ಕುಂದುಕೊರತೆಗಳ ನಿವಾರಣೆಗಾಗಿ ತಾಲೂಕಿನಲ್ಲಿ ನಾಳೆ ‘ವಿದ್ಯುತ್ ಅದಾಲತ್’ ನಡೆಸಲಿರುವ ಹೆಸ್ಕಾಂ


ಮುಧೋಳ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜ.21ರಂದು ಬೆಳಿಗ್ಗೆ 11 ಗಂಟೆಯಿಂದ ವಿವಿಧ ಮಟ್ಟದ ಹೆಸ್ಕಾಂ ವೃತ್ತ ವ್ಯಾಪ್ತಿಗೆ ಬರುವ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಬಾಗಲಕೋಟೆ ತಾಲೂಕಿನ ಭಗವತಿ, ಚಿಕ್ಕಶೆಲ್ಲಿಕೇರಿ, ಮಾಸ್ತಿಹಾಳ, ಬಾದಾಮಿ ತಾಲೂಕಿನ ಗೋವಿನಕಿ, ನೀಲಗುಂದ, ಅನಂತಗಿರಿ, 

ಇಲಕಲ್ಲ ತಾಲೂಕಿನ ತೊಂಡಿಹಾಳ, 

ಹುನಗುಂದ ತಾಲೂಕಿನ ಚಿಕನಾಳ, ನಾಗೂರ, ಗಂಗೂರ, 

ಗುಳೇದಗುಡ್ಡ ತಾಲೂಕಿನ ಹಿರೇಬೂದಿ ಹಾಳ, ಕರಡಿಗುಡ್ಡ ಎಸ್.ಎ, 

ಮುಧೋಳ ತಾಲೂಕಿನ ಹಲಗಲಿ, ಹೆಬ್ಬಾಳ, ಮಳಲಿ, ತಿಮ್ಮಾಪೂರ, 

ಬೀಳಗಿ ತಾಲೂಕಿನ ಗುಂಡನಪಲ್ಲೇ, ಕು೦ದರಗಿ, 

ಜಮಖಂಡಿ ತಾಲೂಕಿನ ಶೂರಪಾಲಿ, ರಹಿಮತಪೂರ, ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ, ಹಳಿ೦ಗಳಿ, ಹಿಪ್ಪರಗಿ

ಮೇಲಿನ ಗ್ರಾಮಗಳಲ್ಲಿ ವಿದ್ಯುತ್‌ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಕ್ಕೆ ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ವಿದ್ಯುತ್ ಗ್ರಾಹಕರು, ರೈತರು ಹಾಗೂ ಗ್ರಾಮಸ್ಥರು ಹಾಜರಾಗಿ ವಿದ್ಯುತಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ನವೀನ ಹಳೆಯದು