ಮುಧೋಳ : ರಸ್ತೆ ಕಾಮಗಾರಿ ಶ್ರೆಯಸ್ಸು ಮಾಧ್ಯಮಕ್ಕೆ ಸಲ್ಲಬೇಕು: ಸತೀಶ

ಮುಧೋಳ 19: ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಕಾಮಗಾರಿ (10 ಕಿ.ಮಿ) ಕನರ್ಾಟಕ ಸಕರ್ಾರ ಲೋಕೋಪಯೋಗಿ ಇಲಾಖೆಯ ಬಾಗಲಕೋಟ ವಿಭಾಗದ ಕಾರ್ಯನಿರ್ವಾಹಕ  ಇಂಜನೀಯರ ರವರು ಟೆಂಡರ್ ಪ್ರಕ್ರಿಯೆ ಪ್ರಾರಂಬಿಸಿರುವುದು ಸಂತೋಷದ ವಿಷಯ ಹತ್ತಾರು ವರ್ಷಗಳ ಬೇಡಿಕೆಗೆ ಕಳೆದ ಡಿಸೆಂಬರ ತಿಂಗಳಲ್ಲಿ ಮುಧೋಳ ಹಿತರಕ್ಷಣಾ ಸಮಿತಿಯ ಸರದಿ ಸತ್ಯಾಗ್ರಹ ಹೋರಾಟ ಮಾಡಿದ್ದರ ಫಲವೇ ಈ ಕಾಮಗಾರಿಯ ಟೆಂಡರ ಪ್ರಕ್ರಿಯೆಗೆ ಚಾಲನೆ ದೊರಕಿದೆ ಹೋರಾಟ ಸಮಿತಿಯವರ ಧರಣಿ ಸತ್ಯಾಗ್ರಹ, ಸತ್ಯಾಗ್ರಹಕ್ಕೆ ಮುಧೋಳದ ಜನತೆಯ ಸಹಕಾರ ಹಿತರಕ್ಷಣಾ ಸಮಿತಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ, ಮಾನ್ಯ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿದ ಫಲವೇ ಕಾಮಗಾರಿಗೆ ಟೆಂಡರ್ ಕರೆದಿದ್ದು ಈ ಹೋರಾಟವನ್ನು ಪತ್ರಿಕಾ ಮಾದ್ಯಮದ ಸ್ನೇಹಿತರು ಆ ಹೋರಾಟವನ್ನು ಪತ್ರಿಕೆಗಳ ಮುಖಾಂತರ ನೇರ ಧಿಟ್ಟ ವರದಿಯ ಪರಿಣಾಮವೇ ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಆದ್ದರಿಂದ ಈ ಶ್ರೆಯಸ್ಸು ಮಾದ್ಯಮ ಮಿತ್ರರಿಗೆ ಹಾಗೂ ಮುಧೋಳ ಹಿತರಕ್ಷಣಾ ಸಮಿತಿಗೆ ಸಲ್ಲಬೇಕು ಹಾಗೂ ಈಗಾಗಲೆ ಪ್ರಗತಿಯಲ್ಲಿರುವ ಮುಧೋಳದ ರಿಂಗ ರಸ್ತೆ ಗಡದಣ್ಣವರ ಸರ್ಕಲ್ನಿಂದ ಪ್ರಾರಂಭವಾಗಿದ್ದು ಕಾಮಗಾರಿ ಬಹಳಷ್ಟು ವಿಳಂಬವಾಗುತ್ತಿದೆ ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಆದ್ದರಿಂದ ಸಂಬಂದ ಪಟ್ಟ ಅಧಿಕಾರಿಗಳು ಗಮನ ವಹಿಸಬೇಕು ಕಾಮಗಾರಿ ಬೇಗ ಪೂರ್ಣಗೊಳ್ಳಬೇಕು.
ನವೀನ ಹಳೆಯದು