ಹೊಸ ಮಹಾಕೂಟ ಐಹೊಳೆಗಳ ಬಂಡೆಗಲ್ಲುಗಳ ಮೇಲೆ ಕೆಮ್ಮಣ್ಣಿನ ಬಣ್ಣದ ವಿವಿಧ ಪ್ರಾಣಿ ಹಾಗೂ ಮನುಷ್ಯರ ರೇಖಾಚಿತ್ರಗಳಿವೆ. ಚಿತ್ರಗಳು ನವಶಿಲಾಯುಗದ ಮಾನವನ ಕಲಾಪ್ರಿಯತೆಯ ದ್ಯೋತಕ. ಇವುಗಳಲ್ಲಿ ಕೆಲವು ಕಾಲದ ಧಾರ್ಮಿಕ ಜೀವನ ಇಲ್ಲವೆ ಹಬ್ಬದ ಆಚರಣೆಗೆ ಸಂಬಂಧಿಸಿದವುಗಳಾಗಿವೆ.
ಬೃಹತ್ ಶಿಲಾಯುಗ
ಬಾದಾಮಿ ಹತ್ತಿರ ಪಟ್ಟದಕಲ್ಲ, ಅಕ್ಕರಗಲ್ಲ, ಐಹೊಳೆ ಸಿದ್ಧನಕೊಳ್ಳ, ಕ್ಯಾದಿಗೇರಿ, ಮತ್ತು ಚಿಲಾಪುರಗಳಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ಕಲ್ಗೋರಿಗಳಿವೆ. ಕಲ್ಗೋರಿಗಳನ್ನು ಕಟ್ಟಲು ಸಂಸ್ಕೃತಿಯ ಜನರು ಕಲ್ಬೆಟ್ಟದ ಪ್ರದೇಶವನ್ನು ಆಯ್ಕೆ ಮಾಡಿದುದು ಸಹಜವೇ ಆಗಿದೆ. ಬೃಹದಾಕಾರದ ಬಂಡೆಗಳನ್ನು ಕೊರೆದು ತೆಗೆಯುವಲ್ಲಿ, ಅವನ್ನು ನಿರ್ದಿಷ್ಟ ಸ್ಥಳಕ್ಕೆ ಸಾಗಿಸುವಲ್ಲಿ, ವಿವಿಧ ಪ್ರಕಾರದ ಕಲ್ಗೋರಿಗಳನ್ನು ನಿರ್ಮಿಸುವಲ್ಲಿ ಕುಶಲತೆಯನ್ನು ತೋರಿದ್ದಾರೆ.
ಬಾದಾಮಿ ಪ್ರದೇಶದ ಬೃಹತ್ ಶಿಲಾ ಸಂಸ್ಕೃತಿಯ ಜನರು ತೋರಿದ ವಾಸ್ತು ವೈವಿಧ್ಯವನ್ನು ಹೀಗೆ ಗುರುತಿಸಬಹುದು . ಹಾದಿಕೋಣೆ ಗೋರಿಗಳು . ಕಿಂಡಿ ಕೋಣೆ ಗೋರಿಗಳು . ವರ್ತುಳ ಕಲ್ಗುಪ್ಪೆಗಳು ಮತ್ತು . ಗುಂಡಿ ವೃತ್ತಗಳು.
ಐಹೊಳೆ ಬೃಹತ್ ಶಿಲಾ ಸಂಸ್ಕೃತಿಯ ಮಹತ್ವದ ನೆಲೆಯಾಗಿದೆ. ಇಲ್ಲಿಯ ಸುಪ್ರಸಿದ್ಧ ಮೇಗುತಿ ಪೂರ್ವಕ್ಕಿರುವ ಗುಡ್ಡದ ಮೇಲಿನ ವಿಶಾಲ ಬಯಲಿನಲ್ಲಿ ಸುಮಾರು ಒಂದು ಹೆಕ್ಟೇರಿನಷ್ಟು ಕ್ಷೇತ್ರದಲ್ಲಿ ಸುಮಾರು ೪೫ ಕಲ್ಗೋರಿಗಳನ್ನು ಗುರುತಿಸಲಾಗಿದೆ. ಇವು ಕಿಂಡಿ ಕೋಣೆ ಗೋರಿಗಳಾಗಿವೆ. ಅದರಾಚೆ ಮುಂದೆ ಸಾಗುವಳಿ ಮಾಡಿದ ಕ್ಯಾದಿಗೇರಿ ಗ್ರಾಮದ ಸೀಮೆಗೆ ಸೇರಿದ ಹೊಲಗಳಲ್ಲಿ ಹಾದಿ ಕೋಣೆ ಗೋರಿಗಳೂ ಮತ್ತು ವರ್ತುಲ ಕಲ್ಗುಪ್ಪೆಗಳಿವೆ. ಒಂದೇ ನೆಲೆಯಲ್ಲಿ ಹೀಗೆ ವಿಭಿನ್ನ ಬಗೆಯ ಕಲ್ಗೋರಿಗಳು ನಿರ್ಮಿತವಾಗಿರುವುದೊಂದು ಮಹತ್ವದ ಸಂಗತಿಯಾಗಿದೆ. ಸುಮಾರು ಅರವತ್ತು ಹಾದಿ ಕೋಣೆ ಗೋರಿಗಳು ಮತ್ತು ಮೂರು ವರ್ತುಲ ಕಲ್ಗುಪ್ಪೆಗಳು ಇಲ್ಲಿವೆ(.ಸುಂದರ). ಬೆಟ್ಟದ ಮೇಲೆ ಮೇಗುತಿ ಹತ್ತಿರದ ಬಯಲಿನಲ್ಲಿ ಕಿಂಡಿ ಕೋಣೆ ಗೋರಿಗಳು, ಅದೇ ಬೆಟ್ಟದ ಅಂಚಿನ ಬಯಲಿನಲ್ಲಿ ಹಾದಿಕೋಣೆ ಗೋರಿಗಳು ಇದ್ದು ಎರಡೂ ಪ್ರಕಾರದ ಕಲ್ಗೋರಿಗಳು ಒಂದೇ ಸ್ಥಳದಲ್ಲಿ ದೊರೆತ ನೆಲೆ ಭಾರತದಲ್ಲಿ ಇದೊಂದೇ ಆಗಿದೆ.[30]  ಕಾರಣದಿಂದಾಗಿ ಇದು ಮಹತ್ವದ ತಾಣವೆನಿಸಿದೆ. ಐಹೊಳೆ ಮತ್ತು ಪಟ್ಟದಕಲ್ಲುಗಳ ಮಧ್ಯವರ್ತಿ ಜಾಗೆಯಾದ ಸಿದ್ಧನಕೊಳ್ಳದಲ್ಲಿ ಬೃಹತ್ ಶಿಲಾ ಸಮಾಧಿಗಳ ಇನ್ನೊಂದು ಗುಂಪು ಶೋಧವಾಗಿದೆ.[31]
ಪಟ್ಟದಕಲ್ಲಿನ ಹತ್ತಿರ ಬಾಚನಗುಡ್ಡದ ವ್ಯಾಪ್ತಿಯಲ್ಲಿ ಕಿಂಡಿ ಕೋಣೆಯ ಎರಡು ಕಲ್ಗೋರಿಗಳು ಮತ್ತು ಪಟ್ಟದಕಲ್ಲಿನ ಹತ್ತಿರ ಅಕ್ಕರಗಲ್ಲ ಸೀಮೆಗೆ ಸೇರಿದ ಬಯಲಿನಲ್ಲಿ ಇಪ್ಪತ್ತು ಕಲ್ಗೋರಿಗಳು ತುಂಬಾ ಹಾಳಾದ ಸ್ಥಿತಿಯಲ್ಲಿವೆ.[32] ಐಹೊಳೆ ಪ್ರದೇಶದ ಕಲ್ಗೋರಿಗಳುಗಷ್ಟು (sedimentary) ಕಲ್ಲುಗಳಿಂದ ನಿರ್ಮಿತವಾಗಿದ್ದರೆ ಪಟ್ಟದಕಲ್ಲು, ಅಕ್ಕರಗಲ್ಲಿನ ಕಲ್ಗೋರಿಗಳು ಗ್ರಾನೈಟ್ ಶಿಲೆಯಿಂದ ನಿರ್ಮಿತವಾಗಿದ್ದರೆ ಪಟ್ಟದಕಲ್ಲಿನ ಹತ್ತಿರ ಗಷ್ಟು ಕಲ್ಲಿನ ಆಕರವಿದ್ದರೂ ಗ್ರಾನೈಟ್ ಕಲ್ಲನ್ನು ಆಯ್ಕೆ ಮಾಡುವಲ್ಲಿ ಸಂಸ್ಕೃತಿಯ ಜನರು ವಿವಿಧತೆಯತ್ತ ಇದ್ದ ತಮ್ಮ ಮನೋವಿಲಾಸವನ್ನು ವ್ಯಕ್ತಪಡಿಸಿದ್ದಾರೆ.
ಚಲುಕ್ಯರ ಕಾಲದ ವಾಸ್ತುಕಲೆಯಲ್ಲಿ ಔತ್ತರೇಯ ಹಾಗೂ ದಾಕ್ಷಿಣಾತ್ಯ ವಾಸ್ತು ಶೈಲಿಗಳು ಬೆಸುಗೆಯನ್ನು ಹೊಂದಿದ ಸಂಗತಿ ಸರ್ವವಿದಿತವಾದುದು. ಬೃಹತ್ ಶಿಲಾಯುಗದಲ್ಲಿ ಪ್ರದೇಶದಲ್ಲಿ ಕಲ್ಗೋರಿಗಳ ಎರಡು ವಾಸ್ತು ಸಂಪ್ರದಾಯಗಳು ಮೇಳೈಸಿದುದು ಕಾಲದ ಜನರ ಪ್ರಯೋಗಶೀಲತೆಯ ಪ್ರತೀಕವಾಗಿದೆ. ಪ್ರಯೋಗಶೀಲತೆಯು ನೆಲದ ಗುಣವೆನಿಸಿದೆ. ಅದು ಸಾಂಸ್ಕೃತಿಕ ವಿಕಾಸಕ್ಕೆ ದಾರಿ ಮಾಡಿಕೊಟ್ಟಿತು.
ಇತಿಹಾಸ ಕಾಲದ ಸಂಸ್ಕೃತಿ
ಇತಿಹಾಸ ಪ್ರಾರಂಭ ಕಾಲದಲ್ಲಿ ಕರ್ನಾಟಕವು ಮೌರ್ಯರಾಜ್ಯಕ್ಕೆ ಸೇರಿತ್ತು. ಅಶೋಕನ ಮರಣಾನಂತರ ಸಾಮ್ರಾಜ್ಯವು ಒಡೆದು ಹೋಯಿತು. ಶಾತವಾಹನರು ದಕ್ಷಿಣ ಭಾರತದ ಒಡೆಯರಾದರು. ಬಾದಾಮಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಾತವಾಹನರಿಗೆ ಸಂಬಂಧಿಸಿದ ಸಾಂಸ್ಕೃತಿಕ ಅವಶೇಷಗಳು ದೊರೆತಿವೆ.
ಐಹೊಳೆಯ ಅಂಬಿಗೇರ ಗುಡಿಯ ಕೆಳಸ್ತರದಲ್ಲಿ ಶಾತವಾಹನರ ಕಾಲದ ಪಾತ್ರೆಗಳ ಚೂರುಗಳನ್ನು ಹಾಗೂ ಆಯತಾಕಾರ ತಲವಿನ್ಯಾಸ ಇಟ್ಟಿಗೆ ದೇವಾಲಯವನ್ನು ಶೋಧಿಸಿಲಾಗಿದೆ. ಪಟ್ಟದಕಲ್ಲಿನ ಸಂಗಮೇಶ್ವರ ಗುಡಿಯ ಮುಂದೆ ಕಂಬಗಳಿಂದ ಕೂಡಿದ ಇಟ್ಟಿಗೆಯ ಮಂಟಪ ಇದ್ದುದು ಉತ್ಖನನದಲ್ಲಿ  ಶೋಧವಾಯಿತು.[33]ಪಟ್ಟದಕಲ್ಲಿನ ಜೈನ ನಾರಾಯಣ ದೇವಾಲಯದ ಹಿಂಭಾಗದಲ್ಲಿ ಇಟ್ಟಿಗೆಯ ಜಿನಾಲಯ ಮತ್ತು ಖಡ್ಗಾಸನದಲ್ಲಿರುವ ತೀರ್ಥಂಕರ ಮೂರ್ತಿ ದೊರೆತಿವೆ.[34] ಇಲ್ಲಿಯ ಗಳಗನಾಥ ಗುಡಿಯಿಂದ ಸುಮಾರು ೨೦೦ ಮೀಟರುಗಳ ಅಂತರದಲ್ಲಿ ಶಾತವಾಹನರ ಕಾಲದ ಪಾತ್ರೆಗಳು ಸಿಕ್ಕಿವೆ.[35] ಐಹೊಳೆಯ ಹುಚ್ಚಪ್ಪಯ್ಯ ಮಠದ ಸಂಕೀರ್ಣದ ಅಗೆತದಲ್ಲಿ ಶಾತವಾಹನ ನಾಣ್ಯಗಳೂ, ಮಣ್ಣಿನ ಪಾತ್ರೆಯ ಚೂರುಗಳೂ ಕಂಡುಬಂದಿವೆ. ನಾಣ್ಯಗಳು ಮೂರನೆಯ ಶತಮಾನದವೆಂದೂ, ಮಣ್ಣಿನ ಪಾತ್ರೆಗಳನ್ನು ಆಧರಿಸಿ ಲಾಡಖಾನ ಗುಡಿಯ ತಳಪಾಯದ ಹತ್ತಿರ ಕಂಡುಬಂದ ಇಟ್ಟಿಗೆ ಗೋಡೆಯು ನಾಲ್ಕನೆಯ ಶತಮಾನದ್ದೆಂದೂ ಊಹಿಸಲಾಗಿದೆ. ಇದರಿಂದ ಐಹೊಳೆ ಮತ್ತು ಪಟ್ಟದಕಲ್ಲುಗಳು ಶಾತವಾಹನರ ಕಾಲದಿಂದಲೂ ದೇವಾಲಯಗಳ ಕೇಂದ್ರಗಳಾಗಿದ್ದುದು ತಿಳಿದುಬರುತ್ತವೆ. ಮೊದಮೊದಲು ವಾಸ್ತು ರಚನೆಗೆ ಇಟ್ಟಿಗೆಗಳನ್ನು ಆನಂತರ ಕಲ್ಲನ್ನು ಮಾಧ್ಯಮವಾಗಿ ಬಳಸಿದುದು ತಿಳಿದುಬರುತ್ತದೆ.
ಅತಿ ಪ್ರಾಚೀನ ಚಲುಕ್ಯ ದೇವಾಲಯಗಳು ಕದಂಬರ ವಾಸ್ತು ರಚನೆಗಳನ್ನು ಅನುಸರಿಸಿರಬಹುದಾಗಿದೆ. ಮೊದಲಿನ ಇಟ್ಟಿಗೆ ರಚನೆಗಳ ಮೇಲೆ  ಅಥವಾ ಅವುಗಳ ಹತ್ತಿರ ಕಲ್ಲಿನ ಗುಡಿಗಳನ್ನು ಕಟ್ಟಿಸಿದುದು ಚಲುಕ್ಯರ ವಿಶೇಷತೆ. ಪೂರ್ವದಲ್ಲಿ ಇದ್ದಿರಬಹುದಾದ ಕದಂಬರ ವಾಸ್ತುರಚನೆಗಳು ಇಂದು ಸಿಗದೆ ಇರುವುದಕ್ಕೆ ಅದೇ ಸ್ಥಳಗಳನ್ನು ಕಟ್ಟಡ ನಿರ್ಮಿಸಲು ಆಯ್ಕೆ ಮಾಡಿರುವುದೇ ಕಾರಣವೆನಿಸುತ್ತದೆ. ವೇಳೆಗಾಗಲೇ ಅವು ಪವಿತ್ರ ಸ್ಥಳಗಳೆಂದು ನಂಬಿದ್ದರಿಂದ ತಮ್ಮ ದೇವಾಲಯಗಳಿಗೆ ಅವೇ ಜಾಗೆಗಳನ್ನು ಬಳಸಿಕೊಂಡಿರಬಹುದು.
ಶಾತವಾಹನರ ವೇಳೆಗಾಗಲೆ ಇದು ವ್ಯಾಪಾರಿ ಕೇಂದ್ರವಾಗಿ, ನಗರವಾಗಿ ಪ್ರಸಿದ್ದಿ ಪಡೆದಿರಬೇಕು. ಅಂತೆಯೇ ಅದು ಟಾಲೆಮಿಯ (ಸು.ಕ್ರಿ.. ೧೫೦) A guide to geography ಕೃತಿಯಲ್ಲಿ ಉಲ್ಲೇಖಿತಗೊಂಡಿದೆ. ಚಲುಕ್ಯರ ಕಾಲದಲ್ಲಿ ಬಾದಾಮಿ ಕನ್ನಡ ಸಾಮ್ರಾಜ್ಯದ ಅಧಿಷ್ಠಾನವಾಗಿ ಬೆಳೆಯಿತು. ಚಲುಕ್ಯರಿಂದಾಗಿ ಅದು ಗಟ್ಟಿಯಾದ ಸಾಂಸ್ಕೃತಿಕ ನೆಲೆಗಟ್ಟನ್ನು ಪಡೆಯಿತು. ಇದರಿಂದಾಗಿ ಬಾದಾಮಿಯ ಬಗೆಗಿನ ಸಾಂಸ್ಕೃತಿಕ ಅಧ್ಯಯನವು ಪ್ರಧಾನವಾಗಿ ಚಲುಕ್ಯರ ಸಂಸ್ಕೃತಿಯ ಅಧ್ಯಯನವೇ ಆಗಿದೆ.

ಮಲಪ್ರಭೆಯ ಮಡಿಲು ದುರ್ಗಗುಡಿ, ಐಹೊಳೆ
ದುರ್ಗಗುಡಿ, ಐಹೊಳೆ
ಬಾದಾಮಿಯ ಜಂಬುಲಿಂಗ ದೇವಾಲಯವು ಮತ್ತೊಂದು ತೆರನಾದ ತಲವಿನ್ಯಾಸದಲ್ಲಿ ರಚಿತವಾಗಿದೆ. ಕ್ರಿ.. ೬೯೯ರಲ್ಲಿ ವಿನಯವತಿ ರಾಜಮಾತೆಯು ಇದನ್ನು ಕಟ್ಟಿಸಿದಳು. ಇಲ್ಲಿ ಬ್ರಹ್ಮ, ಈಶ್ವರ ಮತ್ತು ವಿಷ್ಣುದೇವರಿಗಾಗಿ ಮೂರು ಪ್ರತ್ಯೇಕ ಗರ್ಭಗುಡಿಗಳಿದ್ದು ದಕ್ಷಿಣ ಭಾರತದ ಪ್ರಥಮ ತ್ರಿಕೂಟಾಲಯವೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮೂರು ಗರ್ಭಗುಡಿಗಳಿಗೆ ಹೊಂದಿಕೊಂಡ ಸಭಾಮಂಟಪ ಮತ್ತು ಮುಖಮಂಟಪ ಇದರ ಉಳಿದ ಭಾಗಗಳು. ಹೆಚ್ಚು ವಿಕಾಸಗೊಡಿರುವ ಶೈವ ರಾಚನಿಕ ದೇವಾಲಯಗಳಲ್ಲಿ ಪ್ರತ್ಯೇಕ ನಂದಿ ಮಂಟಪಗಳಿವೆ. ಮಹಾಕೂಟ, ಪಟ್ಟದಕಲ್ಲಿನ ಪ್ರಧಾನ ದೇವಾಲಯಗಳಲ್ಲಿ ಇಂತಹ ನಂದಿ ಮಂಟಪಗಳನ್ನು ಕಾಣುತ್ತೇವೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವು ಭಾರತದ ಶ್ರೇಷ್ಠ ದೇವಾಲಯಗಳಲ್ಲಿ ಒಂದಾಗಿದೆ. ವಿಶಾಲವಾದ ಪ್ರಾಕಾರ, ರಕ್ಷಣಾಗೋಡೆ, ಅದಕ್ಕೆ ಹೊಂದಿಕೊಂಡ ಪರಿವಾರ ದೇವತೆಗಳ ಕೋಷ್ಠಗಳು, ದ್ವಾರಮಂಟಪ ಮೊದಲಾದ ವಾಸ್ತು ರಚನೆಗಳಿಂದ ಕೂಡಿದ ಗುಡಿಯ ತಲವಿನ್ಯಾಸವು ಅತ್ಯಂತ ಸಂಕೀರ್ಣ ಬಗೆಯದು.
ಚಾಲುಕ್ಯರ ರಾಚನಿಕ ಮಂದಿರಗಳ ಮತ್ತೊಂದು ವಾಸ್ತು ವಿಶೇಷವೆಂದರೆ ಎತ್ತರವಾದ ಅಧಿಷ್ಠಾನ. ಇದರ ಪ್ರಧಾನ ಭಾಗಗಳೆಂದರೆ ಉಪಾನ ಗಳ ಮತ್ತು ಕಪೋತ. ಮಹಾಕೂಟೇಶ್ವರ ದೇವಾಲಯದ ಅಧಿಷ್ಠಾನವು ಉಪಾನ, ಕಪೋತ, ಕುಮುದ, ವ್ಯಾಲಗಳ ಪಟ್ಟಿಕೆ ಮತ್ತು ಪುಟ್ಟಶಿಲ್ಪಗಳಿಂದ ಅಲಂಕೃತವಾದ ಗಳ ಎಂಬ ಭಾಗಗಳನ್ನೊಳಗೊಂಡು ಶ್ರೀಮಂತವಾಗಿದೆ.  ದುರ್ಗ  ದೇವಾಲಯದಲ್ಲಿ  ಎರಡು  ಅಧಿಷ್ಠಾನಗಳನ್ನು ಸಂಯೋಜಿಸಲಾಗಿದೆ.
ದೇವಾಲಯದ ಹೊರಗೋಡೆಗಳು ದೇವಕೋಷ್ಠಗಳಿಂದಾಗಿ ಹೆಚ್ಚು ಸುಂದರವಾಗಿವೆ. ಸಾಮಾನ್ಯವಾಗಿ ಮೂರು ಗೋಡೆಗಳ ಮೇಲೆ ಮೂರು ದೇವಕೋಷ್ಠಗಳಿರುವುದು ವಾಡಿಕೆ. ದುರ್ಗ ದೇವಾಲಯವು ಇಂತಹ ಹನ್ನೊಂದು ದೇವಕೋಷ್ಠಗಳನ್ನು ಹೊರಗೋಡೆಯಲ್ಲಿ ಹೊಂದಿದೆ.
ಜಾಲಂಧರಗಳು ವಾಸ್ತು ವಿಜ್ಞಾನದ ದೃಷ್ಟಿಯಿಂದ ಮಹತ್ವದ ಭಾಗಗಳು. ಇವು ಸಭಾಮಂಟಪದಲ್ಲಿ ನೆರೆದ ಜನರಿಗೆ ಗಾಳಿ, ಬೆಳಕನ್ನು ಒದಗಿಸುತ್ತವೆ. ರೂವಾರಿಗಳ ಕೌಶಲ್ಯದಿಂದಾಗಿ ಜಾಲಂಧರಗಳು ಕಲಾತ್ಮಕವಾಗಿ ರೂಪಗೊಂಡಿವೆ. ಇವು ಮಂದಿರದ ಸೌಂದರ್ಯವನ್ನು ಹೆಚ್ಚಿಸಿವೆ. ಇವುಗಳ ಆಕಾರ, ನಕ್ಷೆಗಳಲ್ಲಿ ವೈವಿಧ್ಯವನ್ನು ಕಾಣಬಹುದು. ಪಟ್ಟದಕಲ್ಲಿನ ವಿರೂಪಾಕ್ಷ, ಐಹೊಳೆಯ ಲಾಡಖಾನ ಗುಡಿಯ ಜಾಲಂಧ್ರಗಳು ಚಿತ್ತಾಕರ್ಷಕವಾಗಿವೆ.
ಚಾಲುಕ್ಯ ದೇವಾಲಯದ ಮಂಜೂರಿನ ಒಳಭಾಗದಲ್ಲಿ ಹಂಸಮಾಲೆಗಳ ಕೆತ್ತನೆ ಇರುವುದು ವಿಶೇಷ ಲಕ್ಷಣ. ಕಂಬಗಳು ಸಾಮಾನ್ಯವಾಗಿ ಚೌಕಾಕಾರವಾಗಿವೆ. ಕಂಬಗಳ ದಂಡ ಭಾಗವು ಸಾಮಾನ್ಯವಾಗಿ ಸಮಾಂತರ ಪಟ್ಟಿಕೆಗಳಿಂದ ಕೂಡಿರುತ್ತದೆ. ವಿಕಾಸಗೊಂಡ ದೇವಾಲಯದ ಕಂಬಗಳ ಬದಿಗಳಲ್ಲಿ ಮಧ್ಯಮ ಗಾತ್ರದ ಶಿಲ್ಪಗಳನ್ನು ಕಂಡರಿಸಲಾಗಿದೆ. ನಾಗನಾಥ ಗುಡಿಯ ಮುಖಮಂಟಪದ ಕಂಬಗಳಲ್ಲಿ ಮಿಥುನ ಶಿಲ್ಪಗಳಿವೆ. ಪಟ್ಟದಕಲ್ಲಿನ ಪ್ರಧಾನ ಗುಡಿಗಳ ಕಂಬಗಳಲ್ಲಿ ರಸಿಕ ದಂಪತಿಗಳು ಒಡಮೂಡಿದ್ದಾರೆ. ಚಾಲುಕ್ಯ ದೇವಾಲಯಗಳ ಕಂಬಗಳಿಗೆ ಬೋದುಗೆಗಳಿರುವುದು ಇನ್ನೊಂದು ವಿಶೇಷ ಲಕ್ಷಣವಾಗಿದೆ.
ದೇವಾಲಯಗಳ ಬಾಗಿಲುವಾಡಗಳು ಪಂಚಶಾಖೆಗಳಿಂದ ಅಲಂಕೃತವಾಗಿವೆ. ನದಿ ದೇವತೆಗಳಾದ ಗಂಗೆ, ಯಮುನೆಯರು ಬಾಗಿಲುವಾಡಗಳಲ್ಲಿರುವುದು ವಾಡಿಕೆ. ಮಿಥುನ ಶಿಲ್ಪಗಳನ್ನು ಕೂಡ ಕಾಣಬಹುದು.
ಇಳಿಜಾರಾದ ಮಾಳಿಗೆಗಳು ಚಾಲುಕ್ಯರ ರಾಚನಿಕ ಮಂದಿರಗಳ ವಾಸ್ತು ವಿಶೇಷತೆಯಾಗಿವೆ. ಸಭಾಮಂಟಪದಲ್ಲಿ ಮೂರು ಭಾಗಗಳಿದ್ದು ಮಧ್ಯದ ದೊಡ್ಡದಾದ ಭಾಗದ ಮಾಳಿಗೆಯು ನೆಲಕ್ಕೆ ಸಮಾಂತರವಾಗಿದ್ದು ಅದರ ಎಡ, ಬಲಗಳಲ್ಲಿಯ ಮಾಳಿಗೆಗಳು ಇಳಿಜಾರಾಗಿ ಇರುತ್ತವೆ. ದೇವಾಲಯವು ಸಾಂಧಾರವಾಗಿದ್ದರೆ ಪ್ರದಕ್ಷಿಣಾ ಪಥದ ಮೇಲಿನ ಮಾಳಿಗೆ ಕೂಡ ಇಳಿಜಾರಾಗಿ ಇರುತ್ತದೆ. ಸುತ್ತಲೂ ಇಂಥ ಮಾಳಿಗೆ ಇರುವ ಲಾಡಖಾನ ಗುಡಿಯು ಅತ್ಯಂತ ಆಕರ್ಷಕವಾಗಿದೆ.
ಚಾಲುಕ್ಯರ ರಾಚನಿಕ ಮಂದಿರಗಳ ಶಿಖರಗಳಲ್ಲಿ ಕಂಡುಬರುವ ವೈವಿಧ್ಯವು ಗಮನಾರ್ಹ ವಾಗಿದೆ. ಮುಖ್ಯವಾಗಿ ಮೂರು ಪ್ರಕಾರದ ಶಿಖರ ಶೈಲಿಗಳಲ್ಲಿ ಸ್ಥಪತಿಗಳು ತಮ್ಮ ವಾಸ್ತುವಿದ್ಯೆಯ ಚಾತುರ್ಯವನ್ನು ವ್ಯಕ್ತಪಡಿಸಿದ್ದಾರೆ. ಅವು . ದ್ರಾವಿಡ ವಿಮಾನ ಶೈಲಿ . ರೇಖಾನಾಗರ ಶಿಖರ ಶೈಲಿ . ಕದಂಬನಾಗರ (ವೇಸರ) ಶೈಲಿ.
. ದ್ರಾವಿಡ ವಿಮಾನ ಶೈಲಿ ದಕ್ಷಿಣ ಭಾರತದ ಶಿಖರ ಶೈಲಿ. ಶಿಖರದ ತಳಭಾಗವು ಚಚ್ಚೌಕವಾಗಿದ್ದು ಅದರ ಮೇಲ್ಭಾಗದ ಸ್ತೂಪಿಯು ಆರು ಇಲ್ಲವೆ ಎಂಟು ಬದಿಗಳನ್ನು ಹೊಂದಿದ್ದರೆ ಅದು ದ್ರಾವಿಡ ಶಿಖರವೆನಿಸುತ್ತದೆ. ಇಂತಹ ಶಿಖರಗಳಲ್ಲಿ ಮೆಟ್ಟಿಲುಗಳಂತೆ, ಮೇಲಕ್ಕೆ ಹೋದಂತೆ ಕ್ರಮೇಣ ಚಿಕ್ಕದಾಗುವ ಅಂತಸ್ತುಗಳಿರುತ್ತವೆ. ಶಿಲ್ಪ ಪಟ್ಟಿಕೆಗಳು ಭೂಮಿಗೆ ಸಮಾಂತರವಾಗಿರುತ್ತವೆ. ಮಹಾಕೂಟದ ಮಹಾಕೂಟೇಶ್ವರ, ಮಲ್ಲಿಕಾರ್ಜುನ ಗುಡಿ ಮತ್ತು ಬಾದಾಮಿಯ ಮಾಲೆಗಿತ್ತಿ ಶಿವಾಲಯಗಳು ಶೈಲಿಯಲ್ಲಿವೆ.
. ರೇಖಾನಾಗರ ಶಿಖರ ಶೈಲಿಯು ಔತ್ತರೇಯ ಶೈಲಿಯಾಗಿದ್ದು ಬಗೆಯ ಶಿಖರಗಳನ್ನು ಒರಿಸ್ಸಾ, ಉತ್ತರ ಪ್ರದೇಶ, ಬಿಹಾರಗಳಲ್ಲಿ ಕಾಣುತ್ತೇವೆ. ದೇವಾಲಯವು ಶಿಖರದ ತಳದಿಂದ ಸ್ತೂಪಿಯವರೆಗೆ ಚೌಕಾಕಾರವಾಗಿರುತ್ತದೆ. ಆಮಲಕವು ಶಿಖರದ ಆಕರ್ಷಣೀಯ ಭಾಗವಾಗಿರುತ್ತದೆ. ಮೇಲಕ್ಕೆ ಹೋದಂತೆ ಶಿಖರವು ಬಾಗಿರುವಂತೆ ತೋರುತ್ತದೆ. ಶಿಲ್ಪಪಟ್ಟಿಕೆಗಳು ಭೂಮಿಗೆ ಲಂಬವಾಗಿ ಚಾಚಿಕೊಂಡಿರುತ್ತವೆ. ಶಿಖರಕ್ಕೆ ಹೊಂದಿಕೊಂಡು ಸುಕನಾಸಿ ಎಂಬ ವಿಶೇಷ ಭಾಗವಿರುತ್ತದೆ. ಐಹೊಳೆಯ ಹುಚ್ಚಿ ಮಲ್ಲಿಗುಡಿ, ಪಟ್ಟದಕಲ್ಲಿನ ಗಳಗನಾಥ ಗುಡಿಗಳು ಬಗೆಯ ಶಿಖರಗಳನ್ನು ಪ್ರದರ್ಶಿಸುತ್ತವೆ.
. ಕದಂಬ ನಾಗರ ಶಿಖರವನ್ನು ವೇಸರ ಎಂದೂ, ಫಂಸನಾ ಎಂದೂ ಕರೆಯಲಾಗುತ್ತದೆ. ಮೆಟ್ಟಿಲುಗಳನ್ನು ಒಳಗೊಂಡು ಮೇಲಕ್ಕೆ ಹೋದಂತೆ ಚಿಕ್ಕದಾಗುವ, ಪಿರಾಮಿಡ್ಡನ್ನು ಹೋಲುವ ಶಿಖರ ಶೈಲಿ ಇದು. ಐಹೊಳೆಯ ಮಲ್ಲಿಕಾರ್ಜುನ ಗುಡಿ, ಮಹಾಕೂಟದ ಪುಟ್ಟಗುಡಿಗಳು ಬಗೆಯ ಶಿಖರಗಳಿಂದ ಶೋಭಿತವಾಗಿವೆ.
ಚಾಲುಕ್ಯ ಶಿಲ್ಪ ವೈಶಿಷ್ಟ್ಯಗಳು
ಭಾರತೀಯ ಕಲೆಯ ಯಾವ ಪ್ರಕಾರಕ್ಕೂ ಅಧ್ಯಾತ್ಮ ಅಥವಾ ಧರ್ಮವೇ ಕೇಂದ್ರಬಿಂದು. ಶಿಲ್ಪಕಲೆಗೂ ಅಷ್ಟೆ. ನಿರಾಕಾರನಾದ ದೇವನಿಗೆ ಒಂದು ರೂಪವನ್ನು ಕಲ್ಪಿಸಿ ಅದನ್ನು ಪೂಜೆ ಮಾಡತೊಡಗಲು ಶಿಲ್ಪಕಲೆಗೆ ದಾರಿಯಾಯಿತು. ಕರ್ನಾಟಕದಲ್ಲಿ ಕಲೆಯು ಬಹುದೊಡ್ಡ ಪ್ರಮಾಣದಲ್ಲಿ ಮೊದಲು ಕಾಣಿಸಿಕೊಳ್ಳುವುದು ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ. ಚಾಲುಕ್ಯ ಪೂರ್ವ ಕಾಲದ ಶಿಲ್ಪಗಳು ಬಿಡಿ ಬಿಡಿಯಾಗಿ, ವಿರಳವಾಗಿ ದೊರೆಯುತ್ತವೆ.
ಚಾಲುಕ್ಯ ಅರಸ ಅರಸಿಯರು, ಐಹೊಳೆಯ ವಣಿಕ ಸಂಘದ ಧನಿಕರು, ಬಾದಾಮಿ ಪರಿಸರದಲ್ಲಿ ಗುಹಾಲಯ ಮತ್ತು ರಾಚನಿಕ ಮಂದಿರಗಳನ್ನು ಕಟ್ಟಿಸಿ ಅವನ್ನು ಶಿಲ್ಪಗಳಿಂದ ಅಂದಗೊಳಿಸಿದರು. ಬಾದಾಮಿ, ಐಹೊಳೆ, ಮಹಾಕೂಟಗಳು ಶಿಲ್ಪಕಲೆಯ ಮೊದಲ ಹಂತವನ್ನು ಪ್ರದರ್ಶಿಸುತ್ತವೆ. ಚಾಲುಕ್ಯ ಶಿಲ್ಪಕಲೆಯು ಉಚ್ಛ್ರಾಯ ಸ್ಥಿತಿಯನ್ನು ತಲುಪಿದುದು ಪಟ್ಟದಕಲ್ಲಿನಲ್ಲಿ. ಶಿಲ್ಪಕಲೆಗೆ ಪುರಾಣ ಸಾಹಿತ್ಯವು ಪ್ರೇರಣೆಯಾಗಿದೆ. ಮಹಾಕಾವ್ಯಗಳ ಸನ್ನಿವೇಶಗಳೂ, ಪಂಚತಂತ್ರದ ಕತೆಗಳೂ ಶಿಲ್ಪಕಲೆಯ ವಸ್ತುಗಳಾಗಿವೆ. ಏಕಶಿಲಾ ಮಂದಿರ ಹಾಗೂ ರಾಚನಿಕ ಮಂದಿರಗಳಲ್ಲಿ ಕಂಡರಿಸಲಾದ ಶಿಲ್ಪ ಲಕ್ಷಣಗಳನ್ನು ಸ್ಥೂಲವಾಗಿ ಹೀಗೆ ಸಮೀಕ್ಷಿಸಬಹುದು.
. ಗುಹಾ ಮಂದಿರಗಳ ಬೃಹತ್ ಗಾತ್ರದ ಶಿಲ್ಪಗಳಲ್ಲಿ ಸಾಮಾನ್ಯವಾಗಿ ಸ್ಫುಟವಾದ ಕಣ್ಣಿನ ಹುಬ್ಬುಗಳು, ತೆರೆದ ಕಣ್ಣುಗಳು, ಎರಡು ಗೆರೆಗಳಿಂದ ನಿಚ್ಚಳವಾಗಿ ಮೀನಿನಾಕಾರದಲ್ಲಿ ರೇಖಿಸಿರುವ ಕಣ್ಣೆವೆಗಳು ಕಂಡುಬರುತ್ತವೆ. ಬಾದಾಮಿಯ ಎರಡನೆಯ ಗುಹೆಯ ಶಿಲ್ಪಗಳು ಸ್ವಲ್ಪ ಭಿನ್ನವಾಗಿ ಕಾಣುತ್ತವೆ. ಇಲ್ಲಿ ಹುಬ್ಬುಗಳು ಅಸ್ಪಷ್ಟವಾಗಿದ್ದು, ಕಣ್ಣುಗಳು ಮುಚ್ಚಿರುವಂತೆ ತೋರುತ್ತವೆ. ಗುಹೆಯ ಹತ್ತಿರ ಶಿಲ್ಪಗಳ ಹೆಸರುಗಳನ್ನು ೬ನೆಯ ಶತಮಾನದ ಕನ್ನಡ ಅಕ್ಷರಗಳಲ್ಲಿ ಬರೆಯಲಾಗಿದೆ. ಇನ್ನು ಕೆಲವು ಸಿದ್ಧಮಾತೃಕಾ ಲಿಪಿಯಲ್ಲಿವೆ. ಇದರಿಂದ ಕೆಲವರು ಮಹಾರಾಷ್ಟ್ರ ಪ್ರದೇಶದಿಂದ ಬಂದವರಾಗಿರಬೇಕು. ಅನೇಕ ಶಿಲ್ಪಿಗಳ ಹೆಸರುಗಳು ಮಂಚಿ ಎಂಬ ಪದದಿಂದ ಕೊನೆಗೊಳ್ಳುತ್ತವೆ(ಉದಾ. ಕೋಳಿಮಂಚಿ, ಸಿಂಗಮಂಚಿ ಇತ್ಯಾದಿ). ಇದು ಈಗಲೂ ಆಂಧ್ರದಲ್ಲಿ ಪ್ರಚಲಿತವಿರುವ ಪದ. ಆದ್ದರಿಂದ ಆಂಧ್ರಪ್ರದೇಶದಿಂದಲೂ ರೂವಾರಿಗಳು ವಲಸೆ ಬಂದಿರಬಹುದು. ಹೀಗಾಗಿ ಚಾಲುಕ್ಯ ಶಿಲ್ಪಗಳಲ್ಲಿ ಏಕಸ್ವಾಮ್ಯವಿರದೆ, ಸಂಕೀರ್ಣತೆ, ವೈವಿಧ್ಯಗಳು ಎರಕಗೊಂಡಿವೆ.
. ಬೃಹದಾಕಾರದ ಶಿಲ್ಪಗಳಲ್ಲಿ ರೂಪಸೌಂದರ್ಯದ ಜೊತೆಗೆ ತತ್ವಸೌಂದರ್ಯವು ಅಡಕವಾಗಿದೆ. ನಟರಾಜನ ವಿಗ್ರಹವು ತಿರೋಭಾವ, ಸೃಷ್ಟಿ, ಸ್ಥಿತಿ, ಲಯ ಮತ್ತು ಅನುಗ್ರಹ ಎಂಬ ಶಿವನ ಪಂಚಕೃತ್ಯಗಳನ್ನು ಸಂಕೇತಿಸುತ್ತದೆ. ಅರ್ಧನಾರೀಶ್ವರ ಶಿಲ್ಪವು ಶಿವ, ಶಕ್ತಿಯರು ಅಭಿನ್ನರು ಎಂದು ತಿಳಿಸುವಂತೆ ಸ್ತ್ರೀಪುರುಷರು ಸಮಾನರು ಎಂದು ಸೂಚಿಸುತ್ತದೆ. ಇಡಿ ಭೂಮಿತಾಯಿಯನ್ನೇ ಆಟಿಕೆಯಂತೆ ಹಿಡಿದಿರುವ ವರಾಹನು ಅದೆಷ್ಟು ಶಕ್ತಿಶಾಲಿ!  ಒಂದು ಪಾದದಿಂದ ಆಕಾಶವನ್ನು ಆವರಿಸಿದ ತ್ರಿವಿಕ್ರಮ ಸರ್ವವ್ಯಾಪಿ ಅಲ್ಲದೆ ಬೃಹತ್ಶಿಲ್ಪಗಳು ದೈವೀಶಕ್ತಿಯ ಅರಿವನ್ನುಂಟುಮಾಡುತ್ತವೆ.
. ಮಧ್ಯಮ ಗಾತ್ರದ ಶಿಲ್ಪಗಳು ಇನ್ನೊಂದು ಬಗೆಯದ್ದಾಗಿವೆ. ಶಿಲ್ಪಗಳಲ್ಲಿ ರಸಿಕ ದಂಪತಿಗಳು, ಸಾಲಭಂಜಿಕೆ, ಗಂಧರ್ವ ದಂಪತಿಗಳು ಮೂಡಿಬಂದಿದ್ದಾರೆ. ಇವರು ಲೌಕಿಕ ಜೀವನದ ಅನುಭವಗಳನ್ನು ಪ್ರತಿನಿಧಿಸುವಂತಿದ್ದಾರೆ. ಶಿಲ್ಪಗಳಲ್ಲಿ ಭಾವಸೌಂದರ್ಯ ಹೆಪ್ಪುಗಟ್ಟಿದೆ. ಬಾದಾಮಿಯ ಮಹಾವಿಷ್ಣುಗೃಹದ ಸಾಲಭಂಜಿಕೆಯನ್ನು ಉದಾಹರಿಸಬಹುದು. ಶಿಲ್ಪದಲ್ಲಿ ಚೆಲುವೆಯೊಬ್ಬಳು ಮರದ ಅಡಿಯಲ್ಲಿ ಮಂದಹಾಸದೊಂದಿಗೆ ನಿಂತಿರುವ ದೃಶ್ಯವಿದೆ. ಹಣ್ಣುಗಳು ಅದು ಮಾವಿನ ಮರ ಎಂಬುದನ್ನೂ, ವಸಂತ ಕಾಲ ಎಂಬುದನ್ನೂ ಸೂಚಿಸುತ್ತವೆ. ಹಣ್ಣುಗಳಿಗಾಗಿ ಎರಡು ಮಂಗಗಳು ಹಾತೊರೆಯುವುದನ್ನು ಶಿಲ್ಪಿ ಚಿತ್ರಿಸಿದ್ದಾನೆ. ಚೆಲುವೆಯೊಬ್ಬಳು ಹೀಗೆ ವಯ್ಯರದಿಂದ ತರುಣನ ಎದುರು ನಿಂತರೆ ಆತನ ಪಾಡು ಮಂಗಗಳ ಪಾಡು! ಹೀಗೆ ರೂವಾರಿಯು ಬಂಡೆಯಲ್ಲಿ ಭಾವವನ್ನು ತುಂಬಿದ್ದಾನೆ. ಶಿಲ್ಪಗಳು ಕರ್ನಾಟಕದ ಪ್ರಪ್ರಥಮ ಮದನಿಕಾಶಿಲ್ಪಗಳು.
. ವೈವಿಧ್ಯ ಚಾಲುಕ್ಯ ಶಿಲ್ಪಗಳಲ್ಲಿ ಕಂಡುಬರುವ ಇನ್ನೊಂದು ವೈಶಿಷ್ಟ್ಯವಾಗಿದೆ. ಒಂದೇ ಸನ್ನಿವೇಶವನ್ನು ವಿವಿಧ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ. ಬಾದಾಮಿಯ ಶಿವಗುಹೆಯ ಮಹಿಷಾಸುರ ಮರ್ದಿನಿ ಶಿಲ್ಪಕ್ಕಿಂತ ರಾವಣಫಡಿಯ (ಐಹೊಳೆ) ಮಹಿಷಾಸುರ ಮರ್ದಿನಿ ಮೂರ್ತಿಯು ವಿಭಿನ್ನವಾಗಿದೆ. ಹಾಗೆಯೆ ರಾಚನಿಕ ಮಂದಿರಗಳಲ್ಲಿ ಕೂಡ. ದುರ್ಗಗುಡಿಯ ಕೋಷ್ಟದಲ್ಲಿರುವ ದೇವಿ, ಪಟ್ಟದಕಲ್ಲಿನ ವಿರೂಪಾಕ್ಷಗುಡಿಯ ಉಪಗರ್ಭ ಗೃಹದ ದುರ್ಗಾಶಿಲ್ಪಗಳಲ್ಲಿ ಮೂಡಿಬಂದ ಅಭಿವ್ಯಕ್ತಿ ವ್ಯತ್ಯಾಸವು ಶಿಲ್ಪ ಬೆಳವಣಿಗೆಯನ್ನು ಗುರುತಿಸಲು ಸಹಾಯಕವಾಗಿದೆ. ಉದಾಹರಣೆಗೆ ಪ್ರಾರಂಭದ ಕಾಲದ ದುರ್ಗಾಮೂರ್ತಿಗಳಲ್ಲಿ ಅಸುರನು ಕೋಣದ ಮುಖದೊಂದಿಗೆ ಚಿತ್ರಿತನಾಗಿದ್ದರೆ ಅಂತಿಮ ಹಂತದ ಚಾಲುಕ್ಯ ಶಿಲ್ಪಗಳಲ್ಲಿ ಅಸುರನು ಕೋಡುಗಳಿರುವ ಮಾನವ ರೂಪದಲ್ಲಿದ್ದಾನೆ.
. ಕಥಾನಕ ಶಿಲ್ಪಗಳು ಕತೆ ಹೇಳುವ ಶಿಲ್ಪಗಳು. ದೇವಾಲಯಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರವಾಗಿರದೆ ಜನಸಾಮಾನ್ಯರಿಗೆ ಕಾವ್ಯ ಹಾಗೂ ಪುರಾಣದ ಕತೆಗಳನ್ನು ಶಿಲ್ಪಗಳ ಮೂಲಕ ನೆನಪಿಸುತ್ತ ನೀತಿಶಿಕ್ಷಣ ನೀಡುವ ಕೆಲಸವನ್ನು ಮಾಡಿವೆ. ಓದುಬರಹ ಬಾರದ ಸಾಮಾನ್ಯರು ಪುರಾಣ, ಪ್ರವಚನಗಳಲ್ಲಿ ಕೇಳಿ ತಿಳಿದ ಕತೆಗಳನ್ನು ಸ್ಮರಿಸಿಕೊಳ್ಳಲು ಶಿಲ್ಪಗಳು ನೆರವಾಗುತ್ತವೆ.
ಭಾರತದಲ್ಲಿ ಮೊದಲಬಾರಿಗೆ ಕಥಾನಕ ಶಿಲ್ಪಗಳನ್ನು ನಿರ್ಮಿಸಿದ ಖ್ಯಾತಿ ಬೌದ್ಧರಿಗೆ ಸಲ್ಲುತ್ತದೆ. ಕಲ್ಲುಗಳಲ್ಲಿ ರಾಮಾಯಣ, ಮಹಾಭಾರತ ಹಾಗೂ ಹಿಂದೂ ಪುರಾಣ ಕತೆಗಳನ್ನು ಕಂಡರಿಸಿದವರಲ್ಲಿ ಚಾಲುಕ್ಯ ಶಿಲ್ಪಿಗಳೇ ಮೊದಲಿಗರು. ಗುಹೆಗಳಲ್ಲಿ ಮತ್ತು ರಾಚನಿಕ ಮಂದಿರಗಳಾದ ಮೇಲಿನ ಶಿವಾಲಯ, ಮಹಾಕೂಟೇಶ್ವರ, ಪಾಪನಾಥ ಗುಡಿಗಳ ಕಂಬ, ಗೋಡೆಗಳ ಮೇಲೆ ಇವನ್ನು ಕೆತ್ತಲಾಗಿದೆ. ಪಂಚತಂತ್ರದ ನೀತಿಕತೆಗಳನ್ನು ಹೇಳುವ ಪಟ್ಟದಕಲ್ಲು, ಆಲಂಪುರದ ಶಿಲ್ಪಗಳು ಲೌಕಿಕ ಶಿಲ್ಪಗಳು.
. ಅಜಂತಾ ವರ್ಣಚಿತ್ರಗಳಲ್ಲಿ ಬುದ್ಧನು ಬೃಹದಾಕಾರದಲ್ಲಿ ವರ್ಣಿತನಾಗಿದ್ದರೆ ಆತನ ಶಿಷ್ಯರು ಗಾತ್ರದಲ್ಲಿ ತೀರ ಚಿಕ್ಕವರಾಗಿ ಚಿತ್ರಿತರಾಗಿದ್ದಾರೆ. ಇದು ದೇಹದ ವಾಸ್ತವಿಕ ಪ್ರಮಾಣ(Proportion) ವಲ್ಲ, ಬುದ್ಧನ ಆಂತರಿಕ ವ್ಯಕ್ತಿತ್ವದ ಎತ್ತರ. ಬಗೆಯ ಪ್ರಾಧಾನ್ಯವನ್ನು ಚಾಲುಕ್ಯ ಶಿಲ್ಪಗಳಲ್ಲಿ ಕಾಣುತ್ತೇವೆ. ಅರಸು ದಂಪತಿಗಳು ಇಲ್ಲವೆ ಸಾಲಭಂಜಿಕಾ ಶಿಲ್ಪಗಳಲ್ಲಿ ಸೇವಕರು ಹೀಗೆ ಕುಬ್ಜರಾಗಿ ಶಿಲ್ಪಿತರಾಗಿದ್ದಾರೆ.
. ಪುಟ್ಟಗಣಗಳ ಶಿಲ್ಪಪಟ್ಟಿಕೆಗಳು ಚಾಲುಕ್ಯ ಶಿಲ್ಪಕಲೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಇವು ಅಲೌಕಿಕ ಶಿಲ್ಪಗಳು. ಗುಹಾಲಯಗಳಲ್ಲಿ ಭವ್ಯಗಾತ್ರದ ಧಾರ್ಮಿಕ ದೇವಶಿಲ್ಪಗಳ ಕೆಳಭಾಗದಲ್ಲಿ, ಇಲ್ಲವೆ ರಾಚನಿಕ ದೇಗುಲದ ಅಧಿಷ್ಠಾನದ ಗಳ ಭಾಗದಲ್ಲಿ ಇವನ್ನು ಕೆತ್ತಲಾಗಿದೆ. ಸೈನಿಕರು, ಕುಸ್ತಿಪಟುಗಳು, ಸೇವಕರು, ಸಂಗೀತಗಾರರು, ಹಾವಾಡಿಗರು, ಗುರು ಶಿಷ್ಯರು ಮತ್ತು ಅವರ ಜೀವನದ ನಿತ್ಯ ಸನ್ನಿವೇಶಗಳು ಶಿಲ್ಪಗಳಿಗೆ ವಸ್ತುಗಳಾಗಿವೆ.
. ಸಂಯುಕ್ತ ಪ್ರತಿಮೆಗಳನ್ನು ಕಂಡರಿಸುವಲ್ಲಿ ಚಾಲುಕ್ಯ ರೂವಾರಿಗಳು ಒಲವು ತೋರಿದ್ದಾರೆ. ಅರ್ಧನಾರೀಶ್ವರ, ಹರಿಹರ ಭವ್ಯ ಶಿಲ್ಪಗಳಲ್ಲಿ ಎರಡು ಒಂದಾಗಿರುವಂತೆ ತೋರಿಸಿದ್ದಾರೆ. ಆನೆ, ನಂದಿಗಳ ಮುಖಗಳು ಒಂದೇ ಸಾಮಾನ್ಯಕೃತಿಯಲ್ಲಿವೆ. ಹೀಗೆಯೆ ಎರಡು ಮುಖಗಳೊಂದಿಗೆ ನಾಲ್ವರ ಚಿತ್ರಣ, ನಾಲ್ಕು ಕಾಲುಗಳೊಂದಿಗೆ ಮೂವರ ಶಿಲ್ಪಗಳನ್ನು ರೂಪಿಸುವಲ್ಲಿ ಕಲಾವಿದರ ನೈಪುಣ್ಯ ಹಾಗೂ ಮನೋವಿಲಾಸ ವ್ಯಕ್ತವಾಗಿವೆ. ಬಗೆಯ ಶಿಲ್ಪಗಳು ಚಾಲುಕ್ಯ ಕಲಾವಿದರ ಆವಿಷ್ಕಾರವೆನಿಸಿವೆ.
. ಪ್ರತಿಯೊಬ್ಬ ಕಲಾಕಾರನು ತನ್ನ ಎಡಬಲದ ಪರಿಸರದಿಂದ ಪ್ರಭಾವಿತನಾಗಿರುತ್ತಾನೆ. ಸಮಕಾಲೀನ ಜನಜೀವನವು ಆತನ ಕಲಾಕೃತಿಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಹೀಗಾಗಿ ಚಾಲುಕ್ಯರ ಶಿಲ್ಪಗಳಲ್ಲಿ ಅಂದಿನ ಉಡಿಗೆ ತೊಡಿಗೆ, ಕೇಶಾಲಂಕಾರ ವಿಧಗಳು, ಆಭರಣಗಳು, ಬಳಕೆ ವಸ್ತುಗಳು, ಶಯನ ಪೀಠೋಪಕರಣಗಳು, ಆಯುಧಗಳು, ಸಂಗೀತವಾದ್ಯಗಳು ಮತ್ತು ನಿತ್ಯ ಜೀವನದ ಸುಖದುಃಖದ ಸನ್ನಿವೇಶಗಳು ಚಿತ್ರಿತವಾಗಿದ್ದು ಚಾಲುಕ್ಯರ ಕಾಲದ ಸಂಸ್ಕೃತಿಯನ್ನು ಪರಿಚಯಿಸುತ್ತವೆ.
ಬಗೆಬಗೆಯ ಹೂಬಳ್ಳಿಗಳು, ಜಲಚರ ಭೂಚರ ಪ್ರಾಣಿಗಳು, ಪಕ್ಷಿಸಂಕುಲಗಳು ಕಂಬಗಳನ್ನು, ಬಾಗಿಲುವಾಡಗಳನ್ನು, ಛತ್ತನ್ನು ಅಲಂಕರಿಸಿವೆ. ಇಷ್ಟು ಮಾತ್ರವಲ್ಲದೆ ವರ್ತುಲಗಳು, ಅರ್ಧ ವರ್ತುಲಗಳು, ತ್ರಿಕೋನಗಳು  ಚೌಕೋನ ಮೊದಲಾದ ಜ್ಯಾಮಿತಿ ನಕ್ಷೆಗಳು, ಅಸಂಖ್ಯ ಪುಷ್ಪ ನಕ್ಷೆಗಳು ರೂವಾರಿಗಳ ಅಗಾಧ ಕಲ್ಪನಾ ಶಕ್ತಿಯನ್ನು ಪರಿಚಯಿಸುತ್ತವೆ.
ಸ್ಥಪತಿಗಳು, ರೂವಾರಿಗಳು
ಶಾಸನೋಕ್ತ ಚಾಲುಕ್ಯ ಸ್ಥಪತಿಗಳಲ್ಲಿ ಆರ್ಯಮಂಚಿ ಉಪಾಧ್ಯಾಯನು ಮೊದಲಿಗ. ಈತ ಬಾದಾಮಿಯ ಬಂಡೆಯೊಂದರ ಮೇಲೆ ಮತ್ತೊಂದು ಬಂಡೆಯಂತೆ ಕಾಣುವ ಮಾಲೆಗಿತ್ತಿ ಶಿವಾಲಯವನ್ನು ನಿಲ್ಲಿಸಿದ್ದಾನೆ. ನರಸೊಬ್ಬನು ಐಹೊಳೆಯ ಪ್ರಸಿದ್ಧ ಸೂತ್ರಧಾರಿ. ಈತನು ಶಿಲ್ಪಿಯೂ ಆಗಿದ್ದನು. ಹುಚ್ಚಪ್ಪಯ್ಯನ ಗುಡಿ ಈತನ ರಚನೆ. ಅಲ್ಲಿಯ ಶಾಸನವೊಂದು ನರಸೊಬ್ಬನಂತಹ ಸೂತ್ರಧಾರಿ ಹಿಂದೆ ಇರಲಿಲ್ಲ, ಮುಂದೆಯೂ ಇರಲಾರ ಎಂಬ ಹೊಗಳಿಕೆಯ ಮಾತನ್ನು ಹೇಳಿದೆ. ಆದರೆ ನಂತರ ಬಂದ ಸರ್ವಸಿದ್ದಿ ಆಚಾರಿ, ಗುಂಡ ಅನಿವಾರಿತಾಚಾರಿ ಮತ್ತು ರೇವಡಿ ಓವಜ್ಜ ಎಂಬುವರು ಪಟ್ಟದಕಲ್ಲಿನಲ್ಲಿ ಅತ್ಯದ್ಭುತ ರಾಚನಿಕ ಮಂದಿರಗಳನ್ನು ಸೃಷ್ಟಿಸಿದರು. ಅರಸರು ಇವರಿಗೆ ಬಿರುದು ನೀಡಿ ಗೌರವಿಸಿದರು.
ನೂರಾರು ಶಿಲ್ಪಿಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳಲ್ಲಿ ಸಾವಿರಾರು ಶಿಲ್ಪಗಳನ್ನು ರಚಿಸಿದ್ದಾರೆ. ನೆಲವರ್ಕಿ, ಪಾಕ, ಬಲದೇವ, ಆದಿತ್ಯ, ಚೆಂಗಮ್ಮ, ಪುಲ್ಲಪ್ಪ ಮೊದಲಾದವರು ಪ್ರಖ್ಯಾತ ಶಾಸನೋಕ್ತ ಶಿಲ್ಪಿಗಳು.
ಬಾದಾಮಿಯ ಸ್ಮಾರಕಗಳು
ಕ್ರಿ.. ೫೪೩ರಲ್ಲಿ ಒಂದನೆಯ ಪುಲಿಕೇಶಿಯು ಅಭೇದ್ಯವಾದ ಕೋಟೆಯನ್ನು ನಿರ್ಮಿಸುವುದರ ಮೂಲಕ ಬಾದಾಮಿಯಲ್ಲಿ ವಾಸ್ತುಚಟುವಟಿಕೆಗಳು ತೀವ್ರಗೊಂಡವು. ಗುಹಾ ದೇವಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಚಾಲುಕ್ಯರು ಪೌರಾಣಿಕ ಮತ್ತು ಧಾರ್ಮಿಕ ತತ್ವಗಳ ಪ್ರಚಾರಕ್ಕೆ ಮುಂದಾದರು. ಹೀಗೆ ಅವರು ವೈದಿಕ ಮತ್ತು ಭಾಗವತ ಸಂಸ್ಕೃತಿಯನ್ನು ಪ್ರಸಾರ ಮಾಡಿದರೂ ಅಂಧಾಭಿಮಾನಿಗಳಾಗಿರಲಿಲ್ಲ. ಉಳಿದ ಮತೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ವಿದ್ದಿತು. ಧರ್ಮ ಸಹಿಷ್ಣುತೆಯನ್ನು ತೋರಿದ ಹೃದಯ ವೈಶಾಲ್ಯ ಚಾಲುಕ್ಯರದು.
ಇವರ ವಾಸ್ತು ನಿರ್ಮಿತಿಗಳನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲ ಹಂತದ ನಿರ್ಮಾಣಗಳು ಕ್ರಿ.. ೫೪೦ರ ಅವಧಿಯಿಂದ ಪ್ರಾರಂಭವಾಗಿ ಇಮ್ಮಡಿ ಪುಲಕೇಶಿಯ ಅಂತ್ಯದವರೆಗೆ ರೂಪಗೊಂಡವು. ಹಂತದ ಪ್ರಧಾನ ವಾಸ್ತು ರಚನೆಗಳೆಂದರೆ ಗುಹಾ ದೇವಾಲಯಗಳು. ಇವುಗಳ ಜೊತೆಗೆ ಕೆಲವು ರಾಚನಿಕ ಮಂದಿರಗಳೂ ವಾತಾಪಿ(ಬಾದಾಮಿ) ಚೆಲುವನ್ನು ಹೆಚ್ಚಿಸಿದವು. ಎರಡನೆಯ ಹಂತದಲ್ಲಿ (ಕ್ರಿ.. ೬೫೫ರಿಂದ ೭೫೭) ವಾಸ್ತು ಚಟುವಟಿಕೆಗಳು ಮುಖ್ಯವಾಗಿ ಮಂದಿರ ನಿರ್ಮಾಣಕ್ಕೆ ಸೀಮಿತವಾದವು. ಬೃಹತ್ ಪ್ರಮಾಣದಲ್ಲಿ ಗುಡಿಕಟ್ಟುವ ಕಾರ್ಯವು ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಆಲಂಪುರಗಳಲ್ಲಿ ನಡೆಯಿತು. ಪಟ್ಟದಕಲ್ಲಿನ ದೇವಾಲಯಗಳು ವಿಶ್ವಪರಂಪರೆಯ ಸ್ಮಾರಕಗಳೆನಿಸಿವೆ.
. ಗುಹಾದೇವಾಲಯಗಳು
ಬಾದಾಮಿಯ ಗುಹಾದೇವಾಲಯಗಳನ್ನು ಸ್ಥಳೀಯರು ಮೇಣಬಸದಿಗಳೆನ್ನುತ್ತಾರೆ. ಇವು ನೆಲದ ಮಟ್ಟಕ್ಕಿಂತ ಹೆಚ್ಚು ಎತ್ತರದಲ್ಲಿರುವುದರಿಂದ ಮೇಲಿನ (ಮೇಗಣ) ಬಸದಿಗಳೆನಿಸಿರಬೇಕು. ಮೇಗಣ ಬಸದಿಗಳು ಮೇಣಬಸದಿಗಳಾಗಿವೆ. ಬಾದಾಮಿಯ ದಕ್ಷಿಣಭಾಗದಲ್ಲಿರುವ ಬೆಟ್ಟವನ್ನು ರಣಮಂಡಲ ಎನ್ನಲಾಗುತ್ತದೆ. ಕಲ್ಬೆಟ್ಟದಲ್ಲಿ ನಾಲ್ಕು ಗುಹಾದೇವಾಲಯ (ಮೇಣಬಸದಿ)ಗಳನ್ನು ಕೊರೆದು ಮಾಡಲಾಗಿದೆ. ಇವುಗಳಲ್ಲಿ ಒಂದನೆಯದು ಶೈವ, ಮುಂದಿನವೆರಡು ವೈಷ್ಣವ, ಕೊನೆಯದು ಜಿನಾಲಯ. ಪ್ರಾಯಶಃ ಕಾಲಾನುಕ್ರಮದಲ್ಲಿ ಶೈವಗುಹೆ ಅತಿ ಪ್ರಾಚೀನವಾದುದು. ಜಿನಾಲಯ ಕೊನೆಯ ರಚನೆ.
ಶೈವಗುಹೆ
ಮೊದಲನೆಯ ಗುಹಾಲಯದಲ್ಲಿ ಮೊಗಸಾಲೆ, ಸಭಾಮಂಟಪ ಹಾಗೂ ಗರ್ಭಗೃಹಗಳ ಜೊತೆಗೆ ಪಶ್ಚಿಮ ಗೋಡೆಯಲ್ಲಿ ಚಿಕ್ಕದಾದ ಗುಹೆಯನ್ನು ಕೊರೆಯಲಾಗಿದೆ. ಉಪಗುಹೆಗೆ ಹೊಂದಿಕೊಂಡ ಗೋಡೆಯ ಮೇಲೆ ನಟರಾಜ(ಮಹಾನಟ) ಅಪೂರ್ವ ಶಿಲ್ಪವಿದೆ. ಸಂದರ್ಶಕರನ್ನು ದೂರದಿಂದಲೇ ತನ್ನತ್ತ ಸೆಳೆಯುವ ಚೆಲುವು ಇದರದ್ದು. ಸಹಜ ಮಾನವಾ ಕೃತಿಯ ನಟರಾಜನು ೧೮ ಕೈಗಳಿಂದ ಶೋಭಿತನಾಗಿದ್ದು ಅವು ವಿಭಿನ್ನ ಚಲನೆ (ಕರಣ)ಗಳನ್ನು ಸೂಚಿಸುತ್ತವೆ. ಸರ್ಪ, ಪಾಶ, ವೀಣೆ, ತ್ರಿಶೂಲ ಮೊದಲಾದವುಗಳನ್ನು ಹಿಡಿದುಕೊಂಡು ಶಿವನು ನಾಟ್ಯ ನಿರತನಾಗಿದ್ದಾನೆ.
ತಾತ್ವಿಕವಾಗಿ ನಟರಾಜನ ನೃತ್ಯವು ಆತನ ಐದು ಕೃತ್ಯಗಳನ್ನು ಸಂಕೇತಿಸುತ್ತದೆ. ಸೃಷ್ಟಿ (ಹುಟ್ಟು, ಬೆಳವಣಿಗೆ), ಸ್ಥಿತಿ(ರಕ್ಷಣೆ), ಸಂಹಾರ(ಲಯ), ತಿರೋಭಾವ (ವಿಶ್ರಾಂತಿ) ಮತ್ತು ಅನುಗ್ರಹ (ಮುಕ್ತಿ) ಇವೇ ಶಿವನ ಪಂಚಕೃತ್ಯಗಳು. ಇವು ಪ್ರತ್ಯೇಕವಾಗಿ, ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ ಮತ್ತು ಸದಾಶಿವರ ಕ್ರಿಯೆಗಳೆಂದು ಹೇಳಲಾಗುತ್ತದೆ.
ಮೊದಲನೆಯ ಗುಹಾಲಯದ ಮುಖಮಂಟಪದಲ್ಲಿಯ ಎರಡು ಪ್ರಧಾನ ಶಿಲ್ಪಗಳೆಂದರೆ ಹರಿಹರ ಮತ್ತು ಅರ್ಧನಾರೀಶ್ವರ.
ಹರಿಹರ ವಿಗ್ರಹವು ಪೂರ್ವದ ಗೋಡೆಯನ್ನೆಲ್ಲ ಆವರಿಸಿದೆ. ಹರಿಹರನ ಬಲ ಅರ್ಧಭಾಗವು ಶಿವನದಾದರೆ, ಎಡ ಅರ್ಧವು ವಿಷ್ಣುವಿನದು. ಶಿವನ ಹತ್ತಿರ ಪಾರ್ವತಿ, ವಿಷ್ಣುವಿನ ಹತ್ತಿರ ಲಕ್ಷ್ಮಿ ವಸ್ತ್ರಾಭರಣಗಳಿಂದ ಅಲಂಕೃತರಾಗಿ ನಿಂತಿದ್ದಾರೆ. ಎರಡೂ ಶಿಲ್ಪಗಳಲ್ಲಿಯ ನಿಲುವು, ಮೈಮಣಿತಗಳಲ್ಲಿ ಸಾಮ್ಯಗಳಿರುವುದೊಂದು ವಿಶೇಷ ಸಂಗತಿ. ಶಿವ ಹಾಗೂ ವಿಷ್ಣು ಅಭಿನ್ನರು. ಅವರಲ್ಲಿ ಭೇದವಿಲ್ಲವೆಂದು ಸಾರುವ ಉದ್ದೇಶ ಸಂಯುಕ್ತ ಪ್ರತಿಮೆಯ ತಾತ್ವಿಕ ಹಿನ್ನೆಲೆ. ಬೃಹತ್ ಶಿಲ್ಪವು ಗಣಗಳಿರುವ ಪಟ್ಟಿಕೆಯ ಮೇಲೆ ನಿಂತಿರುವಂತೆ ರಚಿಸಲಾಗಿದೆ. ಗಣ ಸಮೂಹದಲ್ಲಿ ಸಂಗೀತಕಾರರು, ನರ್ತಕರು ಒಡಮೂಡಿದ್ದಾರೆ.
ಅರ್ಧನಾರೀಶ್ವರ ಶಿಲ್ಪವು ಗುಹಾಲಯದ ಇನ್ನೊಂದು ಉತ್ಕೃಷ್ಟ ಕಲಾಕೃತಿ. ಇದೂ ಕೂಡ ಒಂದು ಸಂಯುಕ್ತ ಪ್ರತಿಮೆ. ಬಲ ಅರ್ಧಭಾಗ ಶಿವನದಾದರೆ ಎಡ ಅರ್ಧ ಪಾರ್ವತಿಯದು. ವಾಹನ ನಂದಿ, ಭಕ್ತ ಭೃಂಗಿ, ಸೇವಕಿ ಜೊತೆಗಿದ್ದಾರೆ. ವಿಶಿಷ್ಟ ಕೇಶಾಲಂಕಾರ, ಆಭರಣಗಳಿಂದ ಪಾರ್ವತಿ ಹಾಗೂ ಸೇವಕಿಯರ ಶಿಲ್ಪಗಳು ಚಿತ್ತಾಕರ್ಷಕವಾಗಿವೆ. ಪ್ರಮಾಣ ಹಾಗೂ ಸಂಯೋಜನೆಯ ದೃಷ್ಟಿಯಿಂದ ಕಲಾತ್ಮಕ ಶಿಲ್ಪವಿದು. ತಾತ್ವಿಕವಾಗಿ ಶಿವ ಮತ್ತು ಶಕ್ತಿ ಇವರೀರ್ವರ ಏಕತೆಯನ್ನು ಇದು ಸಮರ್ಥಿಸುತ್ತದೆ. ಶಿವಪಾರ್ವತಿಯರು ಕೂಡಿಯೇ ವೀಣೆಯನ್ನು ನುಡಿಸುತ್ತಿರುವಂತೆ ವಿಗ್ರಹವನ್ನು ಕಂಡರಿಸಲಾಗಿದೆ. ವೀಣೆಯನ್ನು ನುಡಿಸುವ ಒಂದು ಕೈ ಶಿವನದಾದರೆ ಇನ್ನೊಂದು ಪಾರ್ವತಿಯದು. ಗಂಡು, ಹೆಣ್ಣಿನ ಬಾಳಸ್ವರಗಳು ಪೂರಕವಾಗಿದ್ದರೆ ಮಾತ್ರ ಬಾಳಸಂಗೀತ ಸುಮಧುರವಾಗಿರುತ್ತದೆ ಎಂದು ಸೂಚಿಸುವಂತಿದೆ.
ಶೈವಗುಹೆಯ ಪಶ್ಚಿಮಕ್ಕಿರುವ ಉಪಗುಹೆ ಮಹಿಷಮರ್ದಿನಿಯದು. ಮಹಿಷನು ಕೋಣನ ರೂಪದಲ್ಲಿರುವ ರಾಕ್ಷಸ. ಇವನು ಅಹಂಕಾರಿ. ಈತನ ಅಹಂಕಾರವನ್ನು ನಾಶ ಮಾಡಿದುದನ್ನು ಶಿಲ್ಪವು ಚಿತ್ರಿಸುತ್ತದೆ. ಚತುರ್ಭುಜೆಯಾಗಿರುವ ದೇವಿಯು ಕೇವಲ ಎರಡು ಕೈಗಳನ್ನು ಮಾತ್ರ ಪ್ರಯೋಗಿಸಿ ಅನಾಯಾಸವಾಗಿ, ನಗುಮೊಗದಿಂದ, ನಾಟ್ಯ ಭಂಗಿಯಲ್ಲಿರುವಂತೆ ಲೀಲಾ ಜಾಲವಾಗಿ ಮಹಿಷನ ವಧೆ ಮಾಡುತ್ತಿದ್ದಾಳೆ. ಅವಳ ಶಕ್ತಿ ಅಪಾರವಾದುದನ್ನು ಶಿಲ್ಪವು ತಿಳಿಸುತ್ತದೆ.
ಉಪಗುಹೆಯ ಉತ್ತರಗೋಡೆಯಲ್ಲಿ ಗಣಪತಿಯ ಮೂರ್ತಿ ಇದೆ. ಈತನು ವಿದ್ಯಾದೇವತೆ. ಆತನ ತಲೆಯ ಮೇಲೆ ಕಮಲದ ಕೆತ್ತನೆ ಇದೆ. ಇದು ಸಹಸ್ರಾರು ಕಮಲ (ಯೋಗ ಚಕ್ರ) ಸಂಕೇತ. ದಕ್ಷಿಣಗೋಡೆಯಲ್ಲಿ ನವಿಲಿನ ಮೇಲೆ ಕುಳಿತು ಹೊರಟಿರುವ ಕಾರ್ತಿಕೇಯನನ್ನು ಕಂಡರಿಸಲಾಗಿದೆ. ಒಟ್ಟಾರೆ ಉಪಗುಹೆಯಲ್ಲಿ ಶಿವನ ಪರಿವಾರವಿದೆ.
ಶೈವಗುಹೆಯ ಮೊಗಸಾಲೆಯ ಛತ್ತಿನಲ್ಲಿರುವ ಐದು ಹೆಡೆಗಳಿರುವ ನಾಗರಾಜ, ವಿದ್ಯಾಧರ ದಂಪತಿಗಳು, ದ್ವಾರಪಾಲಕರ ಕೆಳಗೆ ಇರುವ ಗಜವೃಷಭ ಶಿಲ್ಪಗಳು ಸಹೃದಯನಿಗೆ ಮುದ ನೀಡುವ ಮೂರ್ತಿಗಳಾಗಿವೆ.
ವೈಷ್ಣವ ಗುಹೆ
ಶೈವಗುಹೆಯ ಪೂರ್ವದ ಕಡೆಗೆ ಇರುವ ಮೆಟ್ಟಿಲುಗಳನ್ನು ಹತ್ತಿ ಸಾಗಿದರೆ ಎರಡನೆಯ ಗುಹೆ ಕಣ್ಣಿಗೆ ಬೀಳುತ್ತದೆ. ಇದು ವೈಷ್ಣವ ಗುಹೆ. ಗಾತ್ರ, ಆಕಾರದಲ್ಲಿ ಶೈವ ಗುಹೆಗಿಂತ ಚಿಕ್ಕದು. ಗುಹೆಯ ಅಧಿಷ್ಠಾನದ ಗಣಶಿಲ್ಪಗಳು ಹೆಚ್ಚು ನಿಚ್ಚಳವಾಗಿ ಉಳಿದುಕೊಂಡಿವೆ. ಸವಕಳಿಗೆ ಸಿಲುಕಿಲ್ಲ. ಆದ್ದರಿಂದ ಗುಹೆಯ ಅಂದ ಹೆಚ್ಚಿದೆ.
ವಾಡಿಕೆಯಂತೆ ಮೊಗಸಾಲೆಯ ಗೋಡೆಗಳಲ್ಲಿ ಬೃಹದಾಕಾರದ ಶಿಲ್ಪಗಳನ್ನು ಕೆತ್ತಲಾಗಿದೆ. ಪೂರ್ವದ ಗೋಡೆಯಲ್ಲಿ ಭೂವರಾಹನ ಭವ್ಯ ಮೂರ್ತಿ ಇದೆ. ಇದರ ಕೆಳಭಾಗದಲ್ಲಿ ಗಣಗಳ ಪಟ್ಟಿಕೆ ಕೆತ್ತನೆಗೊಂಡಿದೆ. ಚಾಲುಕ್ಯಶಿಲ್ಪ ಸಂಪ್ರದಾಯದ ಸಾಮಾನ್ಯ ಅಂಶವಿದು. ಚಾಲುಕ್ಯ ಅರಸರು ವರಾಹ ರೂಪವನ್ನು ತಮ್ಮ ರಾಜಲಾಂಛನವನ್ನಾಗಿ ಸ್ವೀಕರಿಸಿದರು. ವರಾಹನಂತೆ ತಾವೂ ಭೂರಕ್ಷಕರು ಎಂಬ ನಿಲುವನ್ನು ಅವರು ತಳೆದಿದ್ದರು. ಚಿನ್ನದ ನಾಣ್ಯಗಳ ಮೇಲೆ ವರಾಹದ ಮುದ್ರೆ ಇರುತ್ತಿತ್ತು. ಅವು ವರಹಗಳೆನಿಸಿದವು. ವಿಜಯನಗರ ಅರಸರೂ ಸಂಪ್ರದಾಯವನ್ನು ಮುಂದುವರೆಸಿದರು.
ಗುಹೆಯಲ್ಲಿ ಭೂವರಾಹನು ಚತುರ್ಭುಜನಾಗಿದ್ದು ಎಡಗೈಯಲ್ಲಿ ಭೂದೇವಿಯನ್ನು ಎತ್ತಿ ಹಿಡಿದಂತೆ ತೋರಿಸಲಾಗಿದೆ. ವರಾಹನು ಪ್ರತ್ಯಾಲೀಢ ಭಂಗಿಯಲ್ಲಿದ್ದಾನೆ. ಮೂಲೆಯಲ್ಲಿ ನಾಗದಂಪತಿಗಳನ್ನು ಶಿಲ್ಪಿಸಲಾಗಿದೆ. ವರಾಹ ಮೂರ್ತಿಯು ಬಗೆ ಬಗೆಯ ಆಭರಣಗಳಿಂದ ಅಲಂಕೃತವಾಗಿದೆ. ಮೇಲ್ಭಾಗದ ಮೂಲೆಗಳಲ್ಲಿ ವಿದ್ಯಾಧರರು ಕೆತ್ತನೆಗೊಂಡಿದ್ದರಿಂದ ಶಿಲ್ಪ ಸಂಯೋಜನೆ ಪೂರ್ಣಗೊಂಡಿದೆ.
ಪಶ್ಚಿಮ ಗೋಡೆಯಲ್ಲಿ ವಿಷ್ಣುವಿನ ಇನ್ನೊಂದು ಅವತಾರದ ಚಿತ್ರಣವಿದೆ. ವಾಮನಾವತಾರದ ಕತೆ ಹೇಳುವ ಇದು ಒಂದು ಕಥಾನಕ ಶಿಲ್ಪವಾಗಿ ಮೂಡಿಬಂದಿದೆ. ತ್ರಿವಿಕ್ರಮನು ಆಕಾಶದತ್ತ ಕಾಲು ಚಾಚಿದ್ದು ಅದರ ಕೆಳಗಿರುವ ಶಿಲ್ಪಗಳು ಪೂರ್ವದ ಕತೆಯನ್ನು ನೆನಪಿಸುತ್ತವೆ. ವಿಷ್ಣು ಕುಬ್ಜ ವಿಪ್ರನಾಗಿ ನಿಂತಿದ್ದಾನೆ. ಆತನ ಎದುರು ಬಲಿ ಚಕ್ರವರ್ತಿಯ ಗುರುಗಳಾದ ಶುಕ್ರಾಚಾರ್ಯರು ಅರ್ಘ್ಯ ನೀಡುತ್ತಿದ್ದಾರೆ. ತನ್ನ ಪರಿವಾರದೊಂದಿಗೆ ಬಲಿಯು ಗುರುಗಳ ಸಮ್ಮುಖದಲ್ಲಿ ಕುಬ್ಜ ಬ್ರಾಹ್ಮಣನಿಗೆ ಮೂರು ಹೆಜ್ಜೆಗಳ ದಾನವನ್ನು ನೀಡುತ್ತಿದ್ದಾನೆ.
ಬಲಿಯು ದಾನಗೈಯ್ಯುತ್ತಲೆ ವಿಷ್ಣು ವಿರಾಟರೂಪವನ್ನು ತಳೆದು ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಆಕಾಶವನ್ನೆಲ್ಲ ಆವರಿಸಿದುದನ್ನು ಇಲ್ಲಿ ಸಾಂಕೇತಿಕವಾಗಿ ತೋರಿಸಲಾಗಿದೆ. ತ್ರಿವಿಕ್ರಮನು ತನ್ನ ಏಳು ಕೈಗಳಲ್ಲಿ ಶಂಖ, ಚಕ್ರ, ಗದೆ, ಬಾಣ, ಢಾಲು, ಖಡ್ಗ, ಬಿಲ್ಲುಗಳನ್ನು ಹಿಡಿದುಕೊಂಡು ಘೋರ ರೂಪ ತಾಳಿದ್ದಾನೆ. ಇನ್ನೊಂದು ಕೈ ಆಕಾಶದತ್ತ ಬೆರಳು ಚಾಚಿದೆ. ಇಡೀ ಆಕಾಶವನ್ನು ಆವರಿಸಿದ್ದೇನೆ. ಮೂರನೆಯ ಹೆಜ್ಜೆಗೆ ಸ್ಥಳವೆಲ್ಲಿ ಎಂದು ಅದು ಪ್ರಶ್ನಿಸುವಂತಿದೆ. ಇದೊಂದು, ರೂವಾರಿಯ ಸುಂದರ ಕಲ್ಪನೆಯಾಗಿದೆ.
ಗುಹೆಯ ಮೊಗಸಾಲೆಯ ತೊಲೆಗಳ ಮೇಲೆ ಕಥಾನಕ ಶಿಲ್ಪಗಳ ಪಟ್ಟಿಕೆಗಳಿವೆ. ಇವು ಕೃಷ್ಣ ಚರಿತೆ, ಕೃಷ್ಣ ಲೀಲೆಗಳಿಗೆ ಸಂಬಂಧಿಸಿದವುಗಳು. ಭಾಗವತ ಕತೆಗಳನ್ನು ಮೊದಲಬಾರಿಗೆ ಕಲ್ಲಿನಲ್ಲಿ ಕೆತ್ತಿದ ಖ್ಯಾತಿ ಚಾಲುಕ್ಯ ಶಿಲ್ಪಗಳಿಗೆ ಸಲ್ಲುತ್ತದೆ. ಮೊಗಸಾಲೆಯ ಛತ್ತು ಸ್ವಸ್ತಿಕ ಮತ್ತು ಮತ್ಸ್ಯ ಚಕ್ರಗಳಿಂದ ಅಲಂಕೃತವಾಗಿದೆ. ಇಡಿ ಗುಹೆಯು ವರ್ಣರಂಜಿತವಾಗಿತ್ತು. ಅಲ್ಲಲ್ಲಿ ಗೋಚರಿಸುವ ಬಣ್ಣದ ಅವಶೇಷಗಳು ಇದನ್ನು ಸಮರ್ಥಿಸುತ್ತವೆ.
ನೈಸರ್ಗಿಕ ಗುಹೆ
ಎರಡನೆಯ ಗುಹಾಲಯದಿಂದ ಪೂರ್ವಕ್ಕೆ ಹತ್ತಿರದಲ್ಲಿ ಒಂದು ಸ್ವಾಭಾವಿಕ ಗುಹೆ ಗೋಚರಿಸುತ್ತದೆ. ನೈಸರ್ಗಿಕ ಗುಹೆಯ ಪೂರ್ವದ ಗೋಡೆಯಲ್ಲಿ ಬಹಳಷ್ಟು ಹಾಳಾಗಿರುವ ಶಿಲ್ಪವೊಂದಿದೆ. ಇದು ಪದ್ಮಪಾಣಿ ಬುದ್ಧನದು ಎಂದು ಗುರುತಿಸಲಾಗಿದೆ. ಬಾದಾಮಿಯಲ್ಲಿ ಸಿಗುವ ಬೌದ್ಧ ಶಿಲ್ಪ ಇದೊಂದೇ.
ಮಲಪ್ರಭೆಯ ಮಡಿಲು
ಬಾದಾಮಿ ಪರಿಸರವು ದೇವ ನಿರ್ಮಿತ ನೈಸರ್ಗಿಕ ಚೆಲವು, ಮಾನವ ನಿರ್ಮಿತ ವಾಸ್ತುಶಿಲ್ಪಗಳ ಬೆಡಗು ಬೆಸಗೊಂಡು ಭವ್ಯವಾದ ಕಲಾಕ್ಷೇತ್ರವೆನಿಸಿದೆ. ಹಲವು ಧರ್ಮ, ಮತ, ಪಂಥಗಳಿಗೆ ಆಸರೆ ನೀಡಿದ ಧರ್ಮಕ್ಷೇತ್ರವೂ ಹೌದು. ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲುಗಳು ಬಾಗಲಕೋಟೆ ಜಿಲ್ಲೆಯ ಸಾಂಸ್ಕೃತಿಕ ಜೀವನಾಡಿಯಾಗಿವೆ. ಮಲಪ್ರಭೆ ಇವಕ್ಕೆ ಜೀವ ನೀಡಿದ ಜಲಧಾರೆ. ನದಿಯು ನಿರ್ಮಿಸಿದ ಸುಮಾರು ೨೫ ಕಿ.ಮೀ. ಉದ್ದದ ಮತ್ತು ಐದಾರು ಕಿಲೋಮೀಟರ್ ಅಗಲದ ಭೂಪ್ರದೇಶವು ಸಮೃದ್ಧವಾದ ಕಲಾ ಪೈರನ್ನು ಬೆಳೆಯಿತು. ಪ್ರದೇಶವು ಮರಳುಗಲ್ಲಿನ ಭವ್ಯ ಬಂಡೆಗಳ ಶ್ರೇಣಿಗಳಿಂದ ಸುತ್ತುವರೆಯಲ್ಪಟ್ಟು ಕಲಾಕೃತಿಗೆ ಬೇಕಾದ ಶಿಲೆಯನ್ನು ಹೇರಳವಾಗಿ ಒದಗಿಸಿತು.
ಕರ್ನಾಟಕದ ರಾಜಕೀಯ, ಆರ್ಥಿಕ, ಧಾರ್ಮಿಕ ಹಾಗೂ ಕಲಾ ಬೆಳವಣಿಗೆಯಲ್ಲಿ ಮಲಪ್ರಭಾ ನದಿಯು ಮಹತ್ವದ ಪಾತ್ರ ವಹಿಸಿದೆ. ಲಕ್ಷಾಂತರ ವರ್ಷಗಳ ಹಿಂದೆ ಹಳೆಯ ಶಿಲಾಯುಗದ ಮಾನವನು ನದಿಯ ತೀರದಲ್ಲಿ ನೆಲೆ ಕಂಡ. ಮಲಪ್ರಭೆಯ ಬಯಲಿನಲ್ಲಿ ದೊರೆಯುತ್ತಿದ್ದ ಮರಳುಕಲ್ಲಿನ ಗಟ್ಟಿಗಳಿಂದ ಆದಿಮಾನವನು ಶಿಲಾ ಉಪಕರಣಗಳನ್ನು ತಯಾರಿಸಿ ಗೆಡ್ಡೆಗೆಣಸುಗಳನ್ನು ಅಗೆಯಲು, ಪ್ರಾಣಿಗಳನ್ನು ಕೊಲ್ಲಲು, ಅವುಗಳ ಎಲಬುಗಳಿಂದ ಮಾಂಸವನ್ನು ಕೀಳಲು ಬಳಸುತ್ತಿದ್ದ. ನದಿಯ ಪರಿಸರದಲ್ಲಿ ದೊರೆತ ಪ್ರಾಚೀನತಮ ಕಲ್ಲಿನ ಆಯುಧಗಳು ಕನಿಷ್ಟ ಸುಮಾರು ಮೂರು ಲಕ್ಷ ವರ್ಷ ಹಿಂದಿನವು. ಬಾದಾಮಿಯ ಸಾಬರ ಫಡಿಯಲ್ಲಿ ಬಗೆಯ ಆಯುಧಗಳು ದೊರೆತಿವೆ. ಭೂಭಾಗದಲ್ಲಿ ಚಾಚಿ ಕೊಂಡಿರುವ ಕಲ್ಬೆಟ್ಟದ ಶ್ರೇಣಿಯಲ್ಲಿಯ ಕಲ್ಲಾಸರೆಗಳು, ನೈಸರ್ಗಿಕ ಗುಹೆಗಳು ಶಿಲಾಯುಗದ ಮಾನವನಿಗೆ ಆಶ್ರಯ ತಾಣಗಳಾದವು.
ಐತಿಹಾಸಿಕ ಹಿನ್ನೆಲೆ
ಇತಿಹಾಸ ಕಾಲದ ಪ್ರಾರಂಭದಲ್ಲಿ ಕರ್ನಾಟಕವು ಮೌರ್ಯ ರಾಜ್ಯಕ್ಕೆ ಸೇರಿತ್ತು. ಬಳಿಕ ಶಾತವಾಹನರು ದಕ್ಷಿಣ ಭಾರತದ ಪ್ರಭುಗಳಾದರು. ಬಾದಾಮಿಯ ಸುತ್ತಮುತ್ತಲಿನ ನಾಗರಾಳ, ಬಾಚನಗುಡ್ಡ, ಐಹೊಳೆ ಮೊದಲಾದ ಕಡೆಗಳಲ್ಲಿ ಶಾತವಾಹನರ ಕಾಲದ ಮೃತ್ಪಾತ್ರೆಗಳು ನಾಣ್ಯಗಳು ದೊರೆತಿವೆ. ಇತ್ತೀಚಿನ ಉತ್ಖನನದಲ್ಲಿ ಬಾಚನಗುಡ್ಡದಲ್ಲಿ ದೊರೆತ(ಪಟ್ಟದಕಲ್ಲಿನ ಹತ್ತಿರ) ಇಟ್ಟಿಗೆಗಳ ತಳಪಾಯವು ದೇವಾಲಯದ್ದೆಂದೂ ಅದು ಸುಮಾರು ನಾಲ್ಕನೆಯ ಶತಮಾನದ್ದೆಂದೂ ತರ್ಕಿಸಲಾಗಿದೆ.
ಶಾತವಾಹನರ ಕಾಲಕ್ಕೆ ಬಾದಾಮಿ ಪ್ರಸಿದ್ಧ ನಗರವಾಗಿ ಹೆಸರು ಪಡೆದಿತ್ತು ಎಂದು ತೋರುತ್ತದೆ. ಟಾಲೆಮಿ (ಕ್ರಿ.. ೧೫೦) ಎಂಬಾತನು ರಚಿಸಿದ (A Guide to Geography) ಗ್ರಂಥದಲ್ಲಿ ಊರು ಉಲ್ಲೇಖಿತವಾಗಿದೆ. ಹೀಗೆ ಬೆಳೆದಿದ್ದ ನಗರವನ್ನು ಚಾಲುಕ್ಯರು (ಚಲುಕ್ಯರು) ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಅದಕ್ಕೆ ಅಧಿಷ್ಠಾನದ ಘನತೆ, ಗೌರವಗಳನ್ನು ತಂದುಕೊಟ್ಟರು.
ಭೌಗೋಳಿಕವಾಗಿ ಬಾದಾಮಿಯು ಕಲಾದಗಿ ಶಿಲಾಶ್ರೇಣಿಗೆ ಸೇರಿದೆ. ಇಲ್ಲಿಯ ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಬಾದಾಮಿಸಿಸ್ಟ್ಬ್ ಎಂದು ಕರೆಯಲಾಗುತ್ತದೆ. ಇಂತಹ ಬೆಟ್ಟದ ಶ್ರೇಣಿಗಳಿಂದ ಸುತ್ತುವರೆಯಲ್ಪಟ್ಟ ನಗರಕ್ಕೆ ನೈಸರ್ಗಿಕ ರಕ್ಷಣೆ ಲಭಿಸಿತು. ಬೆಟ್ಟದ ಬಂಡೆಗಳು ಕಡಿದಾಗಿವೆ, ಎತ್ತರವಾಗಿವೆ, ಅಂತೆಯೇ ಅಭೇದ್ಯವಾಗಿವೆ. ನಿಸರ್ಗವೇ ನಿರ್ಮಿಸಿದ ಕೋಟೆಯಂತಿರುವ ಬೆಟ್ಟವನ್ನು ಗಿರಿದುರ್ಗವನ್ನಾಗಿ ಮಾಡಿಕೊಂಡ ಜಾಣ್ಮೆ ಚಾಲುಕ್ಯ ವಂಶದ ಮೊದಲ ಸ್ವತಂತ್ರ ಅರಸನಾದ ಒಂದನೆಯ ಪುಲಕೇಶಿಯದ್ದಾಗಿದೆ.
ಚಾಲುಕ್ಯರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಸರ್ಗವನ್ನು ಬಳಸಿಕೊಂಡ ಬಗೆ ಅನುಕರಣೀಯವಾಗಿದೆ. ಕಲ್ಬೆಟ್ಟದಿಂದ ಮಳೆಯ ನೀರು ಜಲಪಾತವಾಗಿ, ಹಳ್ಳವಾಗಿ ಕೊಳ್ಳದಲ್ಲಿ ಹರಿಯುತ್ತಿದ್ದು ಅದಕ್ಕೆ ಅಡ್ಡಗೋಡೆಯನ್ನು ಕಟ್ಟಿ ಕೆರೆ ಅಗಸ್ತ್ಯತೀರ್ಥಯನ್ನು ನಿರ್ಮಿಸಿರುವಲ್ಲಿ ಅಂದಿನವರ ವಾಸ್ತುವಿದ್ಯಾ ಕೌಶಲ್ಯ ಪ್ರಕಟವಾಗಿದೆ.
ಬಾದಾಮಿಯ ಬೆಟ್ಟಗಳು ಅರಸರನ್ನು ಆಕರ್ಷಿಸಿದಂತೆ ಸ್ಥಪತಿಗಳನ್ನೂ, ರೂವಾರಿಗಳನ್ನೂ ಕೈಮಾಡಿ ಕರೆದವು. ಬಾದಾಮಿ, ಐಹೊಳೆಗಳಲ್ಲಿ ಬಂಡೆಗಳನ್ನು ಕೊರೆದು ಸ್ಥಪತಿಗಳು ಗುಹಾಮಂದಿರಗಳನ್ನು ರಚಿಸಿದರು. ಅವನ್ನು ರೂವಾರಿಗಳು ಶಿಲ್ಪಗಳಿಂದ ಸಿಂಗರಿಸಿದರು. ಬಾದಾಮಿಯ ಮಹಾವಿಷ್ಣುಗೃಹವು ಭಾರತದ ಶ್ರೇಷ್ಠ ಗುಹಾದೇವಾಲಯಗಳ ಸಾಲಿಗೆ ಸೇರುತ್ತದೆ. ಬಾದಾಮಿ, ಐಹೊಳೆ, ಮಹಾಕೂಟ ಹಾಗೂ ಪಟ್ಟದಕಲ್ಲುಗಳಲ್ಲಿ ರಾಚನಿಕ ಮಂದಿರಗಳ ನಿರ್ಮಾಣವು ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯಲು ಕಲ್ಬೆಟ್ಟಗಳೇ ಆಕರ ಹಾಗೂ ಪ್ರೇರಣೆ.
. ಚಾಲುಕ್ಯರ ಕಾಲ
ಚಾಲುಕ್ಯ (ಚಲುಕ್ಯ) ಎಂಬುದು ಬಾದಾಮಿಯನ್ನು ತಮ್ಮ ರಾಜಕೀಯ ಕೇಂದ್ರವನ್ನಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದ ಅರಸು ಮನೆತನದ ಹೆಸರು. ದಕ್ಷಿಣ ಭಾರತದಲ್ಲಿ ಪ್ರಬಲ ಸಾಮ್ರಾಜ್ಯವನ್ನು ಕಟ್ಟಿದ ಘನಗೌರವ ರಾಜವಂಶಕ್ಕೆ ಸಲ್ಲುತ್ತದೆ. ಚಾಲುಕ್ಯರ ಮೂಲವು ಪುರಾಣ ಕತೆಗಳಲ್ಲಿ ಸಿಲುಕಿಕೊಂಡು ಕಾಣದಾಗಿದೆ. ಅರಸು ಮನೆತನದ ಹೆಸರನ್ನು ಶಾಸನಗಳು ಚಲುಕ್ಯ ಎಂದೇ ಕರೆದಿವೆ. ಆದರೆ ಜನಪದರಲ್ಲಿ ಬಳಕೆಯಲ್ಲಿರುವ ಚಾಲುಕ್ಯ ಎಂಬ ಪದವನ್ನೇ ಇಲ್ಲಿ ಸ್ವೀಕರಿಸಲಾಗಿದೆ.
ಚಾಲುಕ್ಯರದು ಮಾನವ್ಯಗೋತ್ರ. ಇವರ ಕುಲದೇವತೆ ವಿಷ್ಣು. ವರಾಹ ಇವರ ರಾಜಲಾಂಛನ. ವೈಷ್ಣವ ಮತಾವಲಂಬಿಗಳಾದ ಇವರು ಪರಮ ಭಾಗವತರೆಂದು ಬಣ್ಣಿತರು. ನಂತರದ ಚಾಲುಕ್ಯ ಅರಸರು ಶೈವ ಧರ್ಮವನ್ನು ಪಾಲಿಸಿದರು. ಅವರು ಪರಮ ಮಾಹೇಶ್ವರರೆನಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಿವದೇವಾಲಯಗಳು ತಲೆ ಎತ್ತಿದವು. ಚಾಲುಕ್ಯರು ಕಾರ್ತಿಕೇಯನನ್ನು ಪೂಜಿಸಿದರು. ಸಪ್ತ ಮಾತೃಕೆಯರನ್ನು ಆರಾಧಿಸಿದರು. ಅವರ ಧರ್ಮಪ್ರಜ್ಞೆ ವಿಶಾಲವಾಗಿತ್ತು. ಅವರ ಆಶ್ರಯದಲ್ಲಿ ಸೌರಮತ, ಗಾಣಾಪತ್ಯ, ಶಾಕ್ತ, ಜೈನ ಮೊದಲಾದ ಮತ, ಧರ್ಮಗಳು ನಿರಾಂತಕವಾಗಿ ನೆಲೆಗೊಂಡಿದ್ದವು. ಚಾಲುಕ್ಯರು ಸರ್ವ ಧರ್ಮಗಳನ್ನು ಗೌರವಿಸಿದರು. ಅಂತೆಯೇ ಸರ್ವಧರ್ಮ ಸಮನ್ವಯತೆಯ ಹರಿಕಾರರೆನಿಸಿದರು.
ಚಾಲುಕ್ಯ ವಂಶದ ಮೂಲ ಪುರುಷ ಜಯಸಿಂಹ. ಈತನ ಮಗ ರಣರಾಗ. ಇವರೀರ್ವರ ಬಗ್ಗೆ ವಿವರಗಳು ಲಭ್ಯವಿಲ್ಲ. ಇವರು ಕದಂಬರ ಮಾಂಡಲಿಕರಾಗಿ ಐಹೊಳೆಯಲ್ಲಿ ಆಳ್ವಿಕೆ ನಡೆಸಿರಬಹುದೆಂದು ತೋರುತ್ತದೆ. ರಣರಾಗನ ಮಗನಾದ ಒಂದನೆಯ ಪುಲಿಕೇಶಿ (ಪೊಲೆಕೇಶಿ)ಯೇ ಅರಸು ಮನೆತನದ ನಿಜಸ್ಥಾಪಕನು. ಸುಮಾರು ಕ್ರಿ.. ೫೪೦ರಲ್ಲಿ ವಾತಾಪಿ(ಬಾದಾಮಿ)ಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಇವನು ಅಶ್ವಮೇಧ ಮೊದಲಾದ ಯಜ್ಞಗಳನ್ನು ಮಾಡಿ ಶ್ರೀವಲ್ಲಭನೆನಿಸಿದನು.
ಈತನ ಮಗನಾದ ಒಂದನೆಯ ಕೀರ್ತಿವರ್ಮನು ರಾಜ್ಯವನ್ನು ವಿಸ್ತರಿಸಿ ವಾತಾಪಿಯ ಪ್ರಥಮ ವಿಧಾತಾ ಎಂಬ ಗೌರವಕ್ಕೆ ಪಾತ್ರನಾದನು. ಇವನು ವೈರಿಗಳಿಗೆ ಕಾಳರಾತ್ರಿ ಯಾಗಿದ್ದನೆಂದು ಶಾಸನವು ಬಣ್ಣಿಸಿದೆ. ಒಂದನೆಯ ಕೀರ್ತಿವರ್ಮನು ಆಳುತ್ತಿರುವಾಗ ಆತನ ತಮ್ಮನಾದ ಮಂಗಳೇಶನು ಬಾದಾಮಿಯಲ್ಲಿ ಅತ್ಯದ್ಭುತ ವಾಸ್ತುರಚನೆ ಎನಿಸಿರುವ ಮಹಾವಿಷ್ಣು ಗೃಹವನ್ನು ಕೊರೆಯಿಸಿದನು.
ಒಂದನೆಯ ಕೀರ್ತಿವರ್ಮನು ತೀರಿದಾಗ ಮಗನಾದ ಇಮ್ಮಡಿ ಪುಲಿಕೇಶಿಯು ಚಿಕ್ಕವನಾದ್ದರಿಂದ ಮಂಗಳೇಶನು ರಾಜ್ಯಭಾರವನ್ನು ತಾನೇ ಹೊತ್ತುಕೊಂಡನು. ಇವನು ಬಲಾಢ್ಯ ಯೋಧನಾಗಿದ್ದನು. ಕಳಚೂರಿಯ ಶಂಕರಗಣ ಮತ್ತು ಬುದ್ಧವರ್ಮರನ್ನು ಸೋಲಿಸಿ ಯುದ್ಧ ಸಂಪತ್ತನ್ನು ಮಹಾಕೂಟದ ಮಕುಟೇಶ್ವರನಾಥನಿಗೆ ಸಮರ್ಪಿಸಿ ಧರ್ಮಸ್ತಂಭವನ್ನು ನಿಲ್ಲಿಸಿದನು. ಇಮ್ಮಡಿ ಪುಲಿಕೇಶಿಯು ಪ್ರಾಪ್ತ ವಯಸ್ಕನಾದ ನಂತರವೂ ಮಂಗಳೇಶನು ಸಿಂಹಾಸನವನ್ನು ಬಿಟ್ಟುಕೊಡಲಿಲ್ಲ. ತರುಣ ಯುವರಾಜನು ಸೈನ್ಯವನ್ನು ಸಂಘಟಿಸಿ ಮಂಗಳೇಶನ ಮೇಲೆ ಏರಿಬಂದನು. ಯುದ್ಧದಲ್ಲಿ ಚಿಕ್ಕಪ್ಪನನ್ನು ಕೊಂದು ತನ್ನ ಹಕ್ಕಿನ ಸಿಂಹಾಸನವನ್ನೇರಿದನು. ದಂಗೆ ಎದ್ದ ಮಾಂಡಲಿಕರನ್ನು ಬಗ್ಗು ಬಡಿದನು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಆಳುಪರು, ಕೊಂಕಣದ ಮೌರ್ಯರು, ಲಾಟದ ಅರಸರು ಇಮ್ಮಡಿ ಪುಲಿಕೇಶಿಯ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಉತ್ತರದ ಸಾಮ್ರಾಟನಾಗಿದ್ದ ಹರ್ಷವರ್ಧನನನ್ನು ನರ್ಮದೆಯ ತೀರದಲ್ಲಿ ಪರಾಭವಗೊಳಿಸಿ ದಕ್ಷಿಣಾಪಥೇಶ್ವರನೆನಿಸಿದ. ಪಲ್ಲವ ಅರಸನಾದ ಒಂದನೆಯ ಮಹೇಂದ್ರವರ್ಮನನ್ನು ಸೋಲಿಸಿದ. ಇದರಿಂದಾಗಿ ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯವು ನರ್ಮದಾ ಮತ್ತು ಕಾವೇರಿಗಳ ನಡುವಿನ ಭೂಭಾಗವನ್ನು ಆವರಿಸಿತ್ತು. ಪೂರ್ವಪಶ್ಚಿಮಗಳ ಸಮುದ್ರತೀರದವರೆಗೆ ಚಾಚಿಕೊಂಡಿತ್ತು. ಸಮ್ರಾಟನು ೯೯೦೦೦ ಗ್ರಾಮಗಳನ್ನೊಳಗೊಂಡ ಮಹಾರಾಷ್ಟ್ರಕ ತ್ರಯವೆನಿಸಿದ ವಿಶಾಲ ಭೂಪ್ರದೇಶದ ಪ್ರಭುವಾಗಿದ್ದನು. ಈತನ ಕಾಲದಲ್ಲಿ ದಕ್ಷಿಣ ಭಾರತವನ್ನು ಸಂದರ್ಶಿಸಿದ ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗನು ಚಾಲುಕ್ಯರ ನಾಡು, ನಾಡವರ ಬಗ್ಗೆ ಕೊಂಡಾಡಿದ್ದಾನೆ.
ಇಮ್ಮಡಿ ಪುಲಿಕೇಶಿಯು ಕಲಾ ಪೋಷಕನೂ ಆಗಿದ್ದನು. ಇವನ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಐಹೊಳೆಯಲ್ಲಿ ಜಿನಾಲಯವನ್ನು ನಿರ್ಮಿಸಿದನು. ಕ್ರಿ.. ೬೩೪ರಲ್ಲಿ ನಿರ್ಮಾಣಗೊಂಡ ಮೇಗುತಿಯು ಕರ್ನಾಟಕದ ವಾಸ್ತುಕಲೆಯ ವಿಶಿಷ್ಟ ಕಲಾಕೃತಿ ಎನಿಸಿದೆ.
ಚಾಲುಕ್ಯ ವಂಶದ ಸರ್ವಶ್ರೇಷ್ಠ ಸಾಮ್ರಾಟನಾದ ಇಮ್ಮಡಿ ಪುಲಿಕೇಶಿಯು ಬಾದಾಮಿ ಯಲ್ಲಿಯೇ ಪಲ್ಲವ ನರಸಿಂಹವರ್ಮನಿಂದ ಪರಾಭವಗೊಂಡಿದ್ದು ವಿಧಿಯ ಅಟ್ಟಹಾಸವೇ ಸರಿ. ತಂದೆಯಾದ ಒಂದನೆಯ ಮಹೇಂದ್ರವರ್ಮನ ಸೋಲಿನ ಸೇಡನ್ನು ತೀರಿಸಿಕೊಂಡು ನರಸಿಂಹವರ್ಮನು ವಾತಾಪಿಕೊಂಡನೆನಿಸಿದನು. ಸುಮಾರು ಹದಿಮೂರು ವರ್ಷಗಳ ಕಾಲ ಚಾಲುಕ್ಯ ಸಿಂಹಾಸನವು ರಾಜಕೀಯ ಗ್ರಹಣದ ಕತ್ತಲಲ್ಲಿ ಉಳಿಯಿತು.
ಕ್ರಿ.. ೬೫೫ರಲ್ಲಿ ಪಲ್ಲವರ ಏಡಿ ಹಿಡಿತದಿಂದ ಬಾದಾಮಿಯನ್ನು ಬಿಡಿಸಿಕೊಳ್ಳುವಲ್ಲಿ ಇಮ್ಮಡಿ ಪುಲಿಕೇಶಿಯ ಮಗನಾದ ಒಂದನೆಯ ವಿಕ್ರಮಾದಿತ್ಯನು ಯಶಸ್ವಿಯಾದನು. ನರಸಿಂಹವರ್ಮನನ್ನು ಮಾತ್ರವಲ್ಲದೆ ಆತನ ಮಗ ಇಮ್ಮಡಿ ಮಹೇಂದ್ರವರ್ಮ, ಮೊಮ್ಮಗ ಒಂದನೆಯ ಪರಮೇಶ್ವರನನ್ನು ಯುದ್ಧದಲ್ಲಿ ಸೋಲಿಸಿ ಯಶೋವಂತನೆನಿಸಿದನು. ಈತನ ಗೆಲುವಿಗೆ ಆತನ ಕುದುರೆ ಚಿತ್ರಕಂಠ ಮತ್ತು ಖಡ್ಗಗಳು ನೆರವಾದವೆಂದು ಬಣ್ಣಿಸಲಾಗಿದೆ.
ವಿಕ್ರಮಾದಿತ್ಯನು ಸುದರ್ಶನಾಚಾರ್ಯರಿಂದ ಶಿವಮಂಡಲ ದೀಕ್ಷೆಯನ್ನು ಪಡೆದದ್ದು ಮಹತ್ವದ ಘಟನೆ. ಇವನ ನಂತರದ ಚಾಲುಕ್ಯ ಅರಸರು ಶೈವಧರ್ಮಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಮಹಾಕೂಟ ಮತ್ತು ಪಟ್ಟದಕಲ್ಲು ಶೈವ ಕೇಂದ್ರಗಳಾಗಿ ಬೆಳೆದವು.
ವಿಕ್ರಮಾದಿತ್ಯನು ಮಡಿದ ನಂತರ ಮಗನಾದ ವಿನಯಾದಿತ್ಯನು ಪಟ್ಟವೇರಿದನು. ಈತನ ಆಳ್ವಿಕೆ (೬೮೧-೬೯೬) ಶಾಂತಿಯುತವೂ, ವೈಭವಯುತವೂ ಆಗಿತ್ತೆಂದು ಶಾಸನಗಳು ಬಣ್ಣಿಸಿವೆ. ಇವನ ಅರಸಿ ವಿನಯವತಿಯು ಬಾದಾಮಿಯಲ್ಲಿ ಬ್ರಹ್ಮ, ಈಶ್ವರ, ವಿಷ್ಣು ವಿಗ್ರಹಗಳಿಗಾಗಿ ಮೂರು ಪ್ರತ್ಯೇಕ ಗರ್ಭಗೃಹಗಳಿರುವ ಜಂಬುಲಿಂಗ ದೇವಾಲಯವನ್ನು ಕಟ್ಟಿಸಿದಳು. ಇದು ದಕ್ಷಿಣ ಭಾರತದ ಪ್ರಪ್ರಥಮ ತ್ರಿಕೂಟಾಲಯವೆನಿಸಿದೆ. ಆಂಧ್ರಪ್ರದೇಶದ ಆಲಂಪುರದಲ್ಲಿ ನಿರ್ಮಿತವಾದ ಸ್ವರ್ಗಬ್ರಹ್ಮ ದೇವಾಲಯವು ವಿನಯಾದಿತ್ಯನ ಕಾಲದ ಮತ್ತೊಂದು ಮಹತ್ವದ ವಾಸ್ತು ರಚನೆಯಾಗಿದೆ.
ಈತನ ಮಗನಾದ ವಿಜಯಾದಿತ್ಯನು ಕ್ರಿ.. ೬೯೬ರಲ್ಲಿ ಸಿಂಹಾಸನವನ್ನೇರಿ ೭೩೩ರ ವರೆಗೆ ಸುದೀರ್ಘ ಕಾಲ ರಾಜ್ಯವನ್ನಾಳಿದನು. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ದೇವಾಲಯ ವನ್ನು ನಿರ್ಮಿಸಿ ನಗರವನ್ನು ಸಿಂಗರಿಸಿದನು. ಸಮೀಪದ ಮಹಾಕೂಟ, ನಾಗರಾಳಗಳಲ್ಲಿ, ದೂರದ ಆಲಂಪುರ (ಆಂಧ್ರಪ್ರದೇಶ)ದಲ್ಲಿ ದೇವಾಲಯಗಳನ್ನು ನಿರ್ಮಿಸಿದನು. ಈತನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯು ಮಹಾಕೂಟದ ಮಕುಟೇಶ್ವರನಿಗೆ ಬೆಳ್ಳಿಯ ಕೊಡೆ, ರತ್ನಖಚಿತ ಪೀಠವನ್ನು ಮತ್ತು ೮೦೦ ಮತ್ತರ ಭೂಮಿಯನ್ನು ಅರ್ಪಿಸಿದಳು.
ವಿಜಯಾದಿತ್ಯನ ಬಳಿಕ ಆತನ ಮಗ ಇಮ್ಮಡಿ ವಿಕ್ರಮಾದಿತ್ಯನು ಪಟ್ಟಕ್ಕೆ ಬಂದನು. ತಂದೆಯು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿಯೇ ವಿಕ್ರಮಾದಿತ್ಯನು ದಂಡೆತ್ತಿ ಬಂದು ಕಾಂಚಿಪುರವನ್ನು ಹೊಕ್ಕು ಪಲ್ಲವನನ್ನು ಸೋಲಿಸಿ ಕಪ್ಪ, ಕಾಣಿಕೆಗಳನ್ನು ಪಡೆದುಕೊಂಡಿದ್ದನು. ತನ್ನ ಆಳ್ವಿಕೆಯಲ್ಲಿ ಮತ್ತೆ ಕಾಂಚಿಯನ್ನು ಮುತ್ತಿದ. ಪಲ್ಲವ ದೊರೆ ರಾಜಲಾಂಛನಗಳನ್ನು ತೊರೆದು ಪಲಾಯನ ಮಾಡಿದ. ಇಮ್ಮಡಿ ವಿಕ್ರಮಾದಿತ್ಯನು ಕಾಂಚಿ ರಾಜಧಾನಿಯನ್ನು ವಶಪಡಿಸಿಕೊಂಡ. ಅಲ್ಲಿದ್ದ ರಾಜಸಿಂಹೇಶ್ವರ ಗುಡಿಯನ್ನು ಕಂಡು ವಿಸ್ಮಿತನಾದ. ಯುದ್ಧ ಸಂಪತ್ತನ್ನು ದೇವಾಲಯಕ್ಕೆ ಬಿಟ್ಟುಕೊಟ್ಟು ಚಾಲುಕ್ಯ ದೊರೆಯು ಔದಾರ್ಯವನ್ನು ತೋರಿದ. ಇತಿಹಾಸದಲ್ಲಿ ಇದೊಂದು ಅಪರೂಪದ ಘಟನೆ.
ಕಾಂಚಿ ವಿಜಯದ ಸವಿ ನೆನಪಿಗಾಗಿ ಈತನ ಅರಸಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯವರು ಎರಡು ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ಅವೇ ಇಂದು ಪಟ್ಟದಕಲ್ಲಿನಲ್ಲಿ ನಾವು ನೋಡುವ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಗುಡಿಗಳು. ಅದರ ಸ್ಥಪತಿಗಳಾದ ಸರ್ವಸಿದ್ದಿ ಆಚಾರಿ ಹಾಗೂ ಗುಂಡ ಅನಿವಾರಿತಾಚಾರಿಗಳಿಗೆ ಅರಸನು ಬಿರುದುಗಳನ್ನು ನೀಡಿ ಸನ್ಮಾನಿಸಿದುದು ಚಾಲುಕ್ಯ ಅರಸರ ಕಲಾಪ್ರೀತಿಯ ದ್ಯೋತಕವಾಗಿದೆ.
ಬಾದಾಮಿ ಚಾಲುಕ್ಯರ ವಂಶಾವಳಿ
ಜಯಸಿಂಹ (ಸು.ಕ್ರಿ.. ೫೦೦-೫೨೦)
            |
ರಣರಾಗ (ಸು. ೫೨೦-೫೪೦)
            |
ಒಂದನೆಯ ಪುಲಿಕೇಶಿ (ಸು. ೫೪೦-೫೬೬)
            |                                                                       |
            ಒಂದನೆಯ ಕೀರ್ತಿವರ್ಮ (೫೬೬-೫೯೬)       ಮಂಗಳೇಶ (೫೯೬-೬೧೦)
            |                                               |           |                       |
            ಇಮ್ಮಡಿ ಪುಲಿಕೇಶಿ         ವಿಷ್ಣುವರ್ಧನ      ಧರಾಶ್ರಯ        ಬುದ್ಧವರಸ
(೬೧೦-೬೪೨)                 ಜಯಸಿಂಹ
                        |                       |                            |                       |
ಆದಿತ್ಯವರ್ಮ     ಚಂದ್ರಾದಿತ್ಯ     ರಣರಾಗವರ್ಮ   ಒಂದನೆಯ ಜಯಸಿಂಹ
ವಿಕ್ರಮಾದಿತ್ಯ
(೬೫೫-೬೮೧)
                                                |
                                    ವಿನಯಾದಿತ್ಯ
(೬೮೧-೬೯೬)
                                                |
                                    ವಿಜಯಾದಿತ್ಯ
(೬೯೬-೭೩೩)
                                                |
                                    ಇಮ್ಮಡಿ ವಿಕ್ರಮಾದಿತ್ಯ
(೭೩೩-೭೪೫)
                                                |
                                    ಇಮ್ಮಡಿ ಕೀರ್ತಿವರ್ಮ
(೭೪೫-೭೫೭)
ಇಮ್ಮಡಿ ವಿಕ್ರಮಾದಿತ್ಯನ ಮಗನಾದ ಇಮ್ಮಡಿ ಕೀರ್ತಿವರ್ಮನು (೭೪೫-೭೫೭) ಚಾಲುಕ್ಯ ವಂಶದ ಕೊನೆಯ ಅರಸ. ಯುವರಾಜನಾಗಿ ಪಲ್ಲವರೊಡನೆ ಹೋರಾಡಿ ಜಯಶಾಲಿಯಾಗಿದ್ದ. ಆದರೆ ಅರಸನಾಗಿ ರಾಷ್ಟ್ರಕೂಟ ದಂತಿದುರ್ಗನಿಂದ ಪರಾಜಿತನಾದ. ಅಲ್ಲಿಗೆ ಚಾಲುಕ್ಯ ಆದಿತ್ಯ ಅಸ್ತಂಗತನಾದ.
. ಚಾಲುಕ್ಯೋತ್ತರ ಕಾಲ
ರಾಜಧಾನಿಯ ಪಟ್ಟದಿಂದ ವಂಚಿತವಾದ ಬಳಿಕ ಬಾದಾಮಿಯು ಬೇರೆ ಬೇರೆ ಅರಸು ಮನೆತನಗಳ ಆಡಳಿತಕ್ಕೆ ಒಳಪಟ್ಟಿತು. ದಂತಿದುರ್ಗ, ಅಮೋಘವರ್ಷ, ಇಮ್ಮಡಿಕೃಷ್ಣ, ಖೊಟ್ಟಿಗ, ಅಮೋಘವರ್ಷ ಮೊದಲಾದ ರಾಷ್ಟ್ರಕೂಟ ಅರಸರು ಪ್ರದೇಶವನ್ನು ಆಳಿದುದು ಶಾಸನಗಳಿಂದ ವಿದಿತವಾಗುತ್ತದೆ. ಹಾಗೆಯೇ ಕಲ್ಯಾಣಚಾಲುಕ್ಯ ವಂಶದ ಮೊದಲನೆಯ ಜಗದೇಕಮಲ್ಲ, ಮೊದಲನೆಯ ಸೋಮೇಶ್ವರ, ಇಮ್ಮಡಿ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ, ಇಮ್ಮಡಿ ಜಗದೇಕಮಲ್ಲ ಮೊದಲಾದ ಅರಸರ ಒಡೆತನಕ್ಕೆ ಬಾದಾಮಿ ಪ್ರದೇಶವು ಸೇರಿದಿ್ದತು.
ಇಮ್ಮಡಿ ಜಗದೇಕಮಲ್ಲನ (ಕ್ರಿ.. ೧೧೩೯-೪೦ರ) ಶಾಸನದಲ್ಲಿ ಕಾಣಿಸಿಕೊಂಡ ಬಾದಾಮಿಯ ಹೆಸರು ಮತ್ತೆ ಉಕ್ತವಾದದ್ದು ವಿಜಯನಗರದ ಅರಸು ಹರಿಹರರಾಯನ (ಕ್ರಿ.. ೧೩೩೯-೪೦) ಶಾಸನದಲ್ಲಿ. ನಡುವಿನ ಇನ್ನೂರು ವರ್ಷಗಳ ಬಾದಾಮಿಯ ಇತಿಹಾಸವು ಕಾಲದ ಕತ್ತಲಲ್ಲಿ ಅವಿತುಕೊಂಡಿದೆ. ಹರಿಹರರಾಯನ ವೇಳೆಗೆ ಬಾದಾಮಿ ಪುಟ್ಟಗ್ರಾಮದ ಗಾತ್ರಕ್ಕೆ ಕುಗ್ಗಿತ್ತು.
ರಕ್ಕಸತಂಗಡಿ ಕದನ(೧೫೬೫) ನಂತರ ಬಾದಾಮಿ ಪ್ರದೇಶವು ಆದಿಲಶಾಹಿಗಳ ಒಡೆತನಕ್ಕೆ ಸೇರಿತ್ತು. ಬಳಿಕ ಅದು ಸವಣೂರಿನ ನವಾಬನ ಆಧೀನವಾಯಿತು. ನಂತರ ಮರಾಠಾ ಪೇಶ್ವೆ ಬಾದಾಮಿಯನ್ನು (೧೭೫೬ರಲ್ಲಿ) ನವಾಬನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾದನು.
೧೭೭೪-೭೮ರ ಅವಧಿಯಲ್ಲಿ ಹೈದರನು ಕೃಷ್ಣಾನದಿಯ ದಕ್ಷಿಣ ಭಾಗವನ್ನು ಆಕ್ರಮಿಸಿಕೊಂಡನು. ನಾನಾ ಪಡ್ನವೀಸನು ನಿಜಾಮನ ಸೈನ್ಯದ ಸಹಾಯದಿಂದ ೧೭೮೬ ಮೇ, ೧ರಂದು ಬಾದಾಮಿ ಪ್ರದೇಶವನ್ನು ಮುತ್ತಿದನು. ಯುದ್ಧದಲ್ಲಿ ಟೀಪುಸುಲ್ತಾನನು ಜಯಶಾಲಿಯಾದನು. ಆದರೆ ೧೭೮೭ರ ಶಾಂತಿ ಒಪ್ಪಂದವು ಮರಾಠರಿಗೆ ಲಾಭದಾಯಕ ವಾಯಿತು. ಅದರನ್ವಯ ಟೀಪು ಬಾದಾಮಿ, ನರಗುಂದ, ಗಜೇಂದ್ರಗಡ ಮತ್ತು ಕಿತ್ತೂರು ಗಳನ್ನು ಬಿಟ್ಟು ಕೊಡಬೇಕಾಯಿತು. ಮುಂದೆ ೧೮೧೮ರಲ್ಲಿ ನಡೆದ ಮರಾಠಾ ಯುದ್ಧದಲ್ಲಿ ಜನರಲ್ ಮನ್ರೋ ಬಾದಾಮಿಯನ್ನು ಬ್ರಿಟಿಶರ ಆಡಳಿತಕ್ಕೆ ಸೇರಿಸಿದ.
ಚಾಲುಕ್ಯ ವಾಸ್ತು ಲಕ್ಷಣಗಳು
ಬಾದಾಮಿ ಚಾಲುಕ್ಯರ ವಾಸ್ತು ನಿರ್ಮಿತಿಗಳು ಪ್ರಧಾನವಾಗಿ ಬಾದಾಮಿ, ಐಹೊಳೆ, ಮಹಾಕೂಟ, ಪಟ್ಟದಕಲ್ಲು, ಆಲಂಪುರ(ಆಂಧ್ರಪ್ರದೇಶ)ಗಳಲ್ಲಿ ಕೇಂದ್ರೀಕೃತವಾಗಿವೆ. ಕ್ರಿ.. -೮ನೆಯ ಶತಮಾನಗಳಲ್ಲಿ ನಿರ್ಮಾಣಗೊಂಡ ಸ್ಮಾರಕಗಳು ಭಾರತದ ಉತ್ಕೃಷ್ಟ ದೇವಾಲಯಗಳ ಸಾಲಿಗೆ ಸೇರಿವೆ. ದೇವಾಲಯಗಳಲ್ಲಿ ಕಂಡುಬರುವ ವಾಸ್ತುವೈವಿಧ್ಯಗಳು ವಿಸ್ಮಯಕಾರಿಯಾಗಿವೆ. ಬಗೆಬಗೆಯ ತಲ ವಿನ್ಯಾಸಗಳು, ವಿಭಿನ್ನ ಶಿಖರಶೈಲಿಗಳು, ವಿವಿಧ ಪ್ರಕಾರದ ಶಿಲ್ಪಗಳು ಅಂದಿನ ಸ್ಥಪತಿಗಳ, ರೂವಾರಿಗಳ ಸೃಜನಶೀಲತೆ ಹಾಗೂ ಉತ್ಸಾಹದ ಪ್ರತೀಕವಾಗಿವೆ. ಎರಡು ಶತಮಾನಗಳಲ್ಲಿ ವಾಸ್ತುಕಲೆ ಸಮೃದ್ಧವಾಗಿ ಬೆಳೆಯಿತು. ಚಾಲುಕ್ಯ ವಾಸ್ತುಕಲೆಯು ಭಾರತೀಯ ಕಲಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಚಾಲುಕ್ಯರ ವಾಸ್ತುಕಲೆಯು ಐಹೊಳೆ, ಬಾದಾಮಿಗಳಲ್ಲಿ ಚಿಗುರೊಡೆಯಿತು. ಅಜಂತಾ, ಎಲ್ಲೋರಾದ ಗುಹಾದೇವಾಲಯಗಳು ಬಾದಾಮಿ ಪ್ರದೇಶದ ಕಲಾವಿದರ ಕಲಾಸತ್ವವನ್ನು ಬಡಿದೆಬ್ಬಿಸಿರಬೇಕು. ವಾಕಾಟಕರ ಕಲಾ ಪರಂಪರೆಯಿಂದ ಪ್ರಭಾವಿತರಾದ ಇಲ್ಲಿಯ ಸ್ಥಪತಿಗಳು, ರೂವಾರಿಗಳು, ಗುಹಾಲಯಗಳಲ್ಲಿ ರಾಚನಿಕ ಮಂದಿರಗಳಲ್ಲಿ ತಮ್ಮದೇ ಆದ ಕಲಾ ವೈಶಿಷ್ಟ್ಯವನ್ನು ಸ್ಥಾಪಿಸಿದ್ದಾರೆ. ಪ್ರಯೋಗಶೀಲ ಗುಣವಿಶೇಷದಿಂದಾಗಿ ವೈವಿಧ್ಯವನ್ನು, ಸಂಕೀರ್ಣತೆಯನ್ನು ಮತ್ತು ಪರಿಪೂರ್ಣತೆಯನ್ನು ಸಾಧಿಸಿದ್ದಾರೆ.
ಚಾಲುಕ್ಯರ ವಾಸ್ತು ಕಲಾಕೃತಿಗಳನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. ಅವು . ಗುಹಾ ದೇವಾಲಯಗಳು . ರಾಚನಿಕ ದೇವಾಲಯಗಳು. ಇವೆರಡು ಬಗೆಯ ಕಟ್ಟಡ ರಚನಾತಂತ್ರ ವಿಭಿನ್ನವಾದುದು. ಗುಹಾ ದೇವಾಲಯವೆಂದರೆ ಬೃಹದಾಕಾರದ ಕಲ್ಲನ್ನು ಕೊರೆದು ನಿರ್ಮಿಸಲಾದ ದೇವಾಲಯ. ರಚಿತ ಮಂದಿರದಲ್ಲಿ ಕಂಬ, ತೊಲೆ ಮೊದಲಾದ ಭಾಗಗಳನ್ನು ಇಚ್ಛಿಸಿದ ಬಗೆಯಲ್ಲಿ ಜೋಡಿಸಲಾಗುತ್ತದೆ. ವಾಸ್ತು ರಚನೆಯು ಕಟ್ಟಡದ ತಳಪಾಯದಿಂದ ಪ್ರಾರಂಭವಾಗುತ್ತದೆ. ನಂತರ ಹಂತ ಹಂತವಾಗಿ ಅಧಿಷ್ಠಾನ, ಗೋಡೆ, ಶಿಖರಗಳನ್ನು ಕಟ್ಟಲಾಗುತ್ತದೆ. ಗುಹಾಲಯ ನಿರ್ಮಾಣದಲ್ಲಿ ಬಂಡೆಯನ್ನು ಕೊರೆಯುವ ಕೆಲಸವು ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಗುಹಾಲಯದ ಮೇಲ್ಛಾವಣಿಯು ಮೊದಲು ಸಿದ್ಧವಾಗುತ್ತದೆ. ಕೊನೆಯ ಹಂತದಲ್ಲಿ ಅಧಿಷ್ಠಾನ, ಪಾವಟಿಗೆಗಳನ್ನು ಕಂಡರಿಸಲಾಗುತ್ತದೆ. ಬೇಡಾದ ಶಿಲಾಭಾಗವನ್ನು ಕತ್ತರಿಸಿ ಹೊರತೆಗೆಯುವ ತಂತ್ರ ಗುಹಾಲಯಗಳದ್ದು. ಆದ್ದರಿಂದ ಗುಹಾ ನಿರ್ಮಾಣದ ಸೂತ್ರ ವ್ಯವಕಲನ. ಬೇಕಾದ ಭಾಗಗಳನ್ನು ತಂದು ಕೂಡಿಸುವ ತಂತ್ರ ರಚಿತ ಕಟ್ಟಡದ್ದು. ಹೀಗಾಗಿ ರಾಚನಿಕ ಗುಡಿಗಳ ರಚನಾಸೂತ್ರ ಸಂಕಲನ. ಆದ್ದರಿಂದ ಇವೆರಡು ವಾಸ್ತುರಚನೆಗಳ ಲಕ್ಷಣಗಳನ್ನು ಪ್ರತ್ಯೇಕವಾಗಿ ಅಭ್ಯಸಿಸಬಹುದು.
. ಗುಹಾದೇವಾಲಯಗಳು
ಚಾಲುಕ್ಯ ರೂವಾರಿಗಳು ಬಾದಾಮಿ ಮತ್ತು ಐಹೊಳೆಯಲ್ಲಿ ಒಟ್ಟು ಒಂಬತ್ತು ಗುಹಾ ದೇವಾಲಯಗಳನ್ನು ಕೊರೆದಿದ್ದಾರೆ. ಅವುಗಳಲ್ಲಿ ಐದು ಗುಹಾಲಯಗಳು ಐಹೊಳೆಯಲ್ಲಿವೆ. ನಾಲ್ಕು ಬಾದಾಮಿಯಲ್ಲಿವೆ. ಇವುಗಳಲ್ಲಿಯ ಸಾಮಾನ್ಯ ವಾಸ್ತು ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಬಹುದು.
. ಗುಹಾದೇವಾಲಯಗಳ ಮುಂಭಾಗದಲ್ಲಿ ವಿಶಾಲವಾದ ಅಂಗಳವಿರುತ್ತದೆ. ಅಂಗಳದ ವಿಸ್ತೀರ್ಣ ಹೆಚ್ಚು ಕಡಿಮೆಯಾಗಿರಬಹುದು.
. ಗುಹಾಲಯಗಳ ತಳವಿನ್ಯಾಸವು ಸಾಮಾನ್ಯವಾಗಿ ಚಿಕ್ಕ ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪವನ್ನು ಒಳಗೊಂಡಿರುತ್ತದೆ. ಐಹೊಳೆಯ ರಾವಣಫಡಿಯ ತಲವಿನ್ಯಾಸವು ತೀರ ಭಿನ್ನವಾಗಿದ್ದು ವಾಕಾಟಕರ ವಾಸ್ತು ಪ್ರಭಾವಕ್ಕೆ ಸಿಲುಕಿದಂತೆ ತೋರುತ್ತದೆ.
. ಗುಹಾಲಯಗಳಿಗೆ ಅಧಿಷ್ಠಾನ ಭಾಗವಿರುತ್ತದೆ ಮತ್ತು ಅದರಲ್ಲಿ ಗಣಗಳ ಸಾಲನ್ನು ಕೆತ್ತಲಾಗಿರುತ್ತದೆ.
. ಗರ್ಭಗೃಹಕ್ಕೆ ಪ್ರತ್ಯೇಕ ಮೆಟ್ಟಿಲುಗಳಿದ್ದು ದೇವಪೀಠವು ಎತ್ತರದಲ್ಲಿರುವಂತೆ ರೂಪಿಸಲಾಗಿರುತ್ತದೆ.
. ಗುಹಾಲಯಗಳಿಗೆ ಪ್ರದಕ್ಷಿಣಾ ಪಥವಿಲ್ಲ.
. ಮುಖಮಂಟಪದ ಮುಂಭಾಗದಲ್ಲಿ ಸಾಮಾನ್ಯವಾಗಿ ನಾಲ್ಕು ಕಂಬಗಳಿರುತ್ತವೆ. ಐಹೊಳೆಯ ರಾವಣಫಡಿಯಲ್ಲಿ ಎರಡು ಕಂಬಗಳಿದ್ದರೆ ಬಾದಾಮಿಯ ಮಹಾವಿಷ್ಣು ಗೃಹಕ್ಕೆ ಆರು ಕಂಬಗಳಿವೆ.
. ಮುಖಮಂಟಪದ ಎಡಬಲಕ್ಕಿರುವ ಗೋಡೆಗಳ ಮೇಲೆ ಬೃಹತ್ಶಿಲ್ಪಗಳನ್ನು ಕಂಡರಿಸಲಾಗಿದೆ. ಇವು ಸಾಮಾನ್ಯವಾಗಿ ದೇವಶಿಲ್ಪಗಳು.
. ಕಂಬಗಳು ಚೌಕಾಕಾರವಾಗಿವೆ. ಅವುಗಳ ಮೇಲಿನ ಅರ್ಧಭಾಗದಲ್ಲಿ ಜ್ಯಾಮಿತಿ, ಪುಷ್ಪ ನಕ್ಷೆಗಳ ಕೆತ್ತನೆ ಇರುತ್ತದೆ.
. ಗುಹಾಲಯದ ಮುಖಮಂಟಪ ಮತ್ತು ಸಭಾಮಂಟಪವನ್ನು ಬೇರ್ಪಡಿಸುವ ಎರಡು ಇಲ್ಲವೆ ನಾಲ್ಕು ಕಂಬಗಳನ್ನು ಹೆಚ್ಚು ಕಲಾತ್ಮಕವಾಗಿ ರೂಪಿಸಲಾಗಿದೆ.
೧೦. ಗುಹಾಲಯಗಳ ತೊಲೆಗಳು ಕಥಾನಕ ಶಿಲ್ಪಗಳಿಂದ ಅಲಂಕೃತವಾಗಿವೆ.
೧೧. ಛತ್ತಿನಲ್ಲಿ ಸ್ವಸ್ತಿಕ, ಪುಷ್ಪನಕ್ಷೆಗಳು ಇಲ್ಲವೆ ಗಂಧರ್ವ ದಂಪತಿ, ನಾಗರಾಜ, ದಿಕ್ಪಾಲಕರ ಉಬ್ಬು ಶಿಲ್ಪಗಳಿವೆ.
೧೨. ಗುಹಾಲಯಗಳು ವರ್ಣಚಿತ್ರಗಳಿಂದ ಕೂಡಿ ಹೆಚ್ಚು ಆಕರ್ಷಕವಾಗಿದ್ದವು. ಬಾದಾಮಿಯ ವೈಷ್ಣವ ಗುಹೆಗಳಲ್ಲಿ, ಐಹೊಳೆಯ ರಾವಣಫಡಿಯಲ್ಲಿ ಬಣ್ಣದ ಅವಶೇಷಗಳನ್ನು ಈಗಲೂ ಕಾಣಬಹುದು.
. ರಾಚನಿಕ ದೇವಾಲಯಗಳು
ಚಾಲುಕ್ಯ ಅರಸ, ಅರಸಿಯರು ಮತ್ತು ಧನಿಕರು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸುಮಾರು ೨೫ ಸ್ಥಳಗಳಲ್ಲಿ ನೂರಾರು ರಾಚನಿಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ರಾಜಧಾನಿಯಾದ ಬಾದಾಮಿಯಲ್ಲಿ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷವಾಗಿ ಐಹೊಳೆ, ಮಹಾಕೂಟ, ಪಟ್ಟದಕಲ್ಲುಗಳಲ್ಲಿ ಗುಡಿಗುಚ್ಛಗಳು ತಲೆ ಎತ್ತಿವೆ. ಆಂಧ್ರಪ್ರದೇಶದ ಆಲಂಪುರದಲ್ಲಿಯೂ ಇಂತಹ ದೇವಾಲಯ ಸಮುಚ್ಚಯವನ್ನು ಕಾಣುತ್ತೇವೆ. ಜೊತೆಗೆ ಸತ್ಯಾವೊಲು, ಮಹಾನಂದಿ, ಕುಡವೇಲಿ, ಕಡಮರ ಕಾಲವ ಮೊದಲಾದವುಗಳಲ್ಲಿ ಚಾಲುಕ್ಯರ ರಾಚನಿಕ ಮಂದಿರಗಳು ಚದುರಿಕೊಂಡಿವೆ. ದೇವಾಲಯಗಳ ವಾಸ್ತು ವಿಶೇಷಗಳಲ್ಲಿ ಅಚ್ಚರಿಗೊಳಿಸುವ ವೈವಿಧ್ಯಗಳನ್ನು ಕಾಣುತ್ತೇವೆ. ಆದಾಗ್ಯೂ ಕೆಲವು ಸಾಮಾನ್ಯ ಅಂಶಗಳನ್ನು  ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದಾಗಿದೆ.
ತಲವಿನ್ಯಾಸಗಳು
ಚಾಲುಕ್ಯ ಸ್ಥಪತಿಗಳು ವಿಭಿನ್ನ ತಲವಿನ್ಯಾಸಗಳಿರುವ ದೇವಾಲಯಗಳನ್ನು ಸೃಷ್ಟಿಸಿದ್ದಾರೆ. ಬಹುಪಾಲು ಗುಡಿಗಳಿಗೆ ಸರಳವಾದ ತಲವಿನ್ಯಾಸವಿದೆ. ಇವು ಚೌಕಾಕಾರದ ಚಿಕ್ಕ ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದ್ದು ಪೂಜಾ ವಿಧಿಗಳಿಗೆ ಪೂರಕವಾಗಿವೆ. ಮಹಾಕೂಟದ ಬಾಣಂತಿ ಗುಡಿ, ಐಹೊಳೆಯ ಸೂರ್ಯದೇವಾಲಯಗಳು  ಬಗೆಯ ವಿನ್ಯಾಸದಲ್ಲಿ ರಚಿತವಾಗಿವೆ. ಪ್ರದಕ್ಷಿಣಾ ಪಥವಿಲ್ಲದ ಇವನ್ನು ನಿರಂಧಾರ ಮಂದಿರಗಳೆಂದು ಕರೆಯಲಾಗುತ್ತದೆ.
ಪ್ರದಕ್ಷಿಣಾ ಪಥವಿರುವ ದೇವಾಲಯಗಳನ್ನು ಸಾಂಧಾರವೆಂದು ಗುರುತಿಸಲಾಗುತ್ತದೆ. ದೇವತಾ ಶಿಲ್ಪವನ್ನು ಸುತ್ತು ಹಾಕಲು ಸಾಧ್ಯವಾಗುವಂತೆ ಗರ್ಭಗೃಹದ ಸುತ್ತ ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿರುತ್ತದೆ. ಐಹೊಳೆಯ ಹುಚ್ಚಿ ಮಲ್ಲಿಗುಡಿ, ಪಟ್ಟದಕಲ್ಲಿನ ಸಂಗಮೇಶ್ವರ, ಮಹಾಕೂಟದ ಮಲ್ಲಿಕಾರ್ಜುನ ಗುಡಿಗಳನ್ನು ಹೆಸರಿಸಬಹುದು. ಐಹೊಳೆಯ ಲಾಡಖಾನ ಗುಡಿಯ ತಲವಿನ್ಯಾಸ ಇನ್ನೊಂದು ಬಗೆಯದು. ಗರ್ಭಗೃಹವು ಸಭಾಮಂಟಪದ ಭಾಗವಾಗಿದ್ದು ಅವೆರಡರ ಹಿಂದಿನ ಗೋಡೆ ಒಂದೇ ಆಗಿದೆ. ಹೀಗೆ ಸಭಾಮಂಟಪವು ಗರ್ಭಗೃಹವನ್ನು ಗರ್ಭೀಕರಿಸಿಕೊಂಡು ಹೆಚ್ಚು ವಿಶಾಲವಾಗಿದೆ.
ಚಾಲುಕ್ಯರ ಕಾಲದಲ್ಲಿ ನೂರಾರು ಗುಡಿಗಳು ನಿರ್ಮಾಣಗೊಂಡಿದ್ದರೂ ಅವುಗಳಲ್ಲಿ ಗಜಪೃಷ್ಠ ತಲವಿನ್ಯಾಸವಿರುವ ದೇವಾಲಯಗಳು ಅಪರೂಪವಾಗಿವೆ. ಐಹೊಳೆ, ಹಳೆಯ ಮಹಾಕೂಟ, ಪಾಪನಾಶನಂ ಮತ್ತು ಸತ್ಯಾವೋಲುಗಳಲ್ಲಿ ಇವನ್ನು ಕಾಣಬಹುದು. ದೇವಾಲಯದ ಹಿಂಭಾಗ ಚಾಪಾಕಾರದ್ದಾಗಿರುತ್ತದೆ. ತಲವಿನ್ಯಾಸವು ಪಶ್ಚಿಮ ಘಟ್ಟದಲ್ಲಿಯ ಬೌದ್ಧ ಚೈತ್ಯಾಲಯಗಳ ತಲವಿನ್ಯಾಸವನ್ನು ಹೋಲುತ್ತದೆ. ಐಹೊಳೆಯ ದುರ್ಗ ದೇವಾಲಯವು ಬಗೆಯ ತಲವಿನ್ಯಾಸವಿರುವ ದೇವಾಲಯಗಳಲ್ಲಿಯೇ ಉತ್ಕೃಷ್ಟವಾದುದು. ಗುಡಿಗೆ ಎರಡು ಪ್ರದಕ್ಷಿಣ ಪಥಗಳಿರುವುದು ಒಂದು ವಿಶೇಷ ಸಂಗತಿ. ಚಾಪಾಕಾರದ ಗರ್ಭಗೃಹ, ಅದಕ್ಕೆ ಅನುಗುಣವಾದ ಪ್ರದಕ್ಷಿಣಾಪಥ, ಸಭಾಮಂಟಪ ಹಾಗೂ ಮುಖಮಂಟಪ ಬಗೆಯ ದೇವಾಲಯದ ವಾಸ್ತು ಅಂಗಗಳು.


ನವೀನ ಹಳೆಯದು