ಡಾ.ನಾಯಿಕ ಸೇರಿದಂತೆ ಸನ್ಮಾನಿತಗೊಂಡ ವೈದ್ಯರನ್ನುದ್ದೇಶಿಸಿ ಮಾತನಾಡಿದ ಸುರೇಶಕುಮಾರ ರಾಜ್ಯದಲ್ಲಿ ಕೆಲವು ವೈದ್ಯರು ರೋಗಿಗಳ ಸೇವೆಯಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದಾರೆ. ಇಂತಹ ಮಾದರಿ ವೈದ್ಯರನ್ನು ಸನ್ಮಾನಿಸಲು ಅಭಿಮಾನ ಎನಿಸುತ್ತಿದೆಂದು ಹೇಳಿ ಪ್ರತಿಯೊಬ್ಬ ವೈದ್ಯನಲ್ಲಿ ಮಾನವಿಯ ಗುಣಗಳು ಅವಶ್ಯವಾಗಿರಬೇಕು. ರೋಗಿಗಳ ಸೇವೆ ದೇವರ ಸೇವೆ ಅಂತಾ ತಿಳಿದು ವೈದ್ಯರು ಸೇವೆ ಮಾಡಬೇಕೆಂದು ಹೇಳಿದರು.
ಐ.ಎಂ.ಎ. ರಾಜ್ಯ ಅಧ್ಯಕ್ಷ ಡಾ.ಅನ್ನದಾನಿ, ಸೇರಿದಂತೆ ರಾಜ್ಯ ಹಾಗೂ ಎಲ್ಲ ಜಿಲ್ಲೆಯ ಐ.ಎಂ.ಎ.ಪದಾಧಿಕಾರಿಗಳು ಸರ್ವ ಸದಸ್ಯರು ವೈದ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.