ಎಪ್ರಿಲ್ 2 ರಂದು ಗೋದಾವರಿ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ

ಮುಧೋಳ: 
ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಬೇಕೆಂದು ಒತ್ತಾಯಿಸಿ, ಏ.2 ರಂದು ಬೆಳಗ್ಗೆ 9ಕ್ಕೆ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು ಎಂದು ಯಲ್ಲಪ್ಪ ಹೆಗಡೆ ಹಾಗೂ ತುಕಾರಾಂ ಮ್ಯಾಗಿನಮನಿ ತಿಳಿಸಿದ್ದಾರೆ.

ನಗರದ ಜಿಆರ್‌ಬಿಸಿ ಆವರಣದಲ್ಲಿ ಕರೆದ ರೈತರ ಸಭೆಯಲ್ಲಿ ಮಾತನಾಡಿ, ಪತ್ರಿಕಾ ಹೇಳಿಕೆ ನೀಡಿದ ಅವರು,

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದರೂ ಯಾವುದೇ ಕಬ್ಬಿನ ಬಿಲ್‌ಗಾಗಿ ಪ್ರಯತ್ನ ಮುಂದುವರಿಯಲಿಲ್ಲ. ಜಿಲ್ಲಾಧಿಕಾರಿಗಳ ವೈಫಲ್ಯ ಖಂಡಿಸಿ ಸಕ್ಕರೆ ಕಾರ್ಖಾನೆಯತ್ತ ರೈತರ ಧಿಚಿತ್ತ ಎಂಬ ನಿಲುವಿನೊಂದಿಗೆ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಬಾಕಿ ವಸೂಲಿ ಮಾಡಿಕೊಳ್ಳಲು ತೀರ್ಮಾಧಿನಿಸಲಾಗಿದೆ ಎಂದು ತಿಳಿಸಿದ್ದಾರೆ.
ನವೀನ ಹಳೆಯದು