ಹುಷಾರ್...ಇಲ್ಲಾ ಅಂದ್ರೆ ಜೈಲ್ ಊಟ ಗ್ಯಾರಂಟಿ 😰😰


ಮುಧೋಳ : 2018 ರ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಅದರ ಬೆನ್ನಲ್ಲೇ ನೀತಿ ಸಂಹಿತೆಯು ಜಾರಿಗೆ ಬಂದಿದೆ . ಈ ಭಾರಿಯ ನೀತಿ ಸಂಹಿತೆಯು ಸಾಮಾಜಿಕ ಜಾಲತಾಣವನ್ನು ಬಿಟ್ಟಿಲ್ಲಾ . ಮುಖ್ಯವಾಗಿ *ಫೇಸ್ ಬುಕ್, ಟ್ವಿಟರ್ , ವಾಟ್ಸ್ ಪ್ ಇನ್ಸ್ಟಗ್ರಾಮ್* ಇನ್ನೂ ಮುಂತಾದ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಚಾರವನ್ನು ಸಹ ನಿಷೇದಿಸಿದೆ . ಮುಂದುವರೆದು ಅಭ್ಯರ್ಥಿಯ ಪರ ಪೊಸ್ಟರ್ ಗಳನ್ನು ಹಾಕುವುದಾಗಲಿ ಅಥವಾ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದಾಗಲಿ . ಇತರ ಪಕ್ಷದ ಅಭ್ಯಾರ್ಥಿಗಳನ್ನು ನಿಂದಿಸುವುದಾಗಲಿ ಮಾಡಬಾರದು ಎಂದು ಹೇಳಿದೆ . 2014 ರ ಲೋಕಸಭೆ ಚುನಾವಣೆಯು ಮುಖ್ಯವಾಗಿ ಸಾಮಾಜಿಕ ಜಾಲತಾಣವನ್ನು ಅವಲಂಬಿಸಿತ್ತು . ಅದರ ಸಧುಪಯೋಗವನ್ನು ಈ ಚುನಾವಣೆಯಲ್ಲಿ ಪಡೆಯಲು ವಿವಿದ ಪಕ್ಷಗಳು ತಮ್ಮ ಪಕ್ಷದ ಕಚೇರಿಯಲ್ಲೇ ಐಟಿ ಡಿಪಾರ್ಟ್ ಮೆಂಟ್ ತೆಗೆದು ಜಾಮಾಜಿಕ ಜಾಲತಾಣದ ಸಮರಕ್ಕೆ ಸಿದ್ದವಾಗಿದ್ದವು . ಆದರೆ ಕೇಂದ್ರ ಚುನಾವಣಾ ಆಯುಕ್ತರ ಈ ನಿರ್ದಾರ ವಿವಿದ ರಾಜಕೀಯ ಪಕ್ಷಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ .


ನೀವು ಕೂಡ ಅಷ್ಟೇ , ನಿಮ್ಮ ಫೇಸ್ ಬುಕ್ ಖಾತೆಗೆ ವಿವಿದ ಪಕ್ಷದ ಮುಖಂಡರ ಪರ ಬ್ಯಾಟ್ ಮಾಡುವಾಗ ಹುಷಾರಾಗಿರಿ . ಇತರ ಪಕ್ಷದ ಮುಖಂಡರನ್ನು ನಿಂದಿಸುವ ಮುಂಚೆ ಯೋಚಿಸಿ . ನೀವು ಕಮೆಂಟ್ ಮಾಡಿದ ಅಥವಾ ಅಪ್ ಲೋಡ್ ಮಾಡಿದ ಫೂಟೇಜ್  *ಸ್ಕ್ರೀನ್ ಶಾಟ್* ತೆಗೆದು , ತಾಲೂಕಿನ ಅಥವಾ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಕಳಿಸಿದರೆ ನಿಮ್ಮ ಕಥೆ ಮುಗಿದ ಹಾಗೆ.  *ನಿಮಗೆ ಬೇಲು ಸಿಗಲ್ಲಾ , ಪಾನಿಪೂರಿಯೂ* ಸಿಗಲ್ಲಾ ..! 


_ಇವತ್ತಿನಿಂದ ಯಾರನ್ನು ಬೆಂಬಲಿಸಿ ಸಾಮಾಜೀಕ ಜಾಲತಾಣಗಳಲ್ಲಿ ಕುಸ್ತಿ ಮಾಡಲು ಹೋಗಬೇಡಿ . ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ತಂದುಕೊಳ್ಳಬೇಡಿ_

ನವೀನ ಹಳೆಯದು