ವಿದ್ಯುತ್‌ ಉಪಕರಣಗಳ ಕಳ್ಳತನ: ಏಳು ಜನರ ಬಂಧನ


ಮುಧೋಳ:
 ತಾಲೂಕಿನ ಉತ್ತೂರ ಗ್ರಾಮದ ಹೊರವಲಯದ ಚನ್ನಗಿರಿ ಸಿಮೆಂಟ್‌ ಕಾರ್ಖಾನೆಯಲಿದ್ದ ವಿದ್ಯುತ್‌ ಉಪಕರಣಗಳನ್ನು ಕಳ್ಳತನ ಮಾಡಿದ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 21.30 ಲಕ್ಷ ಮೌಲ್ಯದ ಉಪಕರಣಗಳು ಹಾಗೂ ಕಳ್ಳತನಕ್ಕೆ ಬಳಿಸಿದ ಬೈಕ್‌, ಟಂಟಂವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್‌ ಉಪಕರಣಗಳಾದ ಟಿಸಿಗಳಲ್ಲಿರುವ ಕಾಪರ್‌ ತಂತಿ, ಕೇಬಲ್‌ ಪೀಜ್‌, ರಿಲೆ, ಚೇಂಜ್‌ ಓವರ, ಸ್ವಿಚ್‌ ಕಂಟ್ರೋಲ್‌ ಪ್ಯಾನಲ್‌, ಕಾಪರ್‌ ಪಟ್ಟಿಗಳು, ರೇಡಿಯೇಟರ್‌, ತೂಕದ ಮಸೀನ್‌, ಬೇರಿಂಗ್‌ ಸೇರಿದಂತೆ ಒಟ್ಟು 17.10 ಲಕ್ಷ ರೂ.ಮೌಲ್ಯದ ವಸ್ತುಗಳು ಹಾಗೂ ಮೂರು ಬೈಕ್‌, ಟಂಟಂ ವಾಹನಗಳನ್ನು ಕಳ್ಳರಿಂದ ವಶಪಡಿಕೊಳ್ಳಲಾಗಿದೆ.

ಆರೋಪಿಗಳನ್ನು ಗಂಗಪ್ಪ ರಾಜು ಸಿಕ್ಕಲಗಾರ, ದುಂಡಪ್ಪ ಕಲ್ಲಪ್ಪ ಭಜಂತ್ರಿ,ಅಶೋಕ ನನಿಸಾಬ ಸಿಕ್ಕಲಗಾರ, ವೆಂಕಪ್ಪ ಲಚ್ಚಪ್ಪ ಮೆಟಗುಡ್ಡ, ಅನಿಲ ನಬಿಸಾಬ ಸಿಕ್ಕಲಗಾರ, ರವಿ ರಾಜು ಸಿಕ್ಕಲಗಾರ ಹಾಗೂ ದಿಲೀಪ ಬಾಪು ಸಿಕ್ಕಲಗಾರ ಎಂದು ಗುರುತಿಸಲಾಗಿದೆ ಎಂದು ಡಿವೈಎಸ್ಪಿ ಆರ್‌.ಕೆ.ಪಾಟೀಲ ತಿಳಿಸಿದ್ದಾರೆ.

ಸಿಪಿಐ ಕರೆಯಪ್ಪ ಬನ್ನೆ, ಎಸ್‌ಐ ಶ್ರೀಶೈಲ್‌ ಬ್ಯಾಕೂಡ್‌ ಮಾರ್ಗದರ್ಶನ ಹಾಗೂ ಕ್ರೈಂ ಎಸ್‌ಐ ಆರ್‌.ಎಸ್‌.ದೊಡಮನಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿ.ವಿ.ಸಾಲಗುಂದಿ, ಆರ್‌.ಬಿ.ಕಟಗೇರಿ, ಎಚ್‌.ಕೆ.ಇಂಡಿಕರ, ಎಸ್‌.ಎಂ.ಬಡಿಗೇರ, ಪಿ.ಎಸ್‌.ವಾಲಿಕರ, ಡಿ.ಎಂ.ಅತ್ರಾವತ್‌, ಎಂ.ಎನ್‌.ಮಾಂಗ ಕಾರ್ಯಾಚರನೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಾಲಸರ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ನವೀನ ಹಳೆಯದು