ಬಜೆಟ್ ನ ಸಂಪೂರ್ಣ ಮಾಹಿತಿ


  • ಬಜೆಟ್​ ಮಂಡನೆ ಮುಕ್ತಾಯ, ಸೋಮವಾರಕ್ಕೆ ಅಧಿವೇಶನ ಮುಂದೂಡಿಕೆ
  • ಮರಾಠಿ ಕವಿ ಪಂದ್ಯದ ಮೂಲಕ ಬಜೆಟ್​ ಮುಗಿಸಿದ ವಿತ್ತ ಸಚಿವ
  • ಏಕ್​ ಪಾವ್​ ರಕ್ತಾಹು... ಹಜಾರ್​ ಲಾಕ್​​ ಫೂಲ್​ ಪಡ್ತೀಹೆ 
  • ನವ ಭಾರತ ನಿರ್ಮಾಣಕ್ಕೆ ನಾವು ಇಟ್ಟಿರುವ ಹೆಜ್ಜೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದೆ.
  • 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಉಳಿತಾಯ ಯೋಜನೆಗಳ ಮೇಲೆ ಒಂದೂವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ.
  • ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇದರಿಂದ 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ.
  • ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್​ ಮಾಡಿದ ಕೇಂದ್ರ ಸರ್ಕಾರ 
  • 6.5 ಲಕ್ಷದವರೆಗೆ ಸಂಬಳ ಇರುವವರು, ಪಿಎಫ್​ ಹಾಗೂ ಸರ್ಕಾರಿ ಯೋಜನೆಗಳಲ್ಲಿ ಇನ್ವೆಸ್ಟ್​ ಮಾಡಿದರೆ ತೆರಿಗೆ ಪಾವತಿ ಇಲ್ಲ. 
  • 3 ಕೋಟಿ ತೆರಿಗೆ ಪಾವತಿದಾರರಿಗೆ ಅನುಕೂಲ 
  • ಆಫರ್ಡಬಲ್​ ಹೌಸ್​ಗಳ ಪ್ರಯೋಜನಕ್ಕಾಗಿ ಹೊಸ ಯೋಜನೆ. 
  • 2020ರವರೆಗೆ ಹೊಸ ಮನೆಗಳ ನಿರ್ಮಾಣ ಯೋಜನೆಗೆ ತೆರಿಗೆ ವಿನಾಯ್ತಿ. 
  • ಇದು ಮಧ್ಯಂತರ ಬಜೆಟ್​ ಅಲ್ಲ. ದೇಶದ ವಿಖಾಸ ಯೋಜನೆಯ ಮಂತ್ರ
  • ದೇಶದ ನಿವಾಸಿಗಳ ಜೋಶ್​ನಿಂದ ದೇಶದ ಬದಲಾವಣೆ.
  • ನಮ್ಮ ಅಭಿವೃದ್ಧಿಯ ಸಕಲ ಕ್ರೆಡಿಟ್​ ಜನರಿಗೆ ಸಲ್ಲಬೇಕು. 
  • ಪುನರ್ ನವೀಕರಣ ಮಾಡಬಹುದಾದ ಇಂಧನ ಬಳಕೆಗೆ ಉತ್ತೇಜನ 
  • ಹೀರೊಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್‌ ಮೋಟಾರ್ಸ್‌ ಕಂಪನಿಗಳು ದ್ವಿಚಕ್ರ ವಾಹನಗಳ ಮೇಲಿರುವ ಶೇ28ರ ಜಿಎಸ್‌ಟಿ ಹೊರೆಯನ್ನು ಶೇ18ಕ್ಕೆ ಇಳಿಸಲು ಕ್ರಮ 
  • ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
  • ರಾಷ್ಟ್ರೀಯ ಶಿಕ್ಷಣ ಮಿಷನ್​ಗೆ 38,578 ಕೋಟಿ ಅನುದಾನ. 
  • ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76 ಸಾವಿರ ಕೋಟಿ ರೂ. ಅನುದಾನ. 
  • ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 38 ಸಾವಿರ ಕೋಟಿ ರೂ ಅನುದಾನ
  • ದೇಶದ ಎಲ್ಲ ನದಿಗಳ ಸ್ವಚ್ಛತೆ, ಕುಡಿಯಲು ಶುದ್ಧ ನೀರು. 
  • ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
  • ಸ್ವಚ್ಛ ನದಿ ಯೋಜನೆಗಳ ಮೂಲಕ ನದಿಗಳ ಶುದ್ಧೀಕರಣ.
  • ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್.
  • ಭಾರತೀಯ ಚಿತ್ರರಂಗಕ್ಕೆ ಬಂಪರ್ ಕೊಡುಗೆ: ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನುಮತಿ.
  • ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
  • ಮೈಕ್ರೊ ನೀರಾವರಿ ಯೋಜನೆಗಳ ಮೂಲಕ ನೀರು ಪೂರೈಕೆ.
  • 2022ರ ವೇಳೆಗೆ ನಭಕ್ಕೆ ಜಿಗಿಯಲಿರುವ ಭಾರತೀಯ ಅಂತರಿಕ್ಷ ಯಾನಿಗಳು. 
  • ಮುಂದಿನ 11 ವರ್ಷಗಳಲ್ಲಿ ಡಿಜಿಟಲ್​ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ. 
  • 2030ರ ವೇಳೆಗೆ ವಿದ್ಯುತ್​ ಚಾಲಿತ ವಾಹನಗಳ ಹೆಚ್ಚು ಬಳಕೆ. 
  • ದೇಶದ ಸ್ವಾಭಿಮಾನದ ಪ್ರಶ್ನೆ ಇದು. ತೈಲಕ್ಕಾಗಿ ಕೈ ಒಡ್ಡಬೇಕಾಗಿಲ್ಲ. 
  • ಉದ್ದೇಶಿತ ವಿತ್ತೀಯ ಕ್ರಿಮಿನಲ್​ಗಳಿಗೆ ತಕ್ಕ ಪಾಠ
  • ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು. 
  • 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್​ 
  • 1 ಲಕ್ಷಕ್ಕೂ ಹೆಚ್ಚು ಜನರು ಅಪನಗದೀಕರಣ ನಂತರ ತೆರಿಗೆ ಪಾವತಿಸಿದ್ದಾರೆ. 
  • 2030ರೊಳಗಾಗಿ ಪ್ರತಿಯೊಬ್ಬರಿಗೂ ಮನೆ ಸಿಗಬೇಕೆಂಬುದು ನಮ್ಮ ಉದ್ದೇಶ. 
  • ಡಿಜಿಟಲ್​ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ. 
  • ಕಪ್ಪು ಹಣ ತಡೆಯಲು ಸರ್ಕಾರದಿಂದ ಇನ್ನಿಲ್ಲದ ಪ್ರಯತ್ನ.
  • ಉದ್ದೇಶಿತ ವಿತ್ತೀಯ ಕ್ರಿಮಿನಲ್​ಗಳಿಗೆ ತಕ್ಕ ಪಾಠ 
  • ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು, 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್​ 
  • 1 ಲಕ್ಷಕ್ಕೂ ಹೆಚ್ಚು ಜನರು ಅಪನಗದೀಕರಣ ನಂತರ ತೆರಿಗೆ ಪಾವತಿಸಿದ್ದಾರೆ. 
  • ಮನೆ ಖರೀದಿಸುವವರ ಮೇಲೆ ಜಿಎಸ್​ಟಿ ಇಳಿಕೆ 
  • ಆದಾಯ ತೆರಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಕಳೆದ ವರ್ಷದಂತೆ ಈ ವರ್ಷ ತೆರಿಕೆ
  • ಮಧ್ಯಮ ವರ್ಗದವರ ಮೇಲಿನ ತೆರಿಗೆ ಇಳಿಕೆಗೆ ನಿರ್ಧಾರ
  • ಸ್ಟಾರ್ಟ್​ ಅಪ್​ಗಳಿಗೆ ಹೆಚ್ಚು ಅನುದಾನ. ಹೊಸ ಸಾಲ ಯೋಜನೆ. 
  • ಉರಿ ಚಿತ್ರ ನೋಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. 
  • ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆ. 
  • ಐಟಿ ಇಲಾಖೆ ಆನ್​ಲೈನ್​ ಮೂಲಕ ಕೆಲಸ ಮಾಡುತ್ತಿದೆ. 
  • ದಿನದ 24 ಗಂಟೆಗಳಲ್ಲೂ ಆನ್​ಲೈನ್​ ಮೂಲಕ ತೆರಿಗೆ ಪಾವತಿ. 
  • ಒಂದೇ ಭಾರತ್​ ಎಕ್ಸ್​ಪ್ರೆಸ್​ ರೈಲುಗಳು ಸದ್ಯದಲ್ಲೇ ಸೇವೆಗೆ ಸಿದ್ಧ. ದೇಶದ ಅತ್ಯುನ್ನತ ವೇಗದ ರೈಲು ಇದು
  • ಜಾಗತಿಕ ತಾಪಮಾನ ಇಳಿಕೆಗೆ ಭಾರತ ನಿರ್ಧಾರ. ಸೋಲಾರ್​ ವಿದ್ಯುತ್​ ಬಳಕೆ ಕಳೆದ ಐದು ವರ್ಷಗಳಲ್ಲಿ ದ್ವಿಗುಣ. 
  • ಸೋಲಾರ್​ ಕ್ಷೇತ್ರದಿಂದ ಉದ್ಯೋಗಗಳು ಸೃಷ್ಟಿ. 
  • ಬಯೋ ಫ್ಯೂಲ್​ ಮತ್ತು ಇನ್ನಿತರ ತಂತ್ರಜ್ಞಾನಗಳ ಅಳವಡಿಕೆ. 
  • ಮೊಬೈಲ್​ ಡೇಟಾ, ಫೋನ್​ ಕರೆ ದರ 50 ಪ್ರತಿಶತ ಇಳಿಕೆ. 12 ಲಕ್ಷ ಜನರಿಗೆ ಇದಿರಿಂದ ಕೆಲಸ.
  • ಗ್ರಾಮೀಣ ಭಾಗಗಳಿಗೆ ಇಂಟರ್ನೆಟ್​ ಪೂರೈಕೆಯಾಗುತ್ತಿದೆ. 
  • ಒಂದು ಲಕ್ಷ ಗ್ರಾಮಗಳನ್ನು ಡಿಜಿಟೈಲ್​ ಗ್ರಾಮಗಳೆಂದು ಘೋಷಣೆ. 
  • ಕಳೆದ ಐದು ವರ್ಷಗಳಲ್ಲಿ 500 ಜನ್​ಧನ್​ ಬ್ಯಾಂಕ್​ಗಳು ಆರಂಭ. 
  • ಸಿನಿಮಾ ಪೈರಸಿ ತಡೆಯಲು ಥಿಯೇಟರ್​ಗಳಲ್ಲಿ ಕ್ಯಾಮೆರಾ ಬಳಕೆ ನಿಷೇಧ. 
  • ರಕ್ಷಣಾ ವಲಯಕ್ಕೆ ಬಜೆಟ್​​ನಲ್ಲಿ​ 3 ಲಕ್ಷ ಕೋಟಿ ರೂಪಾಯಿ ನೀಡಿಕೆ
  • ಆಪರೇಷನ್​ ಏರ್​ಪೋರ್ಟ್​: ಐದು ವರ್ಷಗಳಲ್ಲಿ ಪ್ರಾದೇಶಿಕ ಏರ್ಪೋರ್ಟ್​ಗಳ ಸಂಖ್ಯೆ ದ್ವಿಗುಣ. 
  • ವೈಮಾನಿಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ. ಉಡಾನ್​ ಯೋಜನೆಯಿಂದ ಕ್ರಾಂತಿ. 
    ರಕ್ಷಣಾ ವಲಯಕ್ಕೆ ರೂ3 ಲಕ್ಷ ಕೋಟಿಗೂ ಅಧಿಕ ಮೊತ್ತ ಮೀಸಲು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆ
  • ಸಾಗರ್​ ಮಾಲಾ ಯಾತ್ರೆಗಳ ಮೂಲಕ ಪೋರ್ಟ್​ಗಳ ನಿರ್ಮಾಣ. 
  • ಕೋಲ್ಕತಾ-ವಾರಣಾಸಿ ವರೆಗೆ ಸರಕುಗಳ ನೌಕಾ ಸೇವೆ. 
  • ತಿಂಗಳಿಗೆ ರೂ100 ಕಟ್ಟುವ ಮೂಲಕ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್' ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ನೌಕರರು ನೋಂದಾಯಿಸಿಕೊಳ್ಳಬಹುದು. 60 ವರ್ಷಗಳ ನಂತರ ತಿಂಗಳಿಗೆ ರೂ3000 ಪಿಂಚಣಿ ವ್ಯವಸ್ಥೆ
  • ಅಲೆಮಾರಿ ಜನಾಂಗವನ್ನು ಗುರುತಿಸಿ ಅವರಿಗೆ ಅನುದಾನ ನೀಡಲು ನಿರ್ಧಾರ. 
  • ಉಜ್ವಲ ಯೋಜನೆಯಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್​ ಸಂಪರ್ಕ.
  • ಮುಂದಿನ ವರ್ಷ ಎಂಟು ಕೋಟಿ ಮಂದಿಗೆ ಯೋಜನೆ ತಲುಪಿಸಲಾಗುವುದು. 
  • ಎಂಎಸ್​ಎಂಇ ಕ್ಷೇತ್ರಕ್ಕೆ 59 ನಿಮಿಷಗಳಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. 
  • ಜೆಮ್​ ಎಂಬ ವೆಬ್​ಸೈಟ್​ ಮೂಲಕ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನ ಮಾರಾಟ ಮಾಡಬಹುದು. 
  • ಭಾರತೀಯ ಯೋಧರಿಗೆ ಒನ್​ ರಾಂಕ್​ ಒನ್​ ಪೆನ್ಷನ್​ ಜಾರಿಯಾದ ನಂತರ 35 ಸಾವಿರ ಕೋಟಿ ರೂಪಾಯಿ ಅನುದಾನ.
  • ರಿಸ್ಕ್​ ಏರಿಯಾಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಂಬಳ. 
  • ಹೊಸ ಪಿಂಚಣಿ ಯೋಜನೆಗೆ ಪುನಶ್ಚೇತನ. 21 ಸಾವಿರ ರೂ. ವೇತನ ಪಡೆಯುವವರಿಗೆ ಬೋನಸ್​. 
  • ಪ್ರಧಾನಿ ಜೀವನ್​ ಜ್ಯೋತಿ ಯೋಜನೆ ಮೂಲಕ ಹೊಸ ಪಿಂಚಣಿ ಜಾರಿ. 
  • ಅಸಂಘಟಿತ ಕಾರ್ಮಿಕರು ತಿಂಗಳಿಗೆ 100 ರೂ. ಕಟ್ಟಿದರೆ 60 ವರ್ಷ ನಂತರ ಮೂರು ಸಾವಿರ ರೂ. ಪಿಂಚಣಿ. 
  • ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರು, ಕಟ್ಟಡ ಕಾರ್ಮಿಕರು ಮೊದಲಾದವರಿಗೆ ನೆರವು. ಈ ವರ್ಷದಿಂದಲೇ ಯೋಜನೆ ಜಾರಿ. 
  • ಅಲೆಮಾರಿ ಜನಾಂಗವನ್ನು ಗುರುತಿಸಿ ಅವರಿಗೆ ಅನುದಾನ ನೀಡಲು ನಿರ್ಧಾರ. 
  • ಉಜ್ವಲ ಯೋಜನೆಯಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್​ ಸಂಪರ್ಕ. 
  • ಮುಂದಿನ ವರ್ಷ ಎಂಟು ಕೋಟಿ ಮಂದಿಗೆ ಯೋಜನೆ ತಲುಪಿಸಲಾಗುವುದು.
  • 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ರೈತರ ಅಕೌಂಟ್ ಗೆ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿ.
  • ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ
  • ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ
  • ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ ಘೋಷಣೆ
  • ನೈಸರ್ಗಿಕ ಕಾರಣಗಳಿಂದಾಗಿ ನಷ್ಟ ಅನುಭವಿಸಿರುವ ಎಲ್ಲ ರೈತರಿಗೂ ಹೊಸ ಯೋಜನೆ ಮೂಲಕ ನೆರವು. 
  • ಹೊಸ ಪಿಂಚಣಿ ಯೋಜನೆಗೆ ಪುನಶ್ಚೇತನ. 21 ಸಾವಿರ ರೂ. ವೇತನ ಪಡೆಯುವವರಿಗೆ ಬೋನಸ್​. 
  • ಪ್ರಧಾನಿ ಜೀವನ್​ ಜ್ಯೋತಿ ಯೋಜನೆ ಮೂಲಕ ಹೊಸ ಪಿಂಚಣಿ ಜಾರಿ. 
  • ಅಸಂಘಟಿತ ಕಾರ್ಮಿಕರು ತಿಂಗಳಿಗೆ 100 ರೂ. ಕಟ್ಟಿದರೆ 60 ವರ್ಷ ನಂತರ ಮೂರು ಸಾವಿರ ರೂ. ಪಿಂಚಣಿ. 
  • ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. 
  • ಬಡ ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ.
  • ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಮಾಧೇನು ಯೋನನೆ ಘೋಷಣೆ
    2 ಹೆಕ್ಟೇರ್ ಭೂಮಿ ಇರುವ ರೈತರಿಗೆ 6 ಸಾವಿರ ರೂ
  • ಈ ಯೋಜನೆಗಾಗಿ ಪ್ರಸಕ್ತ ಬಜೆಟ್​ನಲ್ಲಿ 7 ಸಾವಿರ ಕೋಟಿ ರೂ. ಅನುದಾನ. 
  • ಗೋವುಗಳ ಸಂರಕ್ಷಣೆಗಾಗಿ ಬಜೆಟ್​ನಲ್ಲಿ ಹೊಸ ಅನುದಾನ. 
  • ಮೀನುಗಾರಿಕೆಗಾಗಿ ಹೊಸ ಸಚಿವಾಲಯ
  • ಪಶುಸಂಗೋಪನೆ ಹಾಗೂ ಮೀನುಗಾರಿಕೆಗಾಗಿ ಕೃಷಿಕರಿಗೆ ಸಾಲ ನೀಡಲಾಗುತ್ತದೆ. 
  • ಸಣ್ಣ ರೈತರಿಗಾಗಿ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ... ರೈತರ ಖಾತೆಗೆ ನೇರವಾಗಿ ಹಣ 
  • 12 ಕೋಟಿ ರೂ ರೈತರ ಕುಟುಂಬಗಳಿಗೆ ಲಾಭ
  • ಈ ಅನುದಾನವು ರೈತರ ಖಾತೆಗಳಿಗೆ ಮೂರು ಕಂತುಗಳಾಗಿ (2 ಸಾವಿರ ರೂ.) ನೇರವಾಗಿ ವರ್ಗಾವಣೆಯಾಗಲಿದೆ.
  • ಶಿಕ್ಷಣ, ಆರೋಗ್ಯ, ನೀರಾವರಿ, ಸ್ಕಿಲ್​ ಡೆವಲಪ್​ಮೆಂಟ್​ ಕ್ಷೇತ್ರಗಳಲ್ಲಿ ದೇಶದ ಎಲ್ಲ ರಾಜ್ಯಗಳು ಪೈಪೋಟಿಯಲ್ಲಿ ಮುಂದುವರಿಯುತ್ತಿದೆ. 
  • ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಯೇ ಮುಖ್ಯ ಉದ್ಯೋಗ. 
  • ಪ್ರಧಾನ್​ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಎರಡು ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ಪುಟ್ಟ ಕೃಷಿಕರಿಗೆ ಪ್ರತಿವರ್ಷ ಆರು ಸಾವಿರ ರೂಪಾಯಿ ಪ್ರತಿವರ್ಷ ಅನುದಾನ. 
  • ಜನ್​ ಔಷಧಿ ಕೇಂದ್ರಗಳ ಮೂಲಕ ಕಡಿಮೆ ಖರ್ಚಿನಲ್ಲಿ ಔಷಧಗಳು ದೊರೆಯುವಂತೆ ಮಾಡಲಾಗುತ್ತಿದೆ. 
  • ಪ್ರಧಾನ ಮಂತ್ರಿ ಆವಾಸ್​ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ.
  • ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್​ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್​ ಕನೆಕ್ಷನ್​. 
  • 143 ಕೋಟಿ ಸಿಎಫ್​ಎಲ್​ ಬಲ್ಬ್​ ನೀಡುವ ಮೂಲಕ ವಿದ್ಯುತ್​ಅನ್ನು ಮಿತವಾಗಿ ಬಳಸುವ ಕಾರ್ಯಕ್ಕೆ ನಾಂದಿ ಹಾಡಿದೆವು. 
  • 50 ಕೋಟಿ ಮಂದಿಗೆ ಔಷಧಗಳನ್ನು ನೀಡಲು, ಅನುದಾನ. 
  • ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ. 
  • ಸ್ವಚ್ಛ ಭಾರತ ಮಿಷನ್​ ಮೂಲಕ ಭಾರತದ ಗ್ರಾಮಾಂತರ ಭಾಗದ ಸ್ವರೂಪವನ್ನೇ ಬದಲಿಸಿದ್ದೇವೆ. 
  • ಈ ಮೂಲಕ ಗ್ರಾಮೀಣ ಪ್ರದೇಶದ ಜನರ ಮನಸ್ಥಿತಿಯನ್ನೇ ಬದಲಿಸಲಾಗಿದೆ. 
  • ಮೇಲ್ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲು ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು. 
  • ಹಸಿದ ಹೊಟ್ಟೆಯಲ್ಲಿ ಯಾರೂ ಇರಕೂಡದು ಎನ್ನುವ ಕಾರಣಕ್ಕೆ ಎಂಎನ್​ಆರ್​ಜಿ ಯೋಜನೆಗೆ ಹೆಚ್ಚು ಹಣ ನೀಡಲಾಗಿದೆ. 
  • ಆಡಳಿತ ಸರ್ಕಾರ ಸುಳ್ಳು ಭರವಸೆ ನಿಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಅವರಿಗೆ ವಾಸ್ತವ ಗೊತ್ತಿಲ್ಲ. 
  • ಪ್ರಧಾನಮಂತ್ರಿ ಗ್ರಾಮ್​ ಸಡಕ್​ ಯೋಜನೆಗೆ 19 ಸಾವಿರ ಕೋಟಿ ಅನುದಾನ. 
  • ಗ್ರಾಮಗಳಿಗೆ ಬಸ್​ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು. 
  • ಪ್ರಧಾನ ಮಂತ್ರಿ ಆವಾಸ್​ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ. 
  • ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್​ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್​ ಕನೆಕ್ಷನ್
  • ಪಾರದರ್ಶಕ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ತಡೆಯೊಡ್ಡಿದ್ದೇವೆ. 
  • ರಿಯಲ್​ ಎಸ್ಟೇಟ್​ ರೆಗ್ಯುಲೇಷನ್​ ಆ್ಯಕ್ಟ್​ ಜಾರಿಗೆ ತರುವ ಮೂಲಕ ರಿಯಲ್​ ಎಸ್ಟೇಟ್​ ಕ್ಷೇತ್ರದ ಸುಧಾರಣೆ. 
  • ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ. 
  • ದಿವಾಳಿಯಾಗಿದ್ದ ಬ್ಯಾಂಕ್​ಗಳಿಗೆ ಪುನಶ್ಚೇತನ ನೀಡಿದ್ದೇವೆ. 
  • ಎನ್​ಪಿಎಸ್​ ಪ್ರಮಾಣ ಈಗಿಗಿಂತ ಯುಪಿಎ ಅವಧಿಯಲ್ಲೇ ಹೆಚ್ಚಿತ್ತು. ಆದರೆ, ಅದನ್ನು ಕೆಟ್ಟ ಸಾಲ ಎಂದು ಪರಿಗಣಿಸಿರಲಿಲ್ಲ. 
  • 2009 ರಿಂದ 2014ರಲ್ಲಿ ಹಣದುಬ್ಬರ ಇಳಿಕೆ: ಭಾರತ ಜಾಗತಿಕವಾಗಿ 6ನೇ ಸ್ಥಾನ: ಗೋಯಲ್​ 
  • ವಿತ್ತ ಸುಧಾರಣೆಯಾದ ನಂತರ ಭಾರತ ವಿಶ್ವದ ಅಗ್ರಗಣ್ಯ ದೇಶ 
  • ಹಿಡನ್​ ಟ್ಯಾಕ್ಸ್​, ಹೆಚ್ಚು ತೆರಿಗೆ ಸಂಗ್ರಹಣೆಗೆ ಬ್ರೇಕ್​ 
  • ಶೇ. 4.6 ಇನ್ಫ್ಲೇಶನ್​ ತಂದಿದ್ದೇವೆ. 
  • ಹಣದುಬ್ಬರ ಇಳಿಸದಿದ್ದರೆ ಮೂಲ ಸೌಕರ್ಯಗಳು ಶೇ. 35ರಷ್ಟು ಏರಿಕೆ
  • ಕಳೆದ ಐದು ವರ್ಷಗಳಲ್ಲಿ 239 ಬಿಲಿಯನ್​ ಡಾಲರ್​ನಷ್ಟು ಎಫ್​ಡಿಐ ಹರಿದು ಬಂದಿದೆ. 
  • ಎಫ್​ಡಿಐ ನೀತಿಗಳನ್ನು ಬದಲಾವಣೆ ಮಾಡಿದ್ದೇ ಇದಕ್ಕೆ ಕಾರಣ.
  • ದೇಶದ 90ರಷ್ಟು ಭಾಗಗಳಿಗೆ ಶೌಚಾಲಯ ವ್ಯವಸ್ಥೆ
  • ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ 
  • ವಿತ್ತ ಸುಧಾರಣೆಯಾದ ನಂತರ ಭಾರತ ವಿಶ್ವದ ಅಗ್ರಗಣ್ಯ ದೇಶ 
  • ಜಾಗತಿಕ ಮಟ್ಟದಲ್ಲಿ ನಾವೂ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ: ಗೋಯಲ್​​
  • ಜನರ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಸೌಕರ್ಯ, 2020ರ ವೇಳೆಗೆ ನ್ಯೂ ಇಂಡಿಯಾ ರಚನೆ
  • ಬಜೆಟ್​ ಮಂಡನೆಗೆ ಸ್ಪೀಕರ್​ ಸುಮಿತ್ರಾ ಮಹಾಜನ್​ ಗ್ರೀನ್​ ಸಿಗ್ನಲ್​​
  • ನರೇಂದ್ರ ಮೋದಿ ನೇತೃತ್ವದ ಪಾರದರ್ಶನ ಆಡಳಿತ :ಗೋಯಲ್​
  • ಸಂಸತ್​ ಕಲಾಪ್​ ಆರಂಭ: ಬಜೆಟ್​ ಓದಲು ಆರಂಭಿಸಿದ ಪಿಯೂಷ್​ ಗೋಯಲ್​ ರೆಡಿ
  • ಬೆಳಗ್ಗೆಯಿಂದ ಸರ್ಕಾರಿ ಮೂಲಕ ಬಜೆಟ್​ ಅಂಶಗಳನ್ನ ಮಾಧ್ಯಮ ಕಚೇರಿಗಳಿಗೆ ಕಳುಹಿಸಿಕೊಡುತ್ತಿವೆ. ಗೊಯೆಲ್​ ಮಂಡಿಸುವ ಬಜೆಟ್​ನಲ್ಲಿ ಈ ಅಂಶಗಳಿದ್ದರೆ ಮಾಹಿತಿ ಸೋರಿಕೆ ಖಚಿತ: ಮನೀಷ್​ ತಿವಾರಿ ಆರೋಪ
  • ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್​ ಸಭೆ ಮುಕ್ತಾಯ, 2019ರ ಮಧ್ಯಂತರ ಬಜೆಟ್​ಗೆ ಒಪ್ಪಿಗೆ
  • ಬಜೆಟ್​ ಮಂಡನೆ ಹಿನ್ನೆಲೆ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ತೆಲಗು ದೇಶಂ ಪಾರ್ಟಿ ಸಂಸದರು ಸಂಸತ್​ ಭವನದ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ಮಧ್ಯಂತರ ಬಜೆಟ್​ಗೆ ವಿರೋಧ
ನವೀನ ಹಳೆಯದು