ಇನ್ನೇನು ಬೇಸಿಗೆ ಶುರುವಾಯ್ತು ನೀರನ್ನು ಉಳಿಸಿ


ಬಾಗಲಕೋಟ ಜಿಲ್ಲೆಯಲ್ಲಿ ಅತ್ಯಂತ ಧಗೆ ಇರುವುದರಿಂದ ಧಾಹ ತೀರಿಸಲು ಸತೀಶ ಬಂಡಿವಡ್ಡರ ಪೌಂಡೆಶೇನ್ ಅವರು ಮುಧೋಳ ನಗರದಾದ್ಯಂತ ಸ್ಥಾಪಿಸುತ್ತಿರುವ ನೀರಿನ ಅರವಟ್ಟಿಗೆಗಳನ್ನು ಉದ್ಘಾಟಿಸಿ ಕೆಪಿಸಿಸಿ ಕಾರ್ಯದರ್ಶಿಗಳಾದ ದಯಾನಂದ ಪಾಟೀಲ ಮಾತನಾಡಿದರು 

 ಬೇಸಿಗೆ ಕಾಲ ಪ್ರಾರಂಭವಾದ ಕಾರಣ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ಪೌಂಡೆಶೇನ್ ಮುಖಾಂತರ ಮುಧೋಳ ನಗರದ ಪ್ರಮುಖ ಸ್ಥಳಗಳಲ್ಲಿ ಶುದ್ಧಕುಡಿಯುವ ನೀರಿನ ಅರವಟ್ಟಿಗೆಗಳನ್ನೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸ್ಥಾಪಿಸಿದೆ ಆದರಿಂದ ಎಲ್ಲರು ಸದುಪಯೋಗಿಸಿ ಹಾಗೂ ನೀರನ್ನು ಮಿತವಾಗಿ ಬಳಸಿ ಎಂದು ಪೌಂಡೆಶೇನ್ ಅದ್ಯಕ್ಷರಾದ ಶ್ರೀ ಸತೀಶ ಬಂಡಿವಡ್ದರ ಮಾತನಾಡಿದರು 


  ಈ ಸಂದರ್ಭದಲ್ಲಿ ತಾಲೂಕಯುವ ಕಾಂಗ್ರೆಸ್ಸ್ ಅದ್ಯಕ್ಷರಾದ ನವೀನ ಬದ್ರಿ, ಬಾಗಲಕೋಟ ಜಿಲ್ಲಾ ಯುವ ಕಾಂಗ್ರೆಸ್ಸ್ ಉಪಾದ್ಯಕ್ಷರಾದ ತಿರುಪತಿ ಬಂಡಿವಡ್ದರ ಶ್ರೀ ತಮ್ಮನಗೌಡ ಕಾಶಿಮಸಾಬ ಕೆಸರಟ್ಟಿ, ಕುಮಾರ ಬಂಡಿವಡ್ಡರ , ಯುವ ನೇತಾರರಾದ ಪ್ರಶಾಂತ ವಾಘ್ಮೊದೆ ಸಂಜು ಕಾಂಬಳೆ ಇನ್ನಿತರರು ಇದ್ದರೂ

ನವೀನ ಹಳೆಯದು